ಬೆಂಗಳೂರು: ನಾನು ತೆಲುಗಿನವಳಲ್ಲ, ಕನ್ನಡದವಳು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕೆಲವು ಮಾಧ್ಯಮಗಳಲ್ಲಿ ನಾನು ತೆಲುಗಿನವಳು ಎಂದು ತೋರಿಸುತ್ತಿದ್ದಾರೆ. ಅದು ಸಿನಿಮಾ ವಿಚಾರದಲ್ಲಿ ಮಾತಾನಾಡಿರುವುದು. ನಾನು ಕನ್ನಡದವಳು. ನನಗೆ ತೆಲುಗು ಒಂದು ವರ್ಡ್ ಬರಲ್ಲ. ನಾನು ಮೂಲತಃ ಕೋಲಾರ, ಚಿಕ್ಕಬಳ್ಳಾಪುರದವಳು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಆಂಧ್ರ ಪ್ರದೇಶದ ಗಡಿಭಾಗದಲ್ಲಿ ಇರುವುದರ ಕಾರಣ ಅಲ್ಲಿ ತೆಲುಗಿನವರು ಇದ್ದಾರೆ. ಹಾಗಂತ ನಾನು ತೆಲುಗಿನವಳಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಶ್ರೀಕಂಠೇಗೌಡ ಸುಮಲತಾ ಬಗ್ಗೆ ಹೇಳಿಕೆ ಕೊಟ್ಟ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ನಾನು ಮಾತ್ರ ಕನ್ನಡದವಳು. ನನಗೂ ತೆಲುಗಿಗೂ ಸಂಬಂಧ ಇಲ್ಲ. ಅಲ್ಲಿ ಭಾಷೆ ಮಾತಾನಾಡಬಹುದು. ಕುಮಾರಸ್ವಾಮಿ ಸಿನಿಮಾ ವಿಚಾರದ ಬಗ್ಗೆ ಮಾತಾನಾಡುವಾಗ ಹೇಳಿರಬಹುದು. ಇದಕ್ಕೆ ರಾಜಕೀಯ ಬೆರೆಸಬೇಡಿ ಎಂದು ಅನಿತಾ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಯಡಿಯೂರಪ್ಪ ಅವರು ಮೂರು ನಾಲ್ಕು ದಿನ ಸಿಎಂ ಆಗಿ ಕುರ್ಚಿ ಕೈತಪ್ಪಿ ಹೋಗಿದ್ದರಿಂದ ತಬ್ಬಿಬ್ಬು ಆಗಿದ್ದಾರೆ. ಅದಕ್ಕೆ ಕೊನೆ ಕ್ಷಣದ ಯತ್ನ ಮಾಡುತ್ತಿದ್ದಾರೆ. ಇದೇ ವೇಳೆ ಬಜೆಟ್ ಬಗ್ಗೆ ಮಾತನಾಡಿದ ಅವರು ಬಜೆಟ್ ಚೆನ್ನಾಗಿ ಇರುತ್ತೆ. ಮಹಿಳೆ, ಯುವಕರ, ಬಡವರ ಪರ ಬಜೆಟ್ ಇರಲಿ ಎಂದು ಸಿಎಂಗೆ ಸಲಹೆ ಕೊಟ್ಟಿದ್ದೇನೆ ಎಂದು ನಗುತ್ತಾ ಅನಿತಾ ಅವರು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv