ಮೈಸೂರು: ಕರ್ತವ್ಯ ನಿಯೋಜನೆ ವಿಚಾರದಲ್ಲಿ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ಮತ್ತು ಚಾಲಕನ ನಡುವೆ ವಾಗ್ವಾದ ನಡೆದ ವೀಡಿಯೋ ವೈರಲ್ ಆಗಿದೆ.
ಮೈಸೂರು ಜಿಲ್ಲೆಯ ಕೆ.ಆರ್ ನಗರದ ಕೆಎಸ್ಆರ್ ಟಿಸಿ ಡಿಪೋ ಮ್ಯಾನೇಜರ್ ಪಾಪನಾಯಕ್ ಮತ್ತು ಚಾಲಕ ಶರಣಬಸಯ್ಯ ಎಂಬವವರಿಗೆ ಕರ್ತವ್ಯ ನಿಯೋಜನೆ ವಿಚಾರದಲ್ಲಿ ಧಮ್ಕಿ ಹಾಕಿದ್ದಾರೆ. ಕರ್ತವ್ಯ ನಿಯೋಜನೆ ವಿಚಾರದಲ್ಲಿ ಡಿಪೋ ವ್ಯವಸ್ಥಾಪಕ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಚಾಲಕ ಆರೋಪಿಸಿದ್ದಾರೆ. ವೈರಲ್ ಆಗಿರೋ ವೀಡಿಯೋದಲ್ಲಿ ವ್ಯವಸ್ಥಾಪಕರು, ಚಾಲಕನಿಗೆ ನಿನಗೆ ನಾನು ಹೊಡೆಯಲ್ಲಾ ಬೇರೆಯವರು ಹೊಡೆಯುತ್ತಾರೆ ಎಂದು ಧಮ್ಕಿ ಹಾಕಿ ಡೀಪೋ ದಿಂದ ಹೊರಗೆ ದಬ್ಬುತ್ತಿರುವುದು ದೃಶ್ಯಗಳಿವೆ.
ನನಗೆ ಏನಾದ್ರೂ ಆದರೆ ಪಾಪನಾಯಕ್ ಹೊಣೆಗಾರರು ಎಂದು ಶರಣಬಸಯ್ಯ ಹೇಳಿರೋದು ವಿಡಿಯೋದಲ್ಲಿ ಸೆರೆಯಾಗಿದೆ. ಬೇರೆಯವರ ಜೊತೆ ಮಾತನಾಡಿದಂತೆ ನನ್ನೊಂದಿಗೆ ವರ್ತಿಸಿದ್ರೆ ಒದೆ ತಿನ್ನುತ್ತಿಯಾ? ಆತನನ್ನು ಕರ್ತವ್ಯಕ್ಕೆ ನಿಯೋಜಿಸಬೇಡಿ. ಸುಮ್ಮನೆ (..) ಮುಚ್ಚಕೊಂಡು ಹೋಗಬೇಕು. ಸಸ್ಪೆಂಡ್ ಆಗಬೇಕಾ ಎಂದು ಅವಾಜ್ ಹಾಕಲಾಗಿದೆ.
ಬೇರೆ ಡೀಪೋದಿಂದ ವರ್ಗವಾಗಿ ಇಲ್ಲಿಗೆ ಬಂದಿರೋ ಶರಣಬಸವಯ್ಯ ತಮ್ಮ ಮಾವನ ಸಾವಿನ ಕಾರಣ ಎರಡು ದಿನ ಅನಧಿಕೃತವಾಗಿ ರಜೆ ತೆಗೆದುಕೊಂಡ ಕಾರಣ ವ್ಯವಸ್ಥಾಪಕ ಹೀಗೆ ಕಿರುಕುಳ ಕೊಡ್ತಿದ್ದಾರೆ. ಅಲ್ಲದೆ ಹಣಕ್ಕಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಚಾಲಕ ಆರೋಪಿದ್ದಾರೆ.