ಹೈದರಾಬಾದ್: ಮುಸ್ಲಿಮರು (Muslims) ಎಂದರೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ (Congress) ಎಂದರೆ ಮುಸ್ಲಿಮರು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ (Mohammad Azharuddin)ಅವರನ್ನು ಸಚಿವರನ್ನಾಗಿ ನೇಮಿಸಿದ್ದೇವೆ, ಮುಸ್ಲಿಂ ಸಹೋದರರಿಗೆ ಅವರ ಪಾಲನ್ನು ನೀಡಿದ್ದೇವೆ. ಇದರಿಂದ ಜಿ ಕಿಶನ್ ರೆಡ್ಡಿ (Kishan Reddy) ಏಕೆ ಅಸಮಾಧಾನಗೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಮುಂದುವರೆದು ಮಾತನಾಡಿದ ಅವರು, ನಾನು ಜಿ ಕಿಶನ್ ರೆಡ್ಡಿ ಅವರನ್ನು ಕೇಳಲು ಬಯಸುತ್ತೇನೆ, ನಾವು ನಿಮ್ಮ ತಂದೆಯ ಆಸ್ತಿಯನ್ನು ಅಥವಾ ಗುಜರಾತ್ನಲ್ಲಿ ನರೇಂದ್ರ ಮೋದಿಯವರ ಭೂಮಿಯನ್ನು ಕೇಳುತ್ತಿಲ್ಲ. ತೆಲಂಗಾಣ ರಾಜ್ಯದಲ್ಲಿ ನಮ್ಮ ಮುಸ್ಲಿಂ ಸಹೋದರರ ಪಾಲು, ಸಂಪುಟದಲ್ಲಿ ಅವರ ಪಾಲಿಗಾಗಿ ನಾವು ಮೊಹಮ್ಮದ್ ಅಜರುದ್ದೀನ್ ಅವರನ್ನು ಸಚಿವರನ್ನಾಗಿ ಮಾಡಿದ್ದೇವೆ. ಸಚಿವರನ್ನಾಗಿ ಮಾಡುವ ಮೂಲಕ, ನಾವು ಅವರಿಗೆ ಅಲ್ಪಸಂಖ್ಯಾತ ಪಾಲನ್ನು ನೀಡಿದ್ದೇವೆ ಎಂದರು. ಇದನ್ನೂ ಓದಿ: Bihar Election Phase 1 – 20 ವರ್ಷಗಳ ಬಳಿಕ ಶೇ.64.6ರಷ್ಟು ದಾಖಲೆಯ ಮತದಾನ
#WATCH | Hyderabad | Telangana Chief Minister Revanth Reddy says, “…We have appointed former cricketer Mohammad Azharuddin as a minister, giving the Muslim brothers their share. Why is G Kishan Reddy upset with this?… I want to ask G Kishan Reddy that we did not ask for your… pic.twitter.com/VzuuXxPajA
— ANI (@ANI) November 5, 2025
ಮುಸ್ಲಿಮರು ಎಂದರೆ ಕಾಂಗ್ರೆಸ್, ಮತ್ತು ಕಾಂಗ್ರೆಸ್ ಎಂದರೆ ಮುಸ್ಲಿಮರು. ಇಂದು, ಕಾಂಗ್ರೆಸ್ನ ಶಕ್ತಿ, ತೆಲಂಗಾಣ ಸರ್ಕಾರದ ಶಕ್ತಿ. ತೆಲಂಗಾಣ ಸರ್ಕಾರದ ಎರಡು ಕಣ್ಣುಗಳು ಮುಸ್ಲಿಮರು ಮತ್ತು ಹಿಂದೂಗಳು. ನಾವು ಇಬ್ಬರ ನಡುವೆ ಯಾವುದೇ ವ್ಯತ್ಯಾಸವನ್ನು ಎಂದಿಗೂ ನೋಡಿಲ್ಲ ಎಂದು ಹೇಳಿದರು.
ಬಿಜೆಪಿ ಟೀಕೆ
ರಾಜ್ಯ ಬಿಜೆಪಿ ಅಧ್ಯಕ್ಷ ಎನ್ ರಾಮಚಂದರ್ ರಾವ್ ಪ್ರತಿಕ್ರಿಯಿಸಿ, ಹೆಚ್ಚಿನ ಕೋಮು ಗಲಭೆಗಳು ಕಾಂಗ್ರೆಸ್ ಆಳ್ವಿಕೆಯಲ್ಲಿ ನಡೆದವು. ಕಾಂಗ್ರೆಸ್ ಎಂದರೆ ಮುಸ್ಲಿಮರು ಎಂದು ಅವರು ಹೇಗೆ ಹೇಳುತ್ತಾರೆ? ಇದು ಕೋಮು ಮತ್ತು ಆಕ್ಷೇಪಾರ್ಹ ಹೇಳಿಕೆ. ಅವರು ಮುಸ್ಲಿಂ ಮತಗಳನ್ನು ಮಾತ್ರ ಬಯಸುತ್ತಾರೆ ಮತ್ತು ಹಿಂದೂ ಮತದಾರರ ಬಗ್ಗೆ ಯೋಚಿಸುವುದಿಲ್ಲ ಎಂದು ಟೀಕಿಸಿದ್ದಾರೆ

