Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸರ್ಕಾರಿ ಶಾಲೆಯಲ್ಲಿ ಓದಿ ನನ್ನ ಮಗ ವಿಜ್ಞಾನಿಯಾಗಿದ್ದಾನೆ: ವಿಜ್ಞಾನಿ ಮಹದೇಶ್ ತಾಯಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಸರ್ಕಾರಿ ಶಾಲೆಯಲ್ಲಿ ಓದಿ ನನ್ನ ಮಗ ವಿಜ್ಞಾನಿಯಾಗಿದ್ದಾನೆ: ವಿಜ್ಞಾನಿ ಮಹದೇಶ್ ತಾಯಿ

Districts

ಸರ್ಕಾರಿ ಶಾಲೆಯಲ್ಲಿ ಓದಿ ನನ್ನ ಮಗ ವಿಜ್ಞಾನಿಯಾಗಿದ್ದಾನೆ: ವಿಜ್ಞಾನಿ ಮಹದೇಶ್ ತಾಯಿ

Public TV
Last updated: March 16, 2020 12:29 pm
Public TV
Share
3 Min Read
mahadesh mother
SHARE

– ನನ್ನ ಮಗ ದೇಶ ಸೇವೆಯಲ್ಲ, ವಿಶ್ವಸೇವೆ ಮಾಡ್ತಿದ್ದಾನೆ
– ಎರಡು ತಿಂಗಳಿನಿಂದ ಕೊರೊನಾಗೆ ವಾಕ್ಸಿನ್ ಸಂಶೋಧನೆ

ಮೈಸೂರು: ಕೊರೊನಾ ವೈರಸ್‍ಗೆ ಔಷಧ ಕಂಡು ಹಿಡಿಯಲು ಯುರೋಪಿಯನ್ ರಾಷ್ಟ್ರಗಳು ನೇಮಿಸಿದ ತಂಡದಲ್ಲಿ ಕನ್ನಡಿಗ ಡಾ. ಮಹದೇಶ್ ಪ್ರಸಾದ್ ಅವರಿಗೆ ಸ್ಥಾನ ಸಿಕ್ಕಿದ್ದು ತಾಯಿ ಸಂತಸಗೊಂಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಹದೇಶ್ ಪ್ರಸಾದ್ ಅವರ ತಾಯಿ ರತ್ನಮ್ಮ, ನನ್ನ ಮಗ ಕೊರೊನಾಗೆ ಔಷಧ ಕಂಡು ಹಿಡಿಯುವ ತಂಡದಲ್ಲಿ ಸ್ಥಾನ ಪಡೆದಿರುವುದು ನನಗೆ ಖುಷಿಯಿದೆ ಹಾಗೂ ತುಂಬಾ ಹೆಮ್ಮೆ ಇದೆ. ನಾವು ಮೂಲತಃ ಹಾಸನದ ಅರಕಲಗೂಡಿನವರಾಗಿದ್ದು, ನನ್ನ ಮಗ ಸರ್ಕಾರಿ ಶಾಲೆಯಲ್ಲಿ ಎಲ್ಲಾ ಹಂತದ ಶಿಕ್ಷಣವನ್ನು ಮುಗಿಸಿದ್ದಾನೆ. ಬಿಎಸ್‍ಸಿ ಹಾಸನದ ಸರ್ಕಾರಿ ಕಾಲೇಜಿನಲ್ಲಿ ಓದಿದ್ದಾನೆ. ಎಂಎಸ್‍ಸಿ ಹಾಗೂ ಪಿಎಚ್‍ಡಿ ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡಿದ್ದಾನೆ ಎಂದರು. ಇದನ್ನೂ ಓದಿ: ಕೊರೊನಾ ವೈರಸ್‍ಗೆ ವಾಕ್ಸಿನ್ ಕಂಡು ಹಿಡಿಯುವ ತಂಡದಲ್ಲಿ ಕನ್ನಡಿಗ

 MYS CORONA MEDICIN DOCTOR 2 e1584341052230

ಮಹದೇಶ್ ಈಗ ಯೂರೋಪ್‍ನ ಬೆಲ್ಜಿಯಂ ದೇಶದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಕೊರೊನಾಗೆ ವಾಕ್ಸಿನ್ ಕಂಡು ಹಿಡಿಯುವ ತಂಡದಲ್ಲಿ ಸ್ಥಾನ ಪಡೆದಿದ್ದೇನೆ ಎಂದು ಹೇಳಿದ್ದನು. ಅಲ್ಲದೆ ಎರಡು ತಿಂಗಳಿನಿಂದ ನಾನು ಕೊರೊನಾ ವಾಕ್ಸಿನ್ ಸಂಶೋಧನೆ ಮಾಡುತ್ತಿದ್ದೇನೆ ಎಂದು ಹೇಳಿದ್ದನು. ಆಗ ನಾನು ತುಂಬಾ ಸಂತೋಷಗೊಂಡು, ಮುಂದುವರಿಸು ಎಂದು ಹೇಳಿದ್ದೆ. ಎರಡು ತಿಂಗಳ ಹಿಂದೆಯಷ್ಟೇ ಮಹದೇಶ್ ಭಾರತಕ್ಕೆ ಬಂದಿದ್ದನು. ಈ ವೇಳೆ ತಂಡದಲ್ಲಿ ಕೆಲಸ ಮಾಡುತ್ತೇನೆ ಅಂತ ಹೇಳಿದ್ದನು ಎಂದು ಮಹದೇಶ್ ತಾಯಿ ಹೇಳಿದರು.

