ಬೆಳಗಾವಿ: ರಾಜ್ಯ ಪರಿಷತ್ ಚುನಾವಣೆಯ ಫೈಟ್ ಜೋರಾಗಿದೆ. ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಫ್ಯಾಮಿಲಿ ಹಾಗೂ ಜಾರಕಿಹೊಳಿ ಬ್ರದರ್ಸ್ ಆಪ್ತರ ನಡ್ವೆ ಟಿಕೆಟ್ ಹಗ್ಗಜಗ್ಗಾಟ ನಡೆಯುತ್ತಿದೆ. ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ದೆಹಲಿಗೆ ತೆರಳ್ತಿದ್ದಾರೆ.
ಅತ್ತ ಮಂಡ್ಯ ಬಿಜೆಪಿಯಲ್ಲಿ ಹಾಲಿ-ಮಾಜಿ ಸಿಎಂಗಳ ಆಪ್ತರ ಫೈಟ್ ಜೋರಾಗಿದೆ. ಬೊಮ್ಮಾಯಿ ಆಪ್ತ ಎಲೆಚಾಕನಹಳ್ಳಿ ಬಸವರಾಜು, ಬಿಎಸ್ವೈ ಸಂಬಂಧಿ ಬೂಕಳ್ಳಿ ಮಂಜುಗೆ ಟಿಕೆಟ್ ರೇಸ್ನಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟವಾಗುವ ಸಂಭವ ಇದೆ. ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಇಂದು ಅಥವಾ ನಾಳೆ ಪ್ರಕಟವಾಗಲಿದೆ. ಹಾಸನ ಕ್ಷೇತ್ರಕ್ಕೆ ಜೆಡಿಎಸ್ನಿಂದ ಸೂರಜ್ ರೇವಣ್ಣ ಅಭ್ಯರ್ಥಿ ಆಗೋದು ಬಹುತೇಕ ಖಚಿತ ಎನ್ನಲಾಗಿದೆ. ಇದನ್ನೂ ಓದಿ: ಚೀನಾ ಗಡಿ ಕ್ಯಾತೆ ನಡುವೆ ಭಾರತೀಯ ಸೇನೆಯಿಂದ ಆಪರೇಷನ್ ಹರ್ಕ್ಯುಲಸ್
ಬಿಜೆಪಿ ನಾಯಕರು ಇಂದಿನಿಂದ 4 ತಂಡಗಳ ಮೂಲಕ ರಾಜ್ಯ ಪ್ರವಾಸ ಕೈಗೊಳ್ತಿದ್ದಾರೆ. ಉತ್ತರ ಕನ್ನಡದಿಂದ ಯಡಿಯೂರಪ್ಪ, ದಾವಣಗೆರೆಯಿಂದ ಜಗದೀಶ್ ಶೆಟ್ಟರ್, ಕೊಪ್ಪಳದಿಂದ ನಳಿನ್ ಕುಮಾರ್ ಕಟೀಲ್, ಶಿವಮೊಗ್ಗದಿಂದ ಕೆ.ಎಸ್ ಈಶ್ವರಪ್ಪ ಜನಸ್ವರಾಜ್ ಯಾತ್ರೆ ನಡೆಸಲಿದ್ದಾರೆ.