Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಶಾಸಕ ನಾರಾಯಣಗೌಡಗೆ 10 ಕೋಟಿ, ಶೀಘ್ರವೇ ಬಿಜೆಪಿಗೆ ಜಂಪ್: ಕಾಂಗ್ರೆಸ್ ನಾಯಕನ ಬಾಂಬ್

Public TV
Last updated: May 14, 2019 12:06 pm
Public TV
Share
3 Min Read
Narayanagowda Chandrashekhara copy
SHARE

– ನಾರಾಯಣಗೌಡ ಹುಟ್ಟೂ ಗೂಂಡಾ!
– ಕಾಂಗ್ರೆಸ್ ಋಣದಲ್ಲಿದೆ ಜೆಡಿಎಸ್ ಸರ್ಕಾರ

ಮಂಡ್ಯ: ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಬಿಜೆಪಿಯವರ ಬಳಿ ಈಗಾಗಲೇ ಹತ್ತು ಕೋಟಿ ಪಡೆದಿದ್ದು, ಮೇ 23ರ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಬಿಜೆಪಿಯವರು ನಾರಾಯಣಗೌಡನನ್ನು ಎಲ್ಲಿಗೆ ಎತ್ತಿಕೊಂಡು ಹೋಗುತ್ತಾರೋ ಗೊತ್ತಿಲ್ಲ ಎಂದು ಆಪರೇಷನ್ ಕಮಲದ ಬಗ್ಗೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಬಾಂಬ್ ಸಿಡಿಸಿದ್ದಾರೆ.

K B Chandrashekhar

ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಕೆ.ಬಿ.ಚಂದ್ರಶೇಖರ್, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ನಡೆಯುವ ಕೆಆರ್ ಪೇಟೆ ಪುರಸಭೆ ಚುನಾವಣೆಗೂ ಶಾಸಕ ನಾರಾಯಣಗೌಡ ಕ್ಷೇತ್ರದಲ್ಲಿ ಇರಲ್ಲ. ಲೋಕಸಭೆ ಚುನಾವಣೆ ಫಲಿತಾಂಶ ಬಂದ ತಕ್ಷಣ ಈತನನ್ನು ಬಿಜೆಪಿಯವರು ಎಲ್ಲಿಗೆ ಎತ್ತಿಕೊಂಡು ಹೋಗುತ್ತಾರೆ ಗೊತ್ತಿಲ್ಲ. ನನ್ನ ಬಾಕಿ ಕೊಡಿ ಮುಂಬೈಗೆ ಹೋಗುತ್ತೇನೆ ಎಂದು ಹೇಳಿದ್ದಾರಂತೆ. ಈ ಬಗ್ಗೆ ಜೆಡಿಎಸ್‍ನವರಿಗೂ ಗೊತ್ತಿದೆ ಎಂದು ತಿಳಿಸಿದರು.

ನಾರಾಯಣಗೌಡ ಕ್ರಿಮಿನಲ್: ಬಿಜೆಪಿ ಆಪರೇಷನ್ ಕಮಲಕ್ಕೆ ಈ ಹಿಂದೆ ಭಂಗ ಆಗಿತ್ತು. ಆಗ ಹಣವನ್ನು ನಾರಾಯಣಗೌಡರಿಗೆ ನೀಡಲಾಗಿತ್ತು. ಮಾತುಕತೆಯಂತೆ ಉಳಿದ ಹಣ ಕೊಟ್ಟರೆ ಮುಂಬೈಗೆ ಹೋಗುವುದಾಗಿ ನಾರಾಯಣಗೌಡ ಹೇಳುತ್ತಿದ್ದಾರಂತೆ. ಈ ಬಗ್ಗೆ ಬಿಜೆಪಿಯ ನನ್ನ ಸ್ನೇಹಿತರು ನನಗೆ ಹೇಳಿದರು. ಕೆಆರ್ ಪೇಟೆ ಜನರ ಮಾನ, ಮರ್ಯಾದೆಯನ್ನೆಲ್ಲ ಈತ ಹರಾಜು ಹಾಕಿಬಿಟ್ಟ. ನಾರಾಯಣಗೌಡ ಹುಟ್ಟು ಗೂಂಡ. ಅವನ ಚರಿತ್ರೆ ತಿಳಿಯಬೇಕು ಅಂದರೆ ನೀವು ಬಾಂಬೆಗೆ ಹೋಗಬೇಕು. ಒಂದಾ, ಎರಡಾ, ನೂರಾರು ಕೆಟ್ಟ ಕೆಲಸ ಮಾಡಿದ್ದಾನೆ. ಯಾರದೋ ಜಮೀನನ್ನು 999 ವರ್ಷಗಳಿಗೆ ನಾರಾಯಣಗೌಡ ಭೋಗ್ಯಕ್ಕೆ ಹಾಕಿಸಿಕೊಂಡಿದ್ದಾನೆ. ಇದನ್ನ ನೋಡಿದ್ರೆ ಆತ ಯಾವ ಮಟ್ಟದ ಕ್ರಿಮಿನಲ್ ಎಂದು ಲೆಕ್ಕ ಹಾಕಿ. ಇಂಥವನಿಗೆ ನಾನು ಉತ್ತರ ಕೊಡಬೇಕಾ..? ಕೆಆರ್ ಪೇಟೆಯಲ್ಲಿ ಗೂಂಡಾ ಆಡಳಿತ ಕೊನೆಯಾಗಬೇಕು ಎಂದು ಏಕವಚನದಲ್ಲಿಯೇ ಆಕ್ರೋಶ ಹೊರಹಾಕಿದರು.