mahadesh prasad corona scientist

ನನ್ನ ಮಗ ಕೊರೊನಾಗೆ ಔಷಧಿ ಕಂಡು ಹಿಡಿಯುವ ತಂಡದಲ್ಲಿ ಕೆಲಸ ಮಾಡುತ್ತಿರುವುದರಿಂದ ನನಗೆ ಆತಂಕ ಇಲ್ಲ. ಈಗಾಗಲೇ ಕೊರೊನಾ ವೈರಸ್ ಇಡೀ ವಿಶ್ವದಲ್ಲಿ 5 ಸಾವಿರ ಜನರನ್ನು ಬಲಿ ಪಡೆದುಕೊಂಡಿದೆ. ಅಂತಹದರಲ್ಲಿ ನನ್ನ ಮಗ ಔಷಧಿ ಕಂಡು ಹಿಡಿದರೆ ಎಷ್ಟೋ ಜನರ ಪ್ರಾಣ ಉಳಿಯುತ್ತೆ ಎಂಬ ಖುಷಿ ಹಾಗೂ ಹೆಮ್ಮೆ ನನಗಿದೆ. ನನ್ನ ಮಗ ಔಷಧಿ ಕಂಡು ಹಿಡಿದು ಕೋಟ್ಯಂತರ ಜನರಿಗೆ ಉಪಯೋಗ ಆಗಲಿ ಎಂಬುದು ನಮ್ಮ ಆಶಯ ಎಂದರು.

hsn mahadesh 1 e1584337105430

ಮಹದೇಶ್ ಪಿಎಚ್‍ಡಿ ಮುಗಿದ ಮೇಲೆ ಜರ್ಮನಿಯಲ್ಲಿ ಹಲವು ವರ್ಷಗಳ ಕಾಲ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ್ದಾನೆ. ಆದಾದ ಬಳಿಕ ಯುಎಸ್‍ಎ, ಸ್ವೀಡನ್‍ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾನೆ. ಇದೀಗ ಬೆಲ್ಜಿಯಂನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾನೆ. ನನಗೆ ದಿನಕ್ಕೆ ಎರಡು ಬಾರಿ ಕರೆ ಮಾಡುತ್ತಾನೆ. ಈ ವೇಳೆ ವ್ಯಾಕ್ಸಿನ್ ಕಂಡು ಹಿಡಿಯಲು ತುಂಬಾ ಶ್ರಮಪಡುತ್ತಿದ್ದೇವೆ. ಔಷಧಿ ಕಂಡು ಹಿಡಿದೇ ಹಿಡಿಯುತ್ತೇವೆ ಎಂದು ಹೇಳುತ್ತಾನೆ ಎಂದು ತಿಳಿಸಿದರು.

hsn mahadesh 2

ನನ್ನ ಮಗ ಆರೋಗ್ಯವಾಗಿದ್ದು, ಆತನ ಪತ್ನಿ ಹಾಗೂ ಮಗು ಅಲ್ಲಿಯೇ ವಾಸಿಸುತ್ತಿದ್ದಾರೆ. ಅವರು ಕೂಡ ಆರೋಗ್ಯವಾಗಿದ್ದು, ನನಗೆ ಯಾವುದೇ ಆತಂಕವಿಲ್ಲ. ನನ್ನ ಮಗ ದೇಶ ಸೇವೆಯಲ್ಲ, ಇಡೀ ವಿಶ್ವ ಸೇವೆ ಮಾಡುತ್ತಿದ್ದಾನೆ. ಇದರಿಂದ ನನಗೆ ತುಂಬಾ ಹೆಮ್ಮೆ ಇದೆ. ನಮಗೆ ಖಂಡಿತ ಯಾವುದೇ ಸ್ವಾರ್ಥ ಇಲ್ಲ. ನಮ್ಮ ಮಕ್ಕಳು ದೇಶ ಸೇವೆ ಮಾಡಬೇಕೆಂದು ಚಿಕ್ಕ ವಯಸ್ಸಿನಿಂದಲೂ ಅವರಿಗೆ ಹೇಳಿಕೊಟ್ಟಿದ್ದೆವು. ನನ್ನ ಮಕ್ಕಳು ವಿಜ್ಞಾನಿಗಳಾಗಬೇಕು ಎಂದು ನಾನು ಬಯಸಿದ್ದೆ. ಹಾಗೆಯೇ ನನ್ನ ಇಬ್ಬರು ಮಕ್ಕಳು ವಿಜ್ಞಾನಿಗಳಾಗಿದ್ದಾರೆ. ನನ್ನ ಕಿರಿಯ ಮಗ ಯೂರೋಪ್‍ನ ಫಿನ್‍ಲ್ಯಾಂಡ್‍ನಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ನಾನು ನನ್ನ ಮಗನಿಗೆ ಈ ಸಂಶೋಧನೆಯನ್ನು ಮುಂದುವರಿಸು ಎಂದು ಹೇಳುತ್ತೇನೆ. ಇಡೀ ವಿಶ್ವಕ್ಕೆ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್‍ಗೆ ಔಷಧಿ ಕಂಡು ಹಿಡಿದು ಅದನ್ನು ನಿರ್ಮೂಲನೆ ಮಾಡು ಎಂದು ನಾನು ನನ್ನ ಮಗನಿಗೆ ಹೇಳುತ್ತೇನೆ ಎಂದು ಮಹದೇಶ್ ಪ್ರಸಾದ್ ಅವರ ತಾಯಿ ಹೇಳಿದರು.

