ಧೋನಿ ರಣಜಿ ಆಡುವುದು ಒಳ್ಳೆ ಚಿಂತನೆ ಅಲ್ಲ : ಜಾರ್ಖಂಡ್ ಕೋಚ್

Public TV
2 Min Read
MS DHONI 1

ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಆಸೀಸ್ ಟೂರ್ನಿಯಲ್ಲಿ ಭಾಗವಹಿಸದ ಕಾರಣ ರಣಜಿ ಪಂದ್ಯದಲ್ಲಿ ಆಡಬೇಕಿತ್ತು ಎಂದು ಟೀಕೆ ಮಾಡಿದ್ದ ವಿಶ್ಲೇಷಕರಿಗೆ ಜಾರ್ಖಂಡ್ ತಂಡಧ ಕೋಚ್ ಉತ್ತರಿಸಿದ್ದು, ಇದು ಯುವ ಕ್ರಿಕೆಟ್ ಆಟಗಾರರ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಕೋಚ್ ರಾಜೀವ್ ಕುಮಾರ್, ಧೋನಿ ರಣಜಿ ಕ್ರಿಕೆಟ್ ಆಡುವುದು ಒಳ್ಳೆಯ ಚಿಂತನೆ ಅಲ್ಲ. ಏಕೆಂದರೆ ಹಲವು ಯುವ ಆಟಗಾರರು ಪಂದ್ಯದಲ್ಲಿ ಆಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿ ಆಯ್ಕೆಗಾರರ ಗಮನ ಸೆಳೆಯಲು ಶ್ರಮಿಸುತ್ತಿದ್ದಾರೆ. ಆದರೆ ಧೋನಿ ಆಡುವುದರಿಂದ ಯುವ ಆಟಗಾರರ ಅವಕಾಶ ಕೈ ತಪ್ಪುತ್ತದೆ ಎಂದು ತಿಳಿಸಿದ್ದಾರೆ.

ಧೋನಿ ಯುವ ಆಟಗಾರರ ಬಗ್ಗೆ ಸಾಕಷ್ಟು ಆಸಕ್ತಿ ವಹಿಸಿದ್ದು ತರಬೇತಿ ವೇಳೆ ಹಲವು ಬಾರಿ ಹಾಜರಿದ್ದು, ಬ್ಯಾಟಿಂಗ್ ಸೇರಿದಂತೆ ಹಲವು ವಿಚಾರಗಳಲ್ಲಿ ಸಲಹೆ ನೀಡಿದ್ದಾರೆ. ಇದರಿಂದ ಆಟಗಾರರ ಪ್ರದರ್ಶನ ಶೈಲಿಯೇ ಬದಲಾಗಿದೆ. ಇದು ಆಟಗಾರರಿಗೆ ಮತ್ತಷ್ಟು ಸಹಕಾರಿ ಆಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

rishbh pant DHONI

ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್, ಧೋನಿ ಹಾಗೂ ಶಿಖರ್ ಧವನ್ ಆಸೀಸ್ ಟೂರ್ನಿಯಲ್ಲಿ ಭಾಗವಹಿಸದಿದ್ದರು ಯಾಕೆ ರಣಜಿ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದರು.

ಧೋನಿ ಆಸೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗಿರಲಿಲ್ಲ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಟೆಸ್ಟ್ ಟೂರ್ನಿ ಆಡಿಲ್ಲ. ಅಂದರೆ ಅಕ್ಟೋಬರ್ ನಿಂದ ಮುಂದಿನ ಜನವರಿ ವರೆಗೂ ಧೋನಿ ಟೀಂ ಇಂಡಿಯಾ ಪರ ಆಡಿಲ್ಲ. ಅದ್ದರಿಂದ ರಣಜಿ ಟೂರ್ನಿಯಲ್ಲಿ ಧೋನಿ ಭಾಗವಹಿಸಬೇಕಿತ್ತು. ಒಂದೊಮ್ಮೆ ಆಸೀಸ್ ಹಾಗೂ ಮುಂದಿನ ನ್ಯೂಜಿಲೆಂಡ್ ಸರಣಿಯಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡದಿದ್ದರೆ, ಮುಂದಿನ ವಿಶ್ವಕಪ್ ತಂಡಕ್ಕೆ ಧೋನಿ ಆಯ್ಕೆ ಮಾಡುವ ಪ್ರಶ್ನೆ ಉದ್ಭವಿಸುತ್ತದೆ. ಆಟದಲ್ಲಿ ಹೆಚ್ಚಿನ ಸಮಯ ವಿಶ್ರಾಂತಿ ತೆಗೆದುಕೊಳ್ಳುವುದು ಹೆಚ್ಚಿನ ಪರಿಣಾಮ ಉಂಟುಮಾಡುತ್ತದೆ ಎಂದು ಸುನೀಲ್ ಗವಾಸ್ಕರ್ ಹೇಳಿದ್ದರು.

ಉಳಿದಂತೆ ಜನವರಿ 12 ರಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಧೋನಿ ಭಾಗವಹಿಸಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *