ಕಾರು ಅಪಘಾತದಿಂದ ಸಂಸದ ರಮೇಶ್ ಜಿಗಜಿಣಗಿ ಪುತ್ರ ಪಾರು

Public TV
0 Min Read
Anand jigajinni A

ಕಾರವಾರ: ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ರಮೇಶ್ ಜಿಗಜಿಣಗಿ ಅವರ ಪುತ್ರ ಭಾರೀ ಅಪಘಾತದಿಂದ ಪಾರಾಗಿದ್ದಾರೆ.

ಆನಂದ್ ರಮೇಶ್ ಜಿಗಜಿಣಗಿ ಅವರು ಕಾರಿನಲ್ಲಿ ಇಂದು ಉಡುಪಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದರು. ಅಂಕೋಲದಿಂದ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ರ ಮಾರ್ಗವಾಗಿ ಹೋಗುತ್ತಿದ್ದಾಗ ಹಿಂದೆ ಬಂದ ಲಾರಿ ಚಾಲಕ ಕಾರಿಗೆ ಗುದ್ದಿದ್ದಾನೆ. ಅದೃಷ್ಟವಶಾತ್ ಆನಂದ್ ಜಿಗಜಿಣಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರಿನ ಬಲಗಡೆಯ ಭಾಗ ಜಖಂಗೊಂಡಿದೆ. ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

KWR Anand jigajinni

Share This Article
Leave a Comment

Leave a Reply

Your email address will not be published. Required fields are marked *