TAGGED:Corona Virusmahadesh prasadmothermysuruPublic TVscientistvaccineಕೊರೊನಾ ವೈರಸ್ತಾಯಿಪಬ್ಲಿಕ್ ಟಿವಿಮಹದೇಶ್ ಪ್ರಸಾದ್ಮೈಸೂರುವಿಜ್ಞಾನಿವ್ಯಾಕ್ಸಿನ್
Share This Article
Facebook Whatsapp Whatsapp Telegram

Cinema news

sudeep vijayalakshmi
ಸುದೀಪ್ ಮಾತಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟಕ್ಕರ್
Cinema Latest Sandalwood Top Stories
rajath Chaitra
ಕಂಟೆಸ್ಟೆಂಟ್‌ಗಳಲ್ಲ.. ಅತಿಥಿಗಳು – ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್
Cinema Latest Sandalwood Top Stories
calendar movie
ಕ್ಯಾಲೆಂಡರ್ ಹೆಸರಿನಲ್ಲಿ ಬಂತು ಸಿನಿಮಾ: ಆದರ್ಶ್ ನಾಯಕ
Cinema Latest Sandalwood Top Stories
KGF
7ನೇ ವರ್ಷದ ಸಂಭ್ರಮದಲ್ಲಿ ಕೆಜಿಎಫ್ ಚಾಪ್ಟರ್-1
Cinema Latest Sandalwood Top Stories

You Might Also Like

Maharashtra Local Polls BJP
Latest

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷ; ಮಹಾಯುತಿ ಮೈತ್ರಿಗೆ ಭರ್ಜರಿ ಗೆಲುವು

Public TV
By Public TV
5 hours ago
MOHAN BHAGAWAT
Latest

ಬಿಜೆಪಿಗೆ ಆರ್‌ಎಸ್‌ಎಸ್ ಹೋಲಿಕೆ ಮಾಡುವುದು ತಪ್ಪು: ಮೋಹನ್ ಭಾಗವತ್

Public TV
By Public TV
6 hours ago
kollur temple accused arrest
Latest

ಉಡುಪಿ| ಕೊಲ್ಲೂರು ದೇಗುಲದ ಹೆಸರಲ್ಲಿ ನಕಲಿ ವೆಬ್‌ಸೈಟ್; ಭಕ್ತರ ವಂಚಿಸುತ್ತಿದ್ದ ಆರೋಪಿ ರಾಜಸ್ಥಾನದಲ್ಲಿ ಅಂದರ್‌

Public TV
By Public TV
6 hours ago
GBA
Bengaluru City

ಬೆಂಗಳೂರು| ಇ-ಖಾತಾ ಗೋಲ್ಮಾಲ್‌; ಜಿಬಿಎ ಅಧಿಕಾರಿಗಳೇ ಶಾಮೀಲು ಆರೋಪ

Public TV
By Public TV
6 hours ago
Kolakatta Lagnajita Chakraborty
Crime

ದೇವರ ಹಾಡು ಹಾಡಿದ್ದನ್ನು ಆಕ್ಷೇಪಿಸಿ ಗಾಯಕಿ ಲಗ್ನಜಿತಾ ಚಕ್ರವರ್ತಿಗೆ ಕಿರುಕುಳ – ಆರೋಪಿ ಅರೆಸ್ಟ್

Public TV
By Public TV
6 hours ago
pm modi assam
Latest

ನುಸುಳುಕೋರರಿಗೆ ಕಾಂಗ್ರೆಸ್ ರಕ್ಷಣೆ: ಮೋದಿ ವಾಗ್ದಾಳಿ

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?