Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನೂತನ ಸಚಿವರಿಗೆ ಯಾವ ಖಾತೆ? ಬದಲಾವಣೆಗೊಂಡ ಖಾತೆ ಯಾರಿಗೆ ಸಿಕ್ಕಿದೆ? ಇಲ್ಲಿದೆ ಪೂರ್ಣ ಮಾಹಿತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ನೂತನ ಸಚಿವರಿಗೆ ಯಾವ ಖಾತೆ? ಬದಲಾವಣೆಗೊಂಡ ಖಾತೆ ಯಾರಿಗೆ ಸಿಕ್ಕಿದೆ? ಇಲ್ಲಿದೆ ಪೂರ್ಣ ಮಾಹಿತಿ

Latest

ನೂತನ ಸಚಿವರಿಗೆ ಯಾವ ಖಾತೆ? ಬದಲಾವಣೆಗೊಂಡ ಖಾತೆ ಯಾರಿಗೆ ಸಿಕ್ಕಿದೆ? ಇಲ್ಲಿದೆ ಪೂರ್ಣ ಮಾಹಿತಿ

Public TV
Last updated: September 3, 2017 5:35 pm
Public TV
Share
6 Min Read
piyusg goyal suresh prabhu ananth kumar hegade
SHARE

ನವದೆಹಲಿ: ಪ್ರಧಾನಿ ಮೋದಿ ಸಂಪುಟ ಪುನಾರಚನೆ ಆಗಿದ್ದು, ರಕ್ಷಣೆಯ ಹೊಣೆ ನಿರ್ಮಲಾ ಸೀತಾರಾಮನ್ ಗೆ ಸಿಕ್ಕಿದರೆ, ಇಂದು ಪ್ರಮಾಣ ವಚನ ಸ್ವೀಕರಿಸಿದ 9 ಮಂದಿ ಸಚಿವರಿಗೆ ರಾಜ್ಯ ಖಾತೆ ಮತ್ತು ಸ್ವತಂತ್ರ ಖಾತೆಯನ್ನು ಮೋದಿ ಹಂಚಿದ್ದಾರೆ.

ರಾಜ್ಯ ಖಾತೆ:
ಕರ್ನಾಟಕದ ಅನಂತ್ ಕುಮಾರ್ ಹೆಗಡೆ ಅವರಿಗೆ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ರಾಜ್ಯ ಖಾತೆ ಸಿಕ್ಕಿದೆ. ಶಿವ ಪ್ರತಾಪ್ ಶುಕ್ಲಾ ಹಣಕಾಸು ಇಲಾಖೆ, ಅಶ್ವಿನಿ ಕುಮಾರ್ ಚೌಬೆ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಡಾ. ವೀರೇಂದ್ರ ಕುಮಾರ್ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಲ್ಪಸಂಖ್ಯಾತ ಖಾತೆ ಸಿಕ್ಕಿದೆ.

ಸತ್ಯಪಾಲ್ ಸಿಂಗ್ ಅವರಿಗೆ ಮಾನವ ಸಂಪನ್ಮೂಲ, ನೀರಾವರಿ, ಗಂಗಾ ನದಿ ಪುನಶ್ಚೇತನ ಖಾತೆ ಸಿಕ್ಕಿದರೆ, ಗಜೇಂದ್ರ ಸಿಂಗ್ ಶೇಖಾವತ್ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ಮೋದಿ ನೀಡಿದ್ದಾರೆ.

ಸ್ವತಂತ್ರ ಖಾತೆ:
ರಾಜ್ ಕುಮಾರ್ ಸಿಂಗ್ ಅವರಿಗೆ ಇಂಧನ(ಸ್ವತಂತ್ರ), ಹೊಸ ಮತ್ತು ನವೀಕರಿಸಬಹುದಾದ ಶಕ್ತಿ ಇಲಾಖೆ, ಹರ್‍ದೀಪ್ ಸಿಂಗ್ ಪುರಿಗೆ ವಸತಿ ಮತ್ತು ನಗರ ವ್ಯವಹಾರ(ಸ್ವತಂತ್ರ), ಅಲ್ಫನ್ಸೋ ಕಣ್ಣನ್ ದಾನಮ್ ಪ್ರವಾಸೋದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ(ಸ್ವತಂತ್ರ) ಖಾತೆ ಸಿಕ್ಕಿದೆ.

ಖಾತೆ ಬದಲಾವಣೆ
ಇಂಧನ ಸಚಿವರಾಗಿದ್ದ ಪಿಯೂಶ್ ಗೋಯಲ್ ಅವರಿಗೆ ರೈಲ್ವೇ ಖಾತೆ ಸಿಕ್ಕಿದ್ದು, ನಿರ್ಮಲಾ ಸೀತಾರಾಮನ್ ನೋಡಿಕೊಳ್ಳುತ್ತಿದ್ದ ವಾಣಿಜ್ಯ ವ್ಯವಹಾರ ಮತ್ತು ಕೈಗಾರಿಕಾ ಖಾತೆ ಸುರೇಶ್ ಪ್ರಭು ಅವರಿಗೆ ಸಿಕ್ಕಿದೆ. ರೈಲು ದುರಂತಗಳು ಸಂಭವಿಸಿದ ಹಿನ್ನೆಲೆಯಲ್ಲಿ ಸುರೇಶ್ ಪ್ರಭು ಈ ಖಾತೆಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಈ ವೇಳೆ ಮೋದಿ ಸ್ವಲ್ಪ ಕಾಯಿರಿ ಎಂದು ತಿಳಿಸಿದ್ದರು.

ಇಂದು ಕ್ಯಾಬಿನೆಟ್ ಸಚಿವರಾಗಿ ಭಡ್ತಿ ಪಡೆದ ಧರ್ಮೇಂದ್ರ ಪ್ರಧಾನ್ ಅವರಿಗೆ ಪೆಟ್ರೋಲಿಯಂ ಖಾತೆಯ ಜೊತೆಗೆ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಹೊಣೆಯನ್ನು ನೀಡಲಾಗಿದೆ. 2 ದಿನದ ಹಿಂದೆ ರಾಜೀವ್ ಪ್ರತಾಪ್ ರೂಡಿ ಈ ಖಾತೆಗೆ ರಾಜೀನಾಮೆ ಸಲ್ಲಿಸಿದ್ದರು.

ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವನ್ನು ನೋಡಿಕೊಳ್ಳುತ್ತಿದ್ದ ನಿತಿನ್ ಗಡ್ಕರಿ ಅವರಿಗೆ ಗಂಗಾ ನದಿ ಪುನಶ್ಚೇತನ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಈ ಇಲಾಖೆಯನ್ನು ನೋಡಿಕೊಳ್ಳುತ್ತಿದ್ದ ಉಮಾ ಭಾರತಿ ಅವರಿಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆಯನ್ನು ನೀಡಲಾಗಿದೆ.

ವಿಜಯ್ ಗೋಯಲ್ ನೋಡಿಕೊಳ್ಳುತ್ತಿದ್ದ ಕ್ರೀಡಾ ಸಚಿವಾಲಯ ಈಗ ರಾಜವರ್ಧನ್ ಸಿಂಗ್ ರಾಥೋಡ್‍ಗೆ ಸಿಕ್ಕಿದೆ. ಗೋಯಲ್ ಅವರು ಸಂಸದೀಯ ವ್ಯವಹಾರ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ರಾಜ್ಯ ಖಾತೆಯನ್ನು ಇನ್ನು ಮುಂದೆ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ಮೋದಿ ಸಂಪುಟ ಸೇರಿದ ಸಚಿವರ ಸಾಧನೆ ಏನು? ಇಷ್ಟೊಂದು ಮಹತ್ವ ಯಾಕೆ?

ನರೇಂದ್ರ ಮೋದಿ: ಪ್ರಧಾನ ಮಂತ್ರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ,  ಅಣು ಶಕ್ತಿ, ಬಾಹ್ಯಾಕಾಶ ಹಾಗೂ ಇತರ ಹಂಚಿಕೆಯಾಗದ ಖಾತೆಗಳು

ಸಂಪುಟ ದರ್ಜೆ ಸಚಿವರು:
1) ರಾಜನಾಥ್ ಸಿಂಗ್: ಗೃಹ
2) ನಿರ್ಮಲಾ ಸೀತಾರಾಮನ್: ರಕ್ಷಣಾ
3) ಸುಷ್ಮಾ ಸ್ವರಾಜ್: ವಿದೇಶ ವ್ಯವಹಾರಗಳ
4) ಅರುಣ್ ಜೇಟ್ಲಿ: ಹಣಕಾಸು ಕಾರ್ಪೊರೇಟ್ ವ್ಯವಹಾರಗಳ

5) ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ನದಿ ಪುನಶ್ಚೇತನ
6) ಸುರೇಶ್ ಪ್ರಭು: ವಾಣಿಜ್ಯ ಮತ್ತು ಉದ್ಯಮ
7) ಡಿ.ವಿ. ಸದಾನಂದಗೌಡ: ಅಂಕಿ ಅಂಶ ಮತ್ತು ಯೋಜನೆ ಅನುಷ್ಠಾನ
8) ಉಮಾ ಭಾರತಿ: ಕುಡಿಯುವ ನೀರು ಮತ್ತು ಒಳಚರಂಡಿ

9) ರಾಮ್ ವಿಲಾಸ್ ಪಾಸ್ವಾನ್: ಗ್ರಾಹಕ ವ್ಯವಹಾರ, ಆಹಾರ
10) ಮನೇಕಾ ಗಾಂಧಿ: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ
11) ಅನಂತಕುಮಾರ್: ರಾಸಾಯನಿಕ ಮತ್ತು ರಸಗೊಬ್ಬರ, ಸಂಸದೀಯ ವ್ಯವಹಾರ
12) ರವಿಶಂಕರ್ ಪ್ರಸಾದ್: ಕಾನೂನು ಮತ್ತು ನ್ಯಾಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ-ತಂತ್ರಜ್ಞಾನ

13) ಜೆ.ಪಿ.ನಡ್ಡಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
14) ಅಶೋಕ್ ಗಜಪತಿ ರಾಜು: ನಾಗರಿಕ ವಿಮಾನಯಾನ
15) ಅನಂತ್ ಗೀತೆ: ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
16) ಹರ್ ಸಿಮ್ರತ್ ಕೌರ್ ಬಾದಲ್: ಆಹಾರ ಸಂಸ್ಕರಣಾ, ಉದ್ಯಮ

17) ನರೇಂದ್ರ ಸಿಂಗ್ ತೋಮರ್: ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್, ಗಣಿಗಾರಿಕೆ
18) ಬಿರೇಂದರ್ ಸಿಂಗ್ ಚೌಧರಿ: ಉಕ್ಕು
19) ಜುವಾಲ್ ಓರಮ್: ಬುಡಕಟ್ಟು ವ್ಯವಹಾರ
20) ರಾಧಾಮೋಹನ್ ಸಿಂಗ್: ಕೃಷಿ ಮತ್ತು ರೈತರ ಕಲ್ಯಾಣ

21) ಸ್ಮೃತಿ ಇರಾನಿ: ಜವಳಿ ಖಾತೆ: ಮಾಹಿತಿ ಮತ್ತು ಪ್ರಸರಣ
22) ಡಾ. ಹರ್ಷ್ ವರ್ಧನ್: ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
23) ತಾವರ್ ಚಂದ್ ಗೆಹ್ಲೋಟ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
24) ಪ್ರಕಾಶ್ ಜಾವಡೇಕರ್: ಮಾನವ ಸಂಪನ್ಮೂಲ ಅಭಿವೃದ್ಧಿ

25) ಧರ್ಮೇಂದ್ರ ಪ್ರಧಾನ್: ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ , ಕೌಶಲ್ಯ ಅಭಿವೃದ್ಧಿ ಮತ್ತು ನವೋದ್ಯಮ
26) ಪೀಯುಶ್ ಗೋಯಲ್: ರೈಲ್ವೆ, ಕಲ್ಲಿದ್ದಲು
27) ಮುಕ್ತಾರ್ ಅಬ್ಬಾಸ್ ನಖ್ವಿ: ಅಲ್ಪಸಂಖ್ಯಾತ ವ್ಯವಹಾ

ರಾಜ್ಯ  ಸ್ವತಂತ್ರ ಖಾತೆ ಸಚಿವರು:
1) ಇಂದರ್ ಜೀತ್ ಸಿಂಗ್ ರಾವ್: ಯೋಜನಾ, ರಾಸಾಯನಿಕ ಮತ್ತು ರಸಗೊಬ್ಬರ
2) ಸಂತೋಷ್ ಕುಮಾರ್ ಗಂಗಾವರ್: ಕಾರ್ಮಿಕ ಮತ್ತು ಉದ್ಯೋಗ
3) ಶ್ರೀಪಾದ್ ನಾಯ್ಕ್: ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಶ್)
4) ಡಾ. ಜಿತೇಂದ್ರ ಸಿಂಗ್: ಈಶಾನ್ಯ ಪ್ರದೇಶ ಅಭಿವೃದ್ಧಿ, ಪ್ರಧಾನಿ ಕಚೇರಿ, ಸಿಬ್ಬಂದಿ, ಸಾರ್ಜನಿಕ ಕುಂದುಕೊರತೆ, ಪಿಂಚಣಿ, ಅಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ

5) ಡಾ. ಮಹೇಶ್ ಶರ್ಮಾ: ಸಂಸ್ಕೃತಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
6) ಗಿರಿರಾಜ್ ಸಿಂಗ್: ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ಯಮ
7) ಮನೋಜ್ ಸಿನ್ಹಾ: ಸಂವಹನ, ರೈಲ್ವೆ
8) ಕರ್ನಲ್ ರಾಜವರ್ಧನ್ ಸಿಂಗ್ ರಾಥೋಡ್: ಯುವ ವ್ಯವಹಾರಗಳು ಹಾಗೂ ಕ್ರೀಡೆ, ಮಾಹಿತಿ ಮತ್ತು ಪ್ರಸಾರ

9) ರಾಜ್ ಕುಮಾರ್ ಸಿಂಗ್: ವಿದ್ಯುತ್,ಹೊಸ ಮತ್ತು ಪುನರ್ ಬಳಕೆ ಇಂಧನ
10) ಹರದೀಪ್ ಸಿಂಗ್ ಪುರಿ: ವಸತಿ ಮತ್ತು ನಗರ ವ್ಯವಹಾರಗಳ
11) ಆಲ್ಫೋನ್ಸ್ ಕಣ್ಣಾಂಧಾನಂ: ಪ್ರವಾಸೋದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ

ರಾಜ್ಯ ಖಾತೆ ಸಚಿವರು:
1) ವಿಜಯ್ ಗೋಯಲ್: ಸಂಸದೀಯ ವ್ಯವಹಾರ, ಅಂಕಿ ಅಂಶ ಮತ್ತು ಯೋಜನೆ ಅನುಷ್ಠಾನ
2) ಪಿ.ರಾಧಾಕೃಷ್ಣನ್: ಹಣಕಾಸು, ಹಡಗು
3) ಎಸ್.ಎಸ್.ಅಹ್ಲುವಾಲಿಯಾ: ಕುಡಿಯುವ ನೀರು ಮತ್ತು ನೈರ್ಮಲ್ಯ
4) ರಮೇಶ್ ಜಿಗಜಿಣಗಿ: ಕುಡಿಯುವ ನೀರು ಮತ್ತು ನೈರ್ಮಲ್ಯ

5) ರಾಮದಾಸ್ ಅಟಾವಳೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
6) ವಿಷ್ಣು ದೇವೋ: ಉಕ್ಕು
7) ರಾಮ್ ಕೃಪಾಲ್ ಯಾದವ್: ಗ್ರಾಮೀಣಾಭಿವೃದ್ಧಿ
8) ಹನ್ಸ್ ರಾಜ್ ಗಂಗಾರಾಮ್ ಆಹಿರ್: ಗೃಹ ವ್ಯವಹಾರಗಳ

9) ಹರಿಭಾಯ್ ಚೌಧರಿ: ಗಣಿಗಾರಿಕೆ, ಕಲ್ಲಿದ್ದಲು
10) ರಾಜನ್ ಗೋಹೇನ್: ರೈಲ್ವೇ
11) ಜನರಲ್ ವಿ.ಕೆ.ಸಿಂಗ್: ವಿದೇಶ ವ್ಯವಹಾರಗಳ
12) ಪರುಷೋತ್ತಮ್ ರುಪಾಲಾ: ಕೃಷಿ ಮತ್ತು ರೈತರ ಕಲ್ಯಾಣ, ಪಂಚಾಯತ್ ರಾಜ್

13) ಕೃಷನ್ ಪಾಲ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ
14) ಜಸ್ವಂತ್’ಸಿನ್ಹ್ ಭಾಬೋರ್: ಬುಡಕಟ್ಟು ವ್ಯವಹಾರಗಳ
15) ಶಿವಪ್ರತಾಪ್ ಶುಕ್ಲಾ: ಹಣಕಾಸು
16) ಅಶ್ವಿನಿ ಕುಮಾರ್ ಚೌಬೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ

17) ಸುದರ್ಶನ್ ಭಗತ್: ಬುಡಕಟ್ಟು ವ್ಯವಹಾರಗಳ
18) ಉಪೇಂದ್ರ ಕುಶ್ವಾಹಾ: ಮಾನವ ಸಂಪನ್ಮೂಲ ಅಭಿವೃದ್ಧಿ
19) ಕಿರಣ್ ರಿಜಿಜು: ಗೃಹ ವ್ಯವಹಾರ
20) ಡಾ. ವಿರೇಂದ್ರ ಕುಮಾರ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಲ್ಪಸಂಖ್ಯಾತ ವ್ಯವಹಾರಗಳ

21) ಅನಂತಕುಮಾರ್ ಹೆಗಡೆ: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ
22) ಎಂ.ಜೆ.ಅಕ್ಬರ್: ವಿದೇಶ ವ್ಯವಹಾರಗಳ
23) ಸಾಧ್ವಿ ನಿರಂಜನ್ ಜ್ಯೋತಿ: ಆಹಾರ ಸಂಸ್ಕರಣ ಉದ್ಯಮಗಳ
24) ವೈ.ಎಸ್.ಚೌಧರಿ: ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ

25) ಜಯಂತ್ ಸಿನ್ಹಾ: ನಾಗರಿಕ ವಿಮಾನಯಾನ
26) ಬಾಬುಲ್ ಸುಪ್ರಿಯೋ: ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ
27) ವಿಜಯ್ ಸಾಂಪ್ಲಾ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
28) ಅರ್ಜುನ್ ರಾಮ್ ಮೇಘವಾಲ್: ಸಂಸದೀಯ ವ್ಯವಹಾರ, ಜಲಸಂಪನ್ಮೂಲ ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಯೋಜನೆ

29) ಅಜಯ್ ತಾಮಟ: ಜವಳಿ
30) ಕೃಷ್ಣ ರಾಜ್: ಕೃಷಿ ಮತ್ತು ರೈತರ ಕಲ್ಯಾಣ
31) ಮನ್’ಸುಖ್ ಮಾಂಡವಿಯಾ: ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು ಸಾಗಣೆ, ರಾಸಾಯನಿಕ ಮತ್ತು ರಸಗೊಬ್ಬರ
32) ಅನುಪ್ರಿಯಾ ಪಟೇಲ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ

33) ಸಿ.ಆರ್. ಚೌಧರಿ: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ವಾಣಿಜ್ಯ ಮತ್ತು ಉದ್ಯಮ
34) ಪಿ.ಪಿ.ಚೌಧರಿ: ಕಾನೂನು ಮತ್ತು ನ್ಯಾಯ, ಕಾರ್ಪೊರೇಟ್ ವ್ಯವಹಾರ
35) ಡಾ. ಸುಭಾಷ್ ರಾಮರಾವ್ ಭಾಮ್ರೆ: ರಕ್ಷಣಾ
36) ಗಜೇಂದ್ರ ಸಿಂಗ್ ಶೇಖಾವತ್: ಕೃಷಿ ಮತ್ತು ರೈತರ ಕಲ್ಯಾಣ
37) ಡಾ. ಸತ್ಯಪಾಲ್ ಸಿಂಗ್: ಮಾನವ ಸಂಪನ್ಮೂಲ ಅಭಿವೃದ್ಧಿ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಯೋಜನೆ

 

ananth kumar hegde

Ashwini Kumar

veerendra kumar

 

Shiv Pratap Shukla

raj kumr sing

hardip sing puri

Alphons Kannanthanam

#KnowYourMinister: Hardeep Singh Puri, MoS @HardeepSPuri #CabinetReshuffle pic.twitter.com/berAltrjrh

— PIB India (@PIB_India) September 3, 2017

#KnowYourMinister: Raj Kumar Singh, MoS #CabinetReshuffle pic.twitter.com/z1T3dTAkf2

— PIB India (@PIB_India) September 3, 2017

#PresidentKovind, Vice President @MVenkaiahNaidu and PM @narendramodi with the newly inducted ministers at @rashtrapatibhvn pic.twitter.com/K4T8ulu5c9

— PIB India (@PIB_India) September 3, 2017

#KnowYourMinister: Anantkumar Hegde, MoS @AnantkumarH #CabinetReshuffle pic.twitter.com/8x0Geao38l

— PIB India (@PIB_India) September 3, 2017

#KnowYourMinister: Dr. Virendra Kumar, MoS #CabinetReshuffle pic.twitter.com/ezInl0hnrN

— PIB India (@PIB_India) September 3, 2017

#KnowYourMinister: Ashwini Kumar Choubey, MoS #CabinetReshuffle pic.twitter.com/qPTZFG32qd

— PIB India (@PIB_India) September 3, 2017

#KnowYourMinister: Shiv Pratap Shukla, MoS @BJPShivPShukla pic.twitter.com/zwnYFTr0cb

— PIB India (@PIB_India) September 3, 2017

TAGGED:ananth kumar hegdebjpcabinet reshuffleministermodiಅನಂತ್ ಕುಮಾರ್ ಹೆಗಡೆಕೇಂದ್ರ ಸಚಿವ ಸಂಪುಟನರೇಂದ್ರ ಮೋದಿನಿತಿನ್ ಗಡ್ಕರಿನಿರ್ಮಲಾ ಸೀತಾರಾಮನ್
Share This Article
Facebook Whatsapp Whatsapp Telegram

Cinema news

Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories
lyari in pakistan dhurandhar
ಧುರಂಧರ್‌ ಸಿನಿಮಾದಲ್ಲಿ ನಮಗೆ 500 ಕೋಟಿ ಕೊಡಿ – ಹಿಟ್‌ ಬೆನ್ನಲ್ಲೇ ಪಾಲು ಕೇಳಿದ ಪಾಕ್‌
Cinema Latest Top Stories
Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories

You Might Also Like

income tax returns
Latest

ಆದಾಯ ತೆರಿಗೆ ಪದ್ದತಿಯಲ್ಲಿ ಏನು ಬದಲಾವಣೆ? ಇಲ್ಲಿದೆ ಪೂರ್ಣ ವಿವರ

Public TV
By Public TV
8 minutes ago
gajendra elephant
Bengaluru City

ಒಂಟಿಯಾಗಿದ್ದ 63 ವರ್ಷದ ಗಜೇಂದ್ರ ಆನೆ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರ

Public TV
By Public TV
15 minutes ago
AI Image
Bagalkot

ಹೆಚ್ಚಾದ ಬಿಸಿಲು – ಉ.ಕರ್ನಾಟಕದ 4 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯ ಬದಲಾವಣೆ

Public TV
By Public TV
23 minutes ago
g.parameshwara 2
Bengaluru City

ಗೃಹಸಚಿವ ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಪೋಸ್ಟ್‌ – ಸುಮೋಟೋ ಕೇಸ್ ದಾಖಲು

Public TV
By Public TV
47 minutes ago
FLY19
Bengaluru City

ಹುಬ್ಬಳ್ಳಿ-ಬೆಂಗಳೂರು-ಹೈದರಾಬಾದ್ ಮಧ್ಯೆ FLY19 ವಿಮಾನಯಾನ ಸೇವೆ ಶೀಘ್ರವೇ ಆರಂಭ

Public TV
By Public TV
58 minutes ago
rs 500
Latest

ನೀವು ಕ್ಯಾಶ್‌ನಲ್ಲಿ ವ್ಯವಹಾರ ಮಾಡ್ತೀರಾ? ಹಾಗಿದ್ರೆ ಹೊಸ ಬದಲಾವಣೆ ಓದಿ – ಇಲ್ದಿದ್ರೆ ಬೀಳುತ್ತೆ ಭಾರೀ ದಂಡ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?