ಚಿತ್ರದುರ್ಗ: ನಟ ಕಿಚ್ಚ ಸುದೀಪ್ ಹಾಗೂ ಗಣಿದಣಿ ಜನಾರ್ದನ ರೆಡ್ಡಿ ವಿರುದ್ಧ ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಾಯಕನಟ್ಟಿಯಲ್ಲಿ ನಟ ಕಿಚ್ಚ ಸುದೀಪ್, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚನೆಗಾಗಿ ಆಗಮಿಸಿದ್ದಕ್ಕಾಗಿ ಆಕ್ರೋಶಗೊಂಡ ತಿಪ್ಪೇಸ್ವಾಮಿ, ಈ ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು. ನಾನು ಇವರಿಗಿಂತ ಮೊದಲೇ ಬಣ್ಣ ಹಚ್ಚಿದ ಕಲಾವಿದ. ಹೀಗಾಗಿ ಇವರೆಲ್ಲಾ ಬಂದು ಪ್ರಚಾರ ಮಾಡಿದರೆ ನಮ್ ಜನ ಮರಳಾಗಲ್ಲ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀ ರಾಮುಲು ಈ ಗೆಲ್ಲಲ್ಲ. ಅಂತ ಸುದೀಪ್ ವಿರುದ್ಧ ಕಿಡಿಕಾರಿದ್ದಾರೆ.
ಬಳ್ಳಾರಿಯವರ ಅಟ ಇಲ್ಲಿ ನಡೆಯಲ್ಲ. ಆ ಜನಾರ್ದನ ರೆಡ್ಡಿಗೆ ನಾಚಿಕೆಯಾಗಬೇಕು. ಅವರಿಗೆ ಬಿಜೆಪಿಯೊಂದಿಗೆ ಬರಬೇಡ ಅಂದರೂ ನಾಚಿಕೆ ಇಲ್ಲದೇ ಬರುತ್ತಾರೆ. ಕದ್ದು ಮುಚ್ಚಿ ಪ್ರಚಾರ ಮಾಡುತ್ತಾರೆ. ನಾಚಿಕೆಯಾಗಲ್ವಾ ಅವರಿಗೆ ಅಂತ ಪ್ರಶ್ನಿಸಿದ್ರು.
ತಿಪ್ಪೇಸ್ವಾಮಿ ಒಲವು ಸಿಎಂ ಸಿದ್ದರಾಮಯ್ಯ ಕಡೆ ವಾಲಿದ್ದೂ, ಬದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದೇ ಗೆಲ್ಲುತ್ತಾರೆ. ಶ್ರೀರಾಮುಲು ಸೋಲುತ್ತಾರೆ. ಆದರೆ ಬದಾಮಿಯಲ್ಲಿ ಪ್ರಚಾರ ಮಾಡಲ್ಲ ಅಂದಿದ್ದ ನಟ ಸುದೀಪ್, ಮೊಳಕಾಲ್ಮೂರು ಕ್ಷೇತ್ರಕ್ಕೆ ಯಾಕೆ ಬಂದ್ರು ಅಂತ ಕಿಡಿಕಾರಿದ್ದಾರೆ.
ಜೊತೆಗೆ ನಾವು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಸುದೀಪ್ ರೋಡ್ ಶೋ ವೇಳೆಯೇ ದೇಗುಲದ ಆವರಣದಲ್ಲಿ ಬಂಡಾಯ ಶಾಸಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದೂ, ಅವರ ಗುರುತಾದ ನೂರಾರು ಟ್ರಾಕ್ಟರ್ ಗಳಲ್ಲಿ ಅಪಾರ ಜನಸ್ತೋಮವನ್ನು ಸೇರಿಸಿ ಬಹಿರಂಗ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.