ನೆಲಮಂಗಲ: ರಾಷ್ಟ್ರೀಯ ಕಿಸಾನ್ ಸಂಘದ ರೈತರು ಸುದ್ದಿಗೋಷ್ಠಿಯಲ್ಲಿ ಅಧಿಕಾರಿಗಳ ವರ್ತನೆಗೆ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಅಮಾನಿಕೆರೆ ಬಿನ್ನಮಂಗಲ ಮಲ್ಲಾಪುರ ಕೆರೆ ಸೇರಿದಂತೆ ತಾಲೂಕಿನ ಕೆರೆ ಅಭಿವೃದ್ಧಿ ಮಾಡದೆ ಕುಂಠಿತವಾಗಿವೆ.
ಈ ಕೆರೆಗಳಿಗೆ ಪಟ್ಟಣದಿಂದ ರಾಜಕಾಲುವೆ ಮೂಲಕ ಮಲಮೂತ್ರದ ತ್ಯಾಜ್ಯವನ್ನು ನೇರವಾಗಿ ಹರಿಸಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ನಾನಾ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತಿದ್ದು, ಅಂತರ್ಜಲ ಮಟ್ಟಕೂಡ ಕಲುಷಿತವಾಗುತ್ತಿದೆ.
ಈ ಬಗ್ಗೆ ಸಾಕಷ್ಟು ಬಾರಿ ಆಯಾ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಯಾರೊಬ್ಬರೂ ಗಮನ ಹರಿಸದೇ ನಿರ್ಲಕ್ಷಿಸಿದ್ದಾರೆ. ಇತ್ತ ಕೆಲ ಪ್ರಭಾವಿಗಳು ಕೆರೆ ಕುಂಟೆ ಸೇರಿದಂತೆ ರಾಜಕಾಲುವೆಗಳನ್ನ ಒತ್ತುವರಿ ಮಾಡಿದ್ದು ಕೂಡಲೇ ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಸಾಕಷ್ಟು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಮುಂದಿನ ದಿನದಲ್ಲಿ ಹೋರಾಟದ ಎಚ್ಚರಿಕೆಯನ್ನ ರೈತ ಮುಖಂಡರು ನೀಡಿದ್ದು, ಕೆರೆ ಅಭಿವೃದ್ಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ರಮಗಳು ನಡೆದಿದ್ದು ಎಲ್ಲವನ್ನು ತನಿಖೆ ನಡೆಸುವಂತೆ ರೈತರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.