Narayanagowda

ಇದೇ ವೇಳೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಸೋಲನುಭವಿಸಿದ ಮುಖಂಡರು ನಿಖಿಲ್ ಪರ ಪ್ರಚಾರ ಮಾಡದೇ ಇರಲು ನೂರಕ್ಕೆ ನೂರು ಮುಖ್ಯಮಂತ್ರಿ ಕುಮಾರಸ್ವಾಮಿ ಕಾರಣ ಎಂದು ಚಂದ್ರಶೇಖರ್ ಆರೋಪಿಸಿದರು. ಅಭ್ಯರ್ಥಿ ನಿಖಿಲ್ ಮತ್ತು ಅವರ ತಂದೆ ಕುಮಾರಸ್ವಾಮಿ ನಮ್ಮನ್ನು ಭೇಟಿ ಮಾಡಿ ಬೆಂಬಲ ಕೇಳಿದ್ರೆ ನಾವೇ ನಿಖಿಲ್ ಗೆಲ್ಲಿಸಿಕೊಂಡು ಬರುತ್ತಿದ್ದೇವು. ಹಾಸನದಲ್ಲಿ ರೇವಣ್ಣ, ಪ್ರಜ್ವಲ್, ತುಮಕೂರಿನಲ್ಲಿ ದೇವೇಗೌಡರೇ ಸ್ವತಃ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರಿದರು. ಆದ್ರೆ ಅದು ಮಂಡ್ಯದಲ್ಲಿ ಆಗಲಿಲ್ಲ. ಹೀಗಾಗಿ ನಾವು ತಟಸ್ಥರಾಗಿದ್ದೇವು ಎಂದು ಮಾಜಿ ಶಾಸಕ ಚಂದ್ರಶೇಖರ್ ಹೇಳಿದ್ದಾರೆ.

NIKHIL SUMALATHA

ಸಿಎಂ ರೇಸ್: ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ವಿಚಾರವನ್ನು ಪಕ್ಷದ ವಿಚಾರವಾಗಿದ್ದು, ಹಿರಿಯ ನಾಯಕರು ಚರ್ಚಿಸಿ ತೀರ್ಮಾನಿಸುತ್ತಾರೆ. ಚುನಾವಣೆ ಸಮಯದಲ್ಲಿ ನೀಡಿದ ಎಲ್ಲ ಆಶ್ವಾಸನೆಗಳನ್ನು ಈಡೇರಿಸಿದ ಏಕೈಕ ಸಿಎಂ ಸಿದ್ದರಾಮಯ್ಯ. ಮುಂದೆ ಚುನಾವಣೆ ನಡೆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದರೆ ತಪ್ಪೇನಿಲ್ಲ. ಒಂದೇ ಒಂದು ಹಗರಣದಲ್ಲಿ ಸಿಲುಕದೇ ಐದು ವರ್ಷ ನಮ್ಮಲ್ಲಿ ಮುಖ್ಯಮಂತ್ರಿ ಆಗಲು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಮತ್ತು ಡಿಕೆ.ಶಿವಕುಮಾರ್ ಇದ್ದಾರೆ. ಅಂತಿಮವಾಗಿ ಪಕ್ಷದ ಅಧ್ಯಕ್ಷರು ರಾಹುಲ್ ಗಾಂಧಿ ಯಾರು ಸಿಎಂ ಆಗಬೇಕು ಎಂಬುದನ್ನು ನಿರ್ಧರಿಸುತ್ತಾರೆ ಎಂದು ತಿಳಿಸಿದರು.

SIDDU VISHWANATH

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಮೊದಲಿನಿಂದಲೂ ತಮಟೆ ಹೊಡೆದುಕೊಂಡು ಬರುತ್ತಿದ್ದಾರೆ. ಜೆಡಿಎಸ್ ನಾಯಕರ ಕೈಗೊಂಬೆಯಾಗಿ ವಿಶ್ವನಾಥ್ ಕೆಲಸ ಮಾಡುತ್ತಿದ್ದಾರೆ. ವಿಶ್ವನಾಥರ ಹೇಳಿಕೆಗಳಿಗೆ ಯಾರು ತಲೆ ಕೆಡಿಸಿಕೊಳ್ಳಲ್ಲ. ಸಿದ್ದರಾಮಯ್ಯನವರು ಟ್ವೀಟ್ ಮೂಲಕ ಸರಿಯಾದದ್ದನ್ನು ಹೇಳಿದ್ದಾರೆ. ನಾವು ಎಂಬತ್ತು ಜನ ಇದ್ದವರು ಮೂವತ್ತು ಜನರಿಗೆ ಅಧಿಕಾರ ಕೊಟ್ಟಿದ್ದೇವೆ. ಜೆಡಿಎಸ್‍ನವರು ಕಾಂಗ್ರೆಸ್‍ನವರ ಋಣ ತೀರಿಸಬೇಕು. ಚುನಾವಣೆ ಸಂದರ್ಭದಲ್ಲಿ ಸಿಎಂ ನಮ್ಮನ್ನು ಪ್ರೀತಿ ಗೌರವದಿಂದ ಕಾಣಲಿಲ್ಲ. ಅಭ್ಯರ್ಥಿ ನಮ್ಮ ಬೆಂಬಲ ಕೇಳಲು ಬರುತ್ತಿದ್ದಾಗ ಶಾಸಕ ನಾರಾಯಣಗೌಡ ತಡೆದರು. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ತಟಸ್ಥವಾಗಿದ್ದೆ ಎಂದು ಸ್ಪಷ್ಟಪಡಿಸಿದರು.

TAGGED:ಆಪರೇಷನ್ ಕಮಲಕಾಂಗ್ರೆಸ್ಕೆ.ಬಿ.ಚಂದ್ರಶೇಖರ್ಜೆಡಿಎಸ್ನಾರಾಯಣಗೌಡಪಬ್ಲಿಕ್ ಟಿವಿಮಂಡ್ಯಲೋಕಸಭಾ ಚುನಾವಣೆ
Share This Article
Facebook Whatsapp Whatsapp Telegram

You Might Also Like

sudeep 1 4
Bengaluru City

ಬಿಗ್‌ ಬಾಸ್ ಸೀಸನ್-12ಕ್ಕೆ ಕಿಚ್ಚ ಸುದೀಪ್ ಒಪ್ಪಿಕೊಂಡ್ರಾ?

Public TV
By Public TV
19 minutes ago
sreeleela 5
Cinema

ರಶ್ಮಿಕಾರನ್ನೇ ಫಾಲೋ ಮಾಡ್ತಿದ್ದಾರಾ ‘ಕಿಸ್ಸಿಕ್’ ಬೆಡಗಿ – 7 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡ ಶ್ರೀಲೀಲಾ!

Public TV
By Public TV
29 minutes ago
KS Eshwarappa
Bellary

ಕುಟುಂಬ ರಾಜಕಾರಣದ ಬಗ್ಗೆ ಮಾತಾಡಿದ್ದು ಮುಗೀತು, ನನ್ನ ಜೀವ ಇರೋದೇ ಬಿಜೆಪಿಯಲ್ಲಿ, ಮತ್ತೆ ಹೋಗ್ತೀನಿ: ಈಶ್ವರಪ್ಪ

Public TV
By Public TV
58 minutes ago
Russia Attack
Latest

ರಷ್ಯಾದಿಂದ ಅತಿದೊಡ್ಡ ವೈಮಾನಿಕ ದಾಳಿ – ಬರೋಬ್ಬರಿ 477 ಡ್ರೋನ್‌, 60 ಮಿಸೈಲ್‌ಗಳಿಂದ ಉಕ್ರೇನ್‌ ಮೇಲೆ ಅಟ್ಯಾಕ್‌

Public TV
By Public TV
1 hour ago
UP CRIME
Crime

ಆಸ್ತಿ ಇದ್ರೂ ಮದುವೆಯಾಗಿಲ್ಲ ಎಂದ ವಿಡಿಯೋ ವೈರಲ್‌ – 18 ಎಕರೆ ಆಸ್ತಿಗಾಗಿ ಎಂಟ್ರಿ ಕೊಟ್ಟ ಕಿಲ್ಲರ್‌ ಬ್ಯೂಟಿ!

Public TV
By Public TV
2 hours ago
Govind Karjol
Chitradurga

ಡಿಸೆಂಬರ್‌ ಬಳಿಕ ಮಧ್ಯಂತರ ಚುನಾವಣೆ ಬರುತ್ತೆ, ಬಿಜೆಪಿ 150 ಸ್ಥಾನದೊಂದಿಗೆ ಸರ್ಕಾರ ರಚಿಸುತ್ತೆ: ಕಾರಜೋಳ ಭವಿಷ್ಯ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?