ನನ್ನ ಹತ್ಯೆಯನ್ನು ಮೋದಿಜೀ ಬಯಸುತ್ತಿದ್ದಾರೆ: ಅರವಿಂದ್ ಕೇಜ್ರಿವಾಲ್

Public TV
1 Min Read
Arvind Kejriwal 1

ನವದೆಹಲಿ: ನರೇಂದ್ರ ಮೋದಿಜೀ ಅವರು ನನ್ನನ್ನು ಕೊಲ್ಲಬೇಕು ಎಂದುಕೊಂಡಿದ್ದಾರೆ ಎಂದು ನವದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆ ಬಿಜೆಪಿ ನನ್ನನ್ನೂ ಕೊಲ್ಲಬಹುದು ಎಂದು ಶನಿವಾರ ಅರವಿಂದ್ ಕೇಜ್ರಿವಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕ ವಿಜಯ್ ಗೋಯಲ್, “ದೆಹಲಿ ಸಿಎಂಗೆ ತಮ್ಮ ಭದ್ರತಾ ಸಿಬ್ಬಂದಿ ಮೇಲೆ ನಂಬಿಕೆ ಇಲ್ಲದಿದ್ದರೆ ಅವರು ಸ್ವತಃ ತಮ್ಮ ರಕ್ಷಣಾ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳಲಿ” ಎಂದು ಟ್ವೀಟ್ ಮಾಡಿದ್ದರು.

ಅರವಿಂದ್ ಕೇಜ್ರಿವಾಲ್ ಅವರೇ ನೀವು ನಿಮ್ಮ ರಕ್ಷಣಾ ಸಿಬ್ಬಂದಿ ಮೇಲೆ ಅನುಮಾನಪಟ್ಟು ಇಡೀ ದೆಹಲಿ ಪೊಲೀಸರನ್ನು ಹಾಳು ಮಾಡಿದ್ದೀರಾ. ನಿಮಗೆ ಇಷ್ಟವಾದವರನ್ನೇ ರಕ್ಷಣಾ ಸಿಬ್ಬಂದಿ ಆಗಿ ಇಟ್ಟುಕೊಳ್ಳಿ. ನಿಮಗೆ ನನ್ನಿಂದ ಸಹಾಯವಾಗಬೇಕು ಎಂದು ಹೇಳಿ ಮಾಡುತ್ತೇವೆ. ನಾವು ನಿಮ್ಮ ಸುದೀರ್ಘ ಜೀವನವನ್ನು ಬಯಸುತ್ತೇವೆ ಎಂದು ವಿಜಯ್ ಗೋಯಲ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್‍ಗೆ ಅರವಿಂದ್ ಕೇಜ್ರಿವಾಲ್, ನನ್ನ ಹತ್ಯೆಯನ್ನು ರಕ್ಷಣಾ ಸಿಬ್ಬಂದಿ ಅಲ್ಲ, ಮೋದಿಜೀ ಅವರು ನನ್ನ ಹತ್ಯೆ ಮಾಡಬೇಕು ಎಂದು ಬಯಸುತ್ತಿದ್ದಾರೆ ಎಂದು ರೀ-ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಕೇಜ್ರಿವಾಲ್ ಹೇಳಿದ್ದೇನು?
ನಾನು ಹತ್ಯೆಯಾಗುತ್ತೇನೆ ಎಂಬ ಭಯ ಕಾಡುತ್ತಿದೆ. ನನ್ನ ವಾಹನದ ಹಿಂದೆ, ಮುಂದೆ ಸಾಗುತ್ತಿರುವ ಪೊಲೀಸ್ ಸಿಬ್ಬಂದಿ ನಮ್ಮ ಕಾರ್ಯ ಚಟುವಟಿಕೆಯ ಕುರಿತಾದ ವರದಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡುತ್ತಾರೆ. ಅಷ್ಟೇ ಅಲ್ಲದೆ ಅಂಗರಕ್ಷಕರೂ ಕೂಡ ಮೋದಿಗೆ ನನ್ನ ಎಲ್ಲ ಮಾಹಿತಿಯನ್ನು ನೀಡುತ್ತಾರೆ. ಈ ಮೂಲಕ ನನ್ನ ಜೀವನವು ಕೇವಲ ಎರಡೇ ನಿಮಿಷದಲ್ಲಿ ಮುಗಿದು ಹೋಗುತ್ತದೆ ಎಂದು ಆರೋಪಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *