Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಾಳೆ ದೆಹಲಿಯಲ್ಲಿ ನೂತನ ಕರ್ನಾಟಕ ಭವನ ಉದ್ಘಾಟನೆ – 138 ಕೋಟಿ ವೆಚ್ಚದಲ್ಲಿ ನಿರ್ಮಾಣ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ನಾಳೆ ದೆಹಲಿಯಲ್ಲಿ ನೂತನ ಕರ್ನಾಟಕ ಭವನ ಉದ್ಘಾಟನೆ – 138 ಕೋಟಿ ವೆಚ್ಚದಲ್ಲಿ ನಿರ್ಮಾಣ

Karnataka

ನಾಳೆ ದೆಹಲಿಯಲ್ಲಿ ನೂತನ ಕರ್ನಾಟಕ ಭವನ ಉದ್ಘಾಟನೆ – 138 ಕೋಟಿ ವೆಚ್ಚದಲ್ಲಿ ನಿರ್ಮಾಣ

Public TV
Last updated: April 1, 2025 12:31 pm
Public TV
Share
3 Min Read
Delhi Karnataka Bhavana
SHARE

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi) ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ನೂತನ ಕರ್ನಾಟಕ ಭವನ(ಕಾವೇರಿ)  ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭವು ಬುಧವಾರ ಸಂಜೆ 6:30ಕ್ಕೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಭವ್ಯ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಘನ ಉಪಸ್ಥಿತಿ ವಹಿಸಿದ್ದಲಿದ್ದು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿಸಿಎಂ ಡಿ.ಕೆ.ಶಿವಕುಮಾರ್, ಗೌರವ ಆಹ್ವಾನಿತರಾಗಿ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಅವರನ್ನ ಆಹ್ವಾನಿಸಲಾಗಿದೆ. ಇದನ್ನೂ ಓದಿ: ಜಾರ್ಖಂಡ್‌ | ಗೂಡ್ಸ್ ರೈಲುಗಳ ನಡುವೆ ಡಿಕ್ಕಿ – ಇಬ್ಬರು ಲೋಕೋ ಪೈಲಟ್‌ ಸೇರಿ 3 ಸಾವು

ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ನಿರ್ಮಲಾ ಸೀತರಾಮನ್ ಅವರಿನ್ನೂ ಆಹ್ವಾನಿಸಿದೆ. ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಪ್ರಕಾಶ್ ಹುಕ್ಕೇರಿ ಕೂಡಾ ಭಾಗಿಯಾಗಲಿದ್ದಾರೆ.

ಕರ್ನಾಟಕ ಭವನದ ವಿಶೇಷತೆಗಳು

ದೆಹಲಿಯ ಪ್ರತಿಷ್ಠಿತ ಪ್ರದೇಶವಾದ ಚಾಣಕ್ಯಪುರಿಯಲ್ಲಿ (Chanakyapuri) ನಿರ್ಮಾಣವಾಗಿರುವ ಈ ಕಟ್ಟಡವು 3,532 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಒಟ್ಟು 12,212 ಚದರ ಮೀಟರ್ (1,31,450 ಚದರ ಅಡಿ) ನಿರ್ಮಾಣ ಪ್ರದೇಶವನ್ನು ಒಳಗೊಂಡಿರುವ ಈ ಭವನವು 2ಬಿ+ಜಿ+6ಯು ರಚನೆಯಲ್ಲಿ 9 ಅಂತಸ್ತುಗಳನ್ನು ಹೊಂದಿದೆ.

ಈ ಕಟ್ಟಡದಲ್ಲಿ ಒಟ್ಟು 52 ಕೊಠಡಿಗಳಿದ್ದು, ಅದರಲ್ಲಿ 2 ವಿವಿಐಪಿ ಸೂಟ್‌ಗಳು, 32 ಸೂಟ್ ರೂಂಗಳು ಮತ್ತು 18 ಸಿಂಗಲ್ ರೂಂಗಳು ಸೇರಿವೆ. ಇದರ ಜೊತೆಗೆ 86 ಶೌಚಾಲಯಗಳು ಮತ್ತು ಬೇಸ್‌ಮೆಂಟ್‌ನಲ್ಲಿ 10 ಕಾರ್ ಪಾರ್ಕಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಯೋಜನೆಯು 2018ರಲ್ಲಿ ಆರಂಭವಾಗಿದ್ದು, ಇದಕ್ಕಾಗಿ 81.00 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ ಕಾಮಗಾರಿ ಅಂತ್ಯದ ವೇಳೆಗೆ ಯೋಜನೆಯ ವೆಚ್ಚ 138 ಕೋಟಿ ರೂ. ತಲುಪಿದೆ. ಇದನ್ನೂ ಓದಿ: ಇಂದಿನಿಂದ ಹಾಲಿನ ದರ ಏರಿಕೆ – ಬೆಳಗ್ಗೆ ಸಪ್ಲೈ ಆದ ಹಾಲಿನಲ್ಲಿ ಪರಿಷ್ಕೃತ ದರ ಜಾರಿ ಆಗಿಲ್ಲ

ಕಟ್ಟಡದ ಒಟ್ಟು 10 ಮಹಡಿಗಳಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ:

ಕೆಳಗಿನ ಬೇಸ್‌ಮೆಂಟ್ (2335 ಚ.ಮೀ.): ಲಿಫ್ಟ್ ಲಾಬಿ, ಸ್ಟೇರ್‌ಕೇಸ್, ಡ್ರೈವರ್ ಲಾಂಡ್ರಿ, ಸೆಕ್ಯುರಿಟಿ ರೂಂ, ಬಿಎಂಎಸ್ ರೂಂ, 50 ಕಾರ್ ಪಾರ್ಕಿಂಗ್ ಸ್ಥಳವಿದೆ.

ಮೇಲಿನ ಬೇಸ್‌ಮೆಂಟ್ (2335 ಚ.ಮೀ.): ಸ್ಟೇರ್‌ಕೇಸ್, ಸ್ಟಾಫ್ ರೂಂ, 24 ಕಾರ್ ಪಾರ್ಕಿಂಗ್ ಸ್ಥಳ, ಸ್ಟಾಫ್ ರೆಸ್ಟ್ ರೂಂ ಇದೆ. ಇದನ್ನೂ ಓದಿ: ಮತ್ತೆ ಪ್ರಭಾಸ್‌ಗೆ ಜೊತೆಯಾದ ಬಾಲಿವುಡ್ ಬ್ಯೂಟಿ ದಿಶಾ ಪಟಾನಿ

ಗ್ರೌಂಡ್ ಫ್ಲೋರ್ (1050 ಚ.ಮೀ.): ರಿಸೆಪ್ಷನ್, ವೇಟಿಂಗ್ ರೂಂ, ಬೋರ್ಡ್ ರೂಂ, ಪ್ಯಾಂಟ್ರಿ, ಮೀಡಿಯಾ ಬ್ರೀಫಿಂಗ್, ವಿಐಪಿ ಲಾಂಜ್, ಟಾಯ್ಲೆಟ್, ಫೈರ್ ಕಂಟ್ರೋಲ್ ರೂಂ, ಟೂರಿಸಂ ಇನ್ಫೊ ಡೆಸ್ಕ್, ಸೆಕ್ಯುರಿಟಿ ರೂಂ ಇದೆ.

ಮೊದಲನೇ ಮಹಡಿ (1005 ಚ.ಮೀ.): ಆರ್‌ಸಿ ಚೇಂಬರ್, ಡಿಆರ್‌ಸಿ, ಪಿಎ ರೂಂ, ಸ್ಟಾಫ್ ರೂಂ, ಆಡಳಿತಾತ್ಮಕ ದಾಖಲೆ ಕೊಠಡಿ, ಸರ್ವರ್ ರೂಂ, ಪ್ಯಾಂಟ್ರಿ, ಲಿಯಾಸನ್ ಆಫೀಸರ್ ರೂಂ, ಕಾನ್ಫರೆನ್ಸ್ ರೂಂ ಇದೆ.

ಎರಡನೇ ಮಹಡಿ (1050 ಚ.ಮೀ.): 3 ಸೂಟ್ ರೂಂಗಳು, 4 ಸಿಂಗಲ್ ರೂಂಗಳು, ಎಡ್ ಸ್ಪೆಷಲ್ ರಿಪ್ರೆಸೆಂಟೇಟಿವ್, ಪಿಎ ರೂಂ, ಲೀಗಲ್ ರೆಕಾರ್ಡ್ ರೂಂ ಇದೆ.

ಮೂರನೇ ಮಹಡಿ (1050 ಚ.ಮೀ.): 8 ಸೂಟ್ ರೂಂಗಳು, 3 ಸಿಂಗಲ್ ರೂಂಗಳು, ಜಿಮ್, ಪ್ಯಾಂಟ್ರಿ. ನಾಲ್ಕನೇ ಮಹಡಿ (1050 ಚ.ಮೀ.): 9 ಸೂಟ್ ರೂಂಗಳು, ಪ್ಯಾಂಟ್ರಿ, ಹೌಸ್‌ಕೀಪಿಂಗ್ ಇದೆ. ಇದನ್ನೂ ಓದಿ: ಇಂದಿನಿಂದ ವಾಹನ ಸವಾರರಿಗೆ ಟೋಲ್ ಬಿಸಿ – ಶೇ.5ರಷ್ಟು ದರ ಏರಿಕೆ

ಐದನೇ ಮಹಡಿ (1050 ಚ.ಮೀ.): 6 ಸೂಟ್ ರೂಂಗಳು, 4 ಸಿಂಗಲ್ ರೂಂಗಳು, ಪ್ಯಾಂಟ್ರಿ, ಹೌಸ್‌ಕೀಪಿಂಗ್ ಇದೆ.

ಆರನೇ ಮಹಡಿ (1050 ಚ.ಮೀ.): 6 ಸೂಟ್ ರೂಂಗಳು, 3 ಸಿಂಗಲ್ ರೂಂಗಳು, ಪ್ಯಾಂಟ್ರಿ, ಹೌಸ್‌ಕೀಪಿಂಗ್ ಇದೆ.

ಏಳನೇ ಮಹಡಿ (237.00 ಚ.ಮೀ.): ಟೆರೇಸ್, ಸ್ಟೇರ್‌ಕೇಸ್ ರೂಂ, ಸೌರ ಶಕ್ತಿ ಘಟಕಗಳನ್ನು ಹೊಂದಿದೆ. ಇದನ್ನೂ ಓದಿ: ಹೊಸತೊಡಕು ಗಮ್ಮತ್ತು – ಕೆಜಿ ಮಟನ್‌ಗೆ 900 ರೂ.

ಕರ್ನಾಟಕ ಭವನ (ಕಾವೇರಿ) ದೆಹಲಿಗೆ ಭೇಟಿ ನೀಡುವ ಕರ್ನಾಟಕದ ಸರ್ಕಾರಿ ಅಧಿಕಾರಿಗಳು, ಗಣ್ಯರು ಮತ್ತು ಸಾರ್ವಜನಿಕರಿಗೆ ಆರಾಮದಾಯಕ ಆತಿಥ್ಯ ಸೌಲಭ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಈ ಭವನವು ಕರ್ನಾಟಕದ ಸಂಸ್ಕೃತಿ, ಪರಂಪರೆ ಮತ್ತು ಆತಿಥ್ಯವನ್ನು ಪ್ರತಿಬಿಂಬಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳು, ಸಭೆ-ಸಮಾರಂಭಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದು ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.

TAGGED:chanakyapuricongresskarnataka bhavananewdelhiಕರ್ನಾಟಕ ಭವನಕಾಂಗ್ರೆಸ್ಚಾಣಕ್ಯಪುರಿನವದೆಹಲಿ
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ನಮ್ಮದು ‘ವಿರೋಶ್‌’ ಜೋಡಿ, ಮದುವೆಗೆ ಬನ್ನಿ..: ಆಮಂತ್ರಣ ನೀಡಿದ ರಶ್ಮಿಕಾ ಮಂದಣ್ಣ
Cinema Latest Top Stories
Ranveer Singh Rishab Shetty Kantara
ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್
Bollywood Cinema Latest Top Stories
rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories
Kavya Gowfa 2
ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ
Cinema Latest Sandalwood Top Stories

You Might Also Like

BJP Leader Sukhbir Singh Jaunapuria
Latest

‘ನೀವು ಮೋದಿಯನ್ನು ನಿಂದಿಸುತ್ತೀರಿ..’: ಮುಸ್ಲಿಂ ಮಹಿಳೆಗೆ ಕಂಬಳಿ ಕೊಡಲು ನಿರಾಕರಿಸಿದ ಬಿಜೆಪಿ ನಾಯಕ

Public TV
By Public TV
17 minutes ago
Weather
Bagalkot

ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ತಾಪಮಾನ ವರದಿ – ಹವಾಮಾನ ಇಲಾಖೆ ಎಚ್ಚರಿಕೆ

Public TV
By Public TV
36 minutes ago
T20 Team India
Cricket

Semifinal Scenario | ಪವಾಡವೇ ನಡೆಯಬೇಕು – ಭಾರತದ ಸೆಮಿಸ್‌ ಹಾದಿ ತುಂಬಾ ಕಠಿಣ

Public TV
By Public TV
39 minutes ago
Hassan Accident Priya
Crime

ಹೆಲ್ಮೆಟ್ ಧರಿಸದೇ ಬುಲೆಟ್‌ನಲ್ಲಿ ಜಾಲಿ ರೈಡ್ – ಹಂಪ್ಸ್‌ ಕಾಣದೇ ರಸ್ತೆಗೆ ಬಿದ್ದು ಯುವತಿ ಸಾವು

Public TV
By Public TV
1 hour ago
Cyber Crime
Bengaluru City

ಸ್ನೇಹಿತನ ಅಕೌಂಟ್ ಬಳಸಿ ಸೈಬರ್ ವಂಚನೆ – ಬರೋಬ್ಬರಿ 7 ಕೋಟಿ ವರ್ಗಾವಣೆ

Public TV
By Public TV
1 hour ago
g parameshwara 2
Bengaluru City

ಸಿದ್ದರಾಮಯ್ಯರ ರಾಜಕೀಯ ಅಡಿಪಾಯವೇ ಸಾಮಾಜಿಕ ನ್ಯಾಯ: ಪರಮೇಶ್ವರ್‌ ಬ್ಯಾಟಿಂಗ್‌

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?