ನಿಮ್ಮೊಂದಿಗೆ ನಾವಿದ್ದೇವೆ – ಚಿಕಿತ್ಸೆ ಪಡೆಯುತ್ತಿರೋರಿಗೆ ಧೈರ್ಯ ತುಂಬಿದ ಶ್ರೀರಾಮುಲು

Public TV
1 Min Read
BLY SRIRAMULU

– ಸುರಕ್ಷತೆ ದೃಷ್ಟಿಯಿಂದ ನಿಮ್ಮನ್ನು ಐಸೋಲೇಶನ್ ವಾರ್ಡಿನಲ್ಲಿಟ್ಟಿದ್ದೇವೆ

ಬಳ್ಳಾರಿ: ನೀವು ಧೈರ್ಯ ಕಳೆದುಕೊಳ್ಳಬೇಡಿ, ನಿಮಗೇನು ಆಗಿಲ್ಲ. ದೇವರ ದಯೆಯಿಂದ ನಿಮ್ಮದು ನೆಗೆಟಿವ್ ರಿಪೋರ್ಟ್ ಬರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಐಸೋಲೇಶನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಧೈರ್ಯ ತುಂಬಿದ್ದಾರೆ.

ಇಂದು ಶ್ರೀರಾಮುಲು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಹಿನ್ನೆಲೆ ಐಸೋಲೇಶನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿದ್ದರು. ತಾವು ಕೋವಿಡ್ ಸುರಕ್ಷಾ ಕಿಟ್ ಧರಿಸಿ ಒಳಗಡೆ ತೆರಳಿ ಬೆನ್ನುತಟ್ಟಿ ಅವರಿಗೆ ಧೈರ್ಯ ತುಂಬಿದರು.

ನೀವು ಧೈರ್ಯ ಕಳೆದುಕೊಳ್ಳಬೇಡಿ, ನಿಮಗೇನು ಆಗಿಲ್ಲ. ದೇವರ ದಯೆಯಿಂದ ನಿಮ್ಮದು ನೆಗೆಟಿವ್ ರಿಪೋರ್ಟ್ ಬರುತ್ತದೆ. ಅಲ್ಲಿಯವರೆಗೆ ಐಸೋಲೇಶನ್ ವಾರ್ಡಿನಲ್ಲಿರಬೇಕು. ನಿಮ್ಮೊಂದಿಗೆ ನಾವಿದ್ದೇವೆ, ನಿಮಗೆ ಚಿಕಿತ್ಸೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ನಿಮ್ಮನ್ನು ದೂರವಿಟ್ಟಿದ್ದೇವೆ ಎಂದು ಅಂದುಕೊಳ್ಳಬೇಡಿ, ದೇಶ ಹಾಗೂ ಎಲ್ಲರ ಸುರಕ್ಷತೆ ದೃಷ್ಟಿಯಿಂದ ನಿಮ್ಮನ್ನು ಐಸೋಲೇಶನ್ ವಾರ್ಡಿನಲ್ಲಿಟ್ಟಿದ್ದೇವೆ ಎಂದು ಹೇಳಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಎನ್.ಬಸರೆಡ್ಡಿ ಅವರು ಐಸೋಲೇಶನ್ ವಾರ್ಡಿನಲ್ಲಿ ಎಷ್ಟು ದಿನಗಳಿಂದ ಇರಿಸಲಾಗಿದೆ ಎಂಬುದು ಸೇರಿದಂತೆ ಕಲ್ಪಿಸಲಾಗುತ್ತಿರುವ ಇನ್ನಿತರ ಚಿಕಿತ್ಸಾ ಕ್ರಮಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಶಾಸಕ ಸೋಮಶೇಖರ ರೆಡ್ಡಿ, ನಾಗೇಂದ್ರ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಇನ್ನಿತರ ವೈದ್ಯಾಧಿಕಾರಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *