ಏಯ್ ಶ್ರೀರಾಮುಲು.. ಯಾಕೆ ಸಿನಿಮಾ ಹೀರೋಗಳನ್ನು ಕರೆಸ್ತೀಯಾ?- ಶ್ರೀರಾಮುಲು, ಯಶ್ ವಿರುದ್ಧ ತಿಪ್ಪೇಸ್ವಾಮಿ ವಾಗ್ದಾಳಿ

Public TV
1 Min Read
SRIRAMULU YASH TIPPE

ಚಿತ್ರದುರ್ಗ: ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹಾಗೂ ನಟ ಯಶ್ ವಿರುದ್ಧ ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ನಾಯಕನಹಟ್ಟಿಯಲ್ಲಿ ಪ್ರಚಾರದ ವೇಳೆ ಮೊಳಕಾಲ್ಮೂರು ಕ್ಷೇತ್ರದಲ್ಲಿ ನಟ ಯಶ್ ಪ್ರಚಾರಕ್ಕೆ ಟೀಕೆ ಮಾಡಿದ ತಿಪ್ಪೇಸ್ವಾಮಿ, ಯಶ್ ನಟರಾಗುವ ಮುನ್ನವೇ ನಾನು ಬಣ್ಣ ಬಳಿದುಕೊಂಡು ನಾಟಕವಾಡಿದವನು. ಯಶ್ ಬಂದು ಓಟ್ ಕೇಳಿದ್ರೆ ರಾಮುಲುಗೆ ಇಲ್ಲಿ ಯಾರು ಓಟ್ ಹಾಕಲ್ಲ. ಏಯ್ ಶ್ರೀರಾಮುಲು ಯಾಕೆ ಸಿನಿಮಾ ಹೀರೋಗಳನ್ನು ಕರೆಸ್ತೀಯಾ.. ನಿನ್ನನ್ನು ಬಳ್ಳಾರಿಗೆ ಕಳುಹಿಸಲು ಇಲ್ಲಿನ ಜನ ತೀರ್ಮಾನಿಸಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಪರ ಮತಯಾಚನೆಗೆ ಮುಂದಾದ ಯಶ್

TIPPESWAMY

ಇಡೀ ಕ್ಷೇತ್ರದ ತುಂಬಾ ನನ್ನ ಕಲಾಭಿಮಾನಿಗಳು ಇದ್ದಾರೆ. ಬಣ್ಣ ಬಡಿದುಕೊಂಡು ಸ್ಟೇಜ್ ಗೆ ಹೋಗಿ ಮಾತು ಹೇಳುವವನು ನಿಜವಾದ ಕಲಾವಿದ. ಸಿನಿಮಾದವರು ನಡೆದುಕೊಂಡು ಬಂದ್ರೆ ಸರಿಯಾಗಿ ನಡೆಯಲು ಬರೋದಿಲ್ಲವೆಂದು ವಾಪಸ್ಸು ಕಳುಹಿಸುತ್ತಾರೆ. ಶ್ರೀರಾಮುಲು ಸುಮ್ಮನೇ ನಾಯಕ ನಟರನ್ನ ಯಾಕೇ ಕರೆಯಿಸುತ್ತೀಯಾ? ನಿನ್ನ ದುಡ್ಡಿಗಾಗಿ ಜನರು ಬರ್ತಾರೆ. ಮತಹಾಕಲು ಯಾರು ಬರೋದಿಲ್ಲ ಅಂತ ವ್ಯಂಗ್ಯವಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *