ಬೆಂಗಳೂರು: ಚಂದನವನದ ನವರಸ ನಾಯಕ ಜಗ್ಗೇಶ್ ದಿ.ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆಗೆ ಕಾಲ ಕಳೆದ ಕೊನೆಯ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಚಂದನವನದ ಅಪ್ಪು ಅಗಲಿ 4 ತಿಂಗಳು ಆಗುತ್ತಿದ್ರೂ ಕನ್ನಡಿಗರ ಮನಸ್ಸಿನಲ್ಲಿ ಅವರು ಎಂದೂ ಅಮರರಾಗಿರುತ್ತಾರೆ. ಅಪ್ಪುಗೆ ಜಗ್ಗೇಶ್ ಬಹಳ ಆಪ್ತ. ಅಪ್ಪು ಅವರೊಂದಿಗೆ ಜಗ್ಗೇಶ್ ಮಧುರ ಕ್ಷಣಗಳನ್ನು ಕಳೆದಿದ್ದಾರೆ. ಅಪ್ಪು ಅವರನ್ನು ಕಳೆದುಕೊಂಡಗಿನಿಂದ ಜಗ್ಗೇಶ್ ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಜೊತೆಗೆ ಕಾಲ ಕಳೆದ ಫೋಟೋ, ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದನ್ನೂ ಓದಿ: ಕೊನೆಗೂ ನಮ್ಮ ಕನಸು ನನಸಾಗಿದೆ: ಆಲಿಯಾ ಹೀಗೆಂದಿದ್ದೇಕೆ?
View this post on Instagram
ಅದೇ ರೀತಿ ಜಗ್ಗೇಶ್ ಇಂದು ಸಹ ಅಪ್ಪು ಜೊತೆ ಕಾಲ ಕಳೆದ ವಿಶೇಷ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಮಂತ್ರಾಲಯದಲ್ಲಿ 2021ರ ಏಪ್ರಿಲ್ 5ರ ಸೋಮವಾರ ಪುನೀತನ ಜೊತೆಯ ಕೊನೆಯ ಕ್ಷಣ. ಕರೆದು ಕೂರಿಸಿಕೊಂಡದ್ದು ಸಂತೋಷ ಆನಂದರಾಮನನ್ನು. ಈ ಅಪರೂಪದ ವೀಡಿಯೋ ಕಳಿಸಿದ ಮಂತ್ರಾಲಯ ಪ್ರೋ.ನರಸಿಂಹಾಚಾರ್ಯ ರವರಿಗೆ ಧನ್ಯವಾದ. ಪುನೀತ ಅಲ್ಲಿಯೇ ರಾಯರ ಜೊತೆ ಉಳಿದುಬಿಟ್ಟ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ವೀಡಿಯೋದಲ್ಲಿ ಶ್ರೀ ಅವರ ಮುಂದೆ ಜಗ್ಗೇಶ್ ಕುಳಿತುಕೊಂಡಿರುತ್ತಾರೆ. ಅಲ್ಲೇ ಇದ್ದ ಅಪ್ಪು ಮೊದಲು ಶ್ರೀ ಮುಂದೆ ನಿಂತುಕೊಂಡಿದ್ದು, ನಂತರ ಜಗ್ಗೇಶ್ ಅವರು ಹೇಳಿದಂತೆ ಅವರ ಮುಂದೆ ಕುಳಿತುಕೊಳ್ಳುತ್ತಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಅಪ್ಪು ‘ವಿ ಮಿಸ್ ಯು’ ಎಂದು ಬರೆದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಬೈಪಾಸ್ ಶಸ್ತ್ರಚಿಕಿತ್ಸೆಯಿಂದ ಗುಣಮುಖ- ಹಿತೈಷಿಗಳಿಗೆ ಸುನಿಲ್ ಧನ್ಯವಾದ
ಇನ್ನೊಬ್ಬ ಅಭಿಮಾನಿ, ಈ ನೆನಪುಗಳನ್ನು ಅಳಿಸಲು ನಿಮಗೆ ತುಂಬಾ ಕಷ್ಟವಾಗುತ್ತದೆ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಸರ್. ದೇವರು ಅವರಿಗೆ ಒಂದು ಅವಕಾಶ ನೀಡಬೇಕಿತ್ತು. ಟೆಕ್ ಕೇರ್ ಜಗ್ಗೇಶ್ ಸರ್ ಎಂದು ಕಾಮೆಂಟ್ ಮಾಡಿದ್ದಾರೆ. ಜಗ್ಗೇಶ್ ಅವರು ಪ್ರಸ್ತುತ ‘ರಾಘವೇಂದ್ರಸ್ಟೋರ್ಸ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.