ನವದೆಹಲಿ: ದೆಹಲಿಯಲ್ಲಿ (Delhi) ಇತ್ತೀಚೆಗೆ ಪ್ರೇಯಸಿಯ ಕೊಲೆ (Murder) ಪ್ರಕರಣದಲ್ಲಿ ಬಂಧಿತನಾಗಿರುವ ಸಾಹಿಲ್ ಗೆಹ್ಲೋಟ್, ಕೊಲೆಗೂ ಮುನ್ನ ತನ್ನ ನಿಶ್ಚಿತಾರ್ಥದ ಸಮಾರಂಭದಲ್ಲಿ ಸ್ನೇಹಿತರೊಂದಿಗೆ ಸಂಭ್ರಮಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಿಕ್ಕಿ ಯಾದವ್ ಮೃತ ಯುವತಿ, ಆಕೆಯ ಮೃತದೇಹವು ಆರೋಪಿ ನಡೆಸುತ್ತಿದ್ದ ಡಾಬಾದ ಫ್ರೀಜರ್ನಲ್ಲಿ ಪತ್ತೆಯಾಗಿತ್ತು. ಮೃತಳ ದೇಹವನ್ನು ಫೆ. 14ರಂದು ವಶಪಡಿಸಿಕೊಂಡ ಮೇಲಷ್ಟೇ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ತುಪ್ಪದ ಹುಡುಗಿ ಹಾಟ್ ಹಾಟ್, ಪಡ್ಡೆಹುಡುಗರ ನಿದ್ದೆಗೆಡಿಸಿದ `ರಾ’ಗಿಣಿ
ಮದುವೆ ವಿಚಾರದಲ್ಲಿ ಗೊಂದಲದಲ್ಲಿದ್ದ ಗೆಹ್ಲೋಟ್, ಲಿವ್ ಇನ್ ಟುಗೆದರ್ನಲ್ಲಿದ್ದ (Live In Together) ನಿಕ್ಕಿ ಯಾದವ್ರನ್ನು ಮದುವೆ ಆಗುವುದೋ ಅಥವಾ ಕುಟುಂಬಸ್ಥರು ಗೊತ್ತುಪಡಿಸಿದ ಯುವತಿಯೊಂದಿಗೆ ಮದುವೆಯಾಗುವುದೋ ಎಂಬ ಗೊಂದಲದಲ್ಲಿದ್ದ. ಇದೇ ವಿಚಾರಕ್ಕೆ ಪ್ರೇಯಸಿಯೊಂದಿಗೆ ಗಲಾಟೆ ನಡೆದು ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಯು 15 ದಿನಗಳಿಂದ ಯುವತಿಯ ಮನೆ ತೊರೆದಿದ್ದ. ಫೆ.9 ರಂದು ನಿಶ್ಚಿತಾರ್ಥದ ದಿನ ಮರಳಿ ಬಂದಿದ್ದ. ಆ ದಿನ ರಾತ್ರಿ ಅಲ್ಲಿಯೇ ತಂಗಿದ್ದ ಎಂದಿದ್ದಾರೆ.
ನಿಕ್ಕಿ ಯಾದವ್ ಮದುವೆಗೂ ಮುನ್ನ ಗೆಹ್ಲೋಟ್ನೊಂದಿಗೆ ಪ್ರವಾಸ ಕೈಗೊಳ್ಳಲು ನಿರ್ಧರಿಸಿ ಗೋವಾಕ್ಕೆ ಟಿಕೆಟ್ ಬುಕ್ ಮಾಡಿದ್ದಳು. ಆದರೆ ಆರೋಪಿಯ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದಾಗ ಬುಕ್ ಆಗಿರಲಿಲ್ಲ. ಇದರಿಂದಾಗಿ ಹಿಮಾಚಲ ಪ್ರದೇಶಕ್ಕೆ ತೆರಳಲು ನಿರ್ಧರಿಸಿದ್ದರು. ಕಾರ್ನಲ್ಲಿ ನಿಜಾಮುದ್ದೀನ್ ರೈಲ್ವೇ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಆನಂದ್ ಬಸ್ ಟರ್ಮಿನಲ್ಗೆ ಹೋಗಲು ನಿರ್ಧರಿಸಿದರು. ಆದರೆ ಅಲ್ಲಿಗೆ ತಲುಪಿದಾಗ ಬಸ್ ಕಾಶ್ಮೀರ ಗೇಟ್ ನಿಂದ ತೆರಳುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ. ಮತ್ತೆ ವಾಪಾಸ್ ಕಾಶ್ಮೀರ ಗೇಟ್ಗೆ ತೆರಳುವಾಗ ಇಬ್ಬರ ನಡುವೆ ಮದುವೆ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಇಬ್ಬರಿಗೂ ಜಗಳ ನಡೆದು ಆರೋಪಿಯು ಮೊಬೈಲ್ ಕೇಬಲ್ನಿಂದ ನಿಕ್ಕಿಯ ಕತ್ತು ಬಿಗಿದು ಉಸಿರು ಕಟ್ಟಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಟುಂಬದ ಒತ್ತಡ ಹಾಗೂ ಪ್ರೇಯಸಿಯ ಒತ್ತಾಯದ ಗೊಂದಲದಲ್ಲಿದ್ದ ಆರೋಪಿ ಆಕೆಯೊಂದಿಗೆ ಸಂಬಂಧವನ್ನು ಕಡಿದುಕೊಳ್ಳಲು ನಿರ್ದರಿಸಿದ್ದ. ಪ್ರವಾಸಕ್ಕೆ ಬರುವುದಾಗಿ ತಿಳಿಸಿ ದಾರಿತಪ್ಪಿಸುವ ಯೋಜನೆ ಹಾಕಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣ್ ಹೇಳಿಕೆ ನಾನೂ ಒಪ್ಪಲ್ಲ, ಯಾವತ್ತೂ ಸಾವು ಬಯಸಬಾರದು – ಸಿ.ಟಿ ರವಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k