ಹೊಸ ಎಸಿ, ಹೊಸ ಮಂಚ, ಹೊಸ ಟಾಯ್ಲೆಟ್- ರಾಹುಲ್ ಗಾಂಧಿ ಮೆಚ್ಚಿಸಲು ಸಚಿವರ ಸರ್ಕಸ್

Public TV
1 Min Read
rahul gandhi kpl

ಕೊಪ್ಪಳ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಜಿಲ್ಲೆಯ ಪ್ರವಾಸಿ ಮಂದಿರವನ್ನ ನವೀಕರಣ ಮಾಡಿಸುತ್ತಿದ್ದು ಸರ್ಕಾರದ ಹಣ ಪೋಲು ಮಾಡಲಾಗ್ತಿದೆ ಅನ್ನೋ ಆರೋಪ ಕೇಳಿಬಂದಿದೆ.

rahul gandhi karnataka 2

ಫೆ. 10 ರಂದು ಕೊಪ್ಪಳದ ಕುಕನೂರಿನ ಪ್ರವಾಸಿ ಮಂದಿರದಲ್ಲಿ ರಾಹುಲ್ ಗಾಂಧಿ ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದಷ್ಟೇ ಹೊಸದಾಗಿ ಲೋಕಾರ್ಪಣೆಗೊಂಡಿದ್ದ ಪ್ರವಾಸಿ ಮಂದಿರದಲ್ಲಿ ಹಾಕಲಾಗಿದ್ದ ಉಪಕರಣಗಳನ್ನು ತೆಗೆದು ಹಾಕಿ ಮತ್ತೆ ಹೊಸ ಎಸಿ, ಹೊಸ ಮಂಚ ಹಾಕಿದ್ದು, ಹೊಸ ಟಾಯ್ಲೆಟ್ ನಿರ್ಮಿಸಲಾಗ್ತಿದೆ. ಇದಕ್ಕಾಗಿಯೇ 25 ಲಕ್ಷ ರೂಪಾಯಿ ಖರ್ಚು ಮಾಡಲಾಗ್ತಿದೆ.

kpl 7

 

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ತಮ್ಮ ನಾಯಕ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಇಷ್ಟೆಲ್ಲಾ ಕಸರತ್ತು ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.

basavaraj rayareddy 3

ಸಿಎಂ ಹಾಗೂ ಸಂಪುಟ ದರ್ಜೆಯ ಸಚಿವರ ಆಗಮನದ ಹಿನ್ನೆಲೆಯಲ್ಲಿ ಸಹ ಎಲ್ಲಾ ರೂಂಗಳಲ್ಲಿ ಎಸಿ ಅಳವಡಿಕೆ ಮಾಡಿ ಸಚಿವರು ದುಂದು ವೆಚ್ಚ ಮಾಡ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

kpl 10

kpl 9

kpl 11

kpl 2

kpl 3

kpl 4

kpl 8

kpl 1

kpl 6

kpl 5

Share This Article
Leave a Comment

Leave a Reply

Your email address will not be published. Required fields are marked *