ಕೊಪ್ಪಳ ಉಪವಿಭಾಗಾಧಿಕಾರಿಯಿಂದ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗನ ಗಡಿಪಾರು

Public TV
1 Min Read
KPL

ಕೊಪ್ಪಳ: ಕೊಲೆ ಪ್ರಕರಣದಲ್ಲಿ ಭಾಗಿ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ ಆರೋಪದ ಮೇಲೆ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಬೆಂಬಲಿಗನನ್ನ ಗಡಿಪಾರು ಮಾಡಲಾಗಿದೆ.

ಜುಬೇರ ಖಲೀಲಸಾಬ್ ಎಂಬಾತನನ್ನು ಗಡಿಪಾರು ಮಾಡಲಾಗಿದ್ದು, ಶಾಸಕ ಇಕ್ಬಾಲ್ ಅನ್ಸಾರಿಗೆ ಶಾಕ್ ಆಗಿದಂತಾಗಿದೆ. ಈ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಈಚೆಗೆ ಗಂಗಾವತಿಯಲ್ಲಿ ನಡೆದ ಸಿಎಂ ಸಾಧನಾ ಸಮಾವೇಶ ದಲ್ಲೂ ಜುಬೇರ್ ವೇದಿಕೆಯಲ್ಲೆ ಓಡಾಡಿದ್ದ ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿ ಗಮನ ಸೆಳೆದಿತ್ತು. ಇದನ್ನೂ ಓದಿ: ಸಿಎಂ ಕಾರ್ಯಕ್ರಮದಲ್ಲಿ ರೌಡಿಶೀಟರ್ ಗಳಿಗೆ ಏನ್ ಕೆಲ್ಸ?

KPL ANSARI 1

ಕೊಪ್ಪಳ ಉಪವಿಭಾಗಾಧಿಕಾರಿ ಗುರುದತ್ ಹೆಗಡೆಯವರು ಜುಬೇರನನ್ನ ಚಾಮರಾಜನಗರ ಉಪವಿಭಾಗಕ್ಕೆ ಗಡಿಪಾರು ಮಾಡಿದ್ದಾರೆ. ಅಲ್ಲದೇ ಇನ್ನೊಬ್ಬ ಆರೋಪಿ ಶ್ರೀಕಾಂತ ಹೊಸಕೇರಾ ಎಂಬಾತನನ್ನು ಬೀದರ್ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. ಇವರಿಬ್ಬರ ಗಡಿಪಾರು ಈಗ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಕೊಲೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಸ್ತಿರೋರಿಗೆ ಈಗ ನಡುಕ ಹುಟ್ಟಿದೆ.

KPL ANSARI 2

KPL ANSARI 3

KPL ANSARI 4

KPL ANSARI 5

Share This Article
Leave a Comment

Leave a Reply

Your email address will not be published. Required fields are marked *