ಮಂಗಳೂರು: ಉದ್ಯಮಿ ಸಿದ್ಧಾರ್ಥ್ ಹೆಗಡೆ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದಿದ್ದು, ಇದೀಗ ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಯುತ್ತಿದೆ.
ಸಿದ್ಧಾರ್ಥ್ ಅವರು ನಿನ್ನೆ ಕಾರಿನಲ್ಲಿ ಚಾಲಕ ಬಸವರಾಜ್ ಪಾಟೀಲ್ ಜೊತೆಗೆ ಸಕಲೇಶಪುರಕ್ಕೆ ಹೊರಡಿದ್ದರು. ಆದರೆ ಮಾರ್ಗಮಧ್ಯೆದಲ್ಲಿ ಕಾರನ್ನು ಮಂಗಳೂರು ಕಡೆಗೆ ತಿರುಗಿಸಲು ಸೂಚಿಸಿದ್ದು, ನೇತ್ರಾವತಿ ನದಿಗೆ ನಿರ್ಮಿಸಲಾಗಿದ್ದ ಸೇತವೆಯ ಬಳಿ ಬರುತ್ತಿದ್ದಂತೆಯೇ ಕಾರು ನಿಲ್ಲಿಸಲು ಚಾಲಕನ ಬಳಿ ಹೇಳಿದ್ದಾರೆ. ಆ ನಂತರ ಸಿದ್ಧಾರ್ಥ್ ಅವರು ನಾಪತ್ತೆಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕಂಕನಾಡಿ ಪೊಲೀಸರು ಕಾರು ಹಾಗೂ ಚಾಲಕ ಬಸವರಾಜ್ ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಹಿರಿಯ ಅಧಿಕಾರಿಗಳು ಕಂಕನಾಡಿ ಠಾಣೆಗೆ ಆಗಮಿಸಿದ್ದಾರೆ. ನಂತರ ಅಲ್ಲಿಂದ ಬೆಳಗ್ಗೆ 8 ಗಂಟೆ ಸುಮಾರಿಗೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸಿದ್ಧಾರ್ಥ್ ಅವರು ಯಾರ ಜೊತೆಗೆ ಮಾತನಾಡುತ್ತಿದ್ದರು? ಏನು ಮಾತನಾಡುತ್ತಿದ್ದರು? ಗಾಬರಿ, ಭಯ ಅಥವಾ ಆತಂಕದಿಂದ ಸಂಭಾಷಣೆ ನಡೆಸಿದ್ದರಾ ಎಂದು ಪೊಲೀಸರು ಬಸವರಾಜ್ಗೆ ಕೇಳಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಸದ್ಯ ಸಿದ್ಧಾರ್ಥ್ ಅವರು ಪ್ರಯಾಣಿಸಿದ್ದ ಕೆಎ 03 ಎಸ್ಸಿ 2593 ನಂಬರ್ ನ ಇನ್ನೋವಾ ಕಾರನ್ನು ಪೊಲೀಸರ ವಶದಲ್ಲಿದೆ. ಪೊಲೀಸರು ಈಗಾಗಲೇ ಚಾಲಕ ಬಸವರಾಜ್ನಿಂದ ಪ್ರಾಥಮಿಕ ಹೇಳಿಕೆ ಪಡೆದುಕೊಂಡಿದ್ದಾರೆ.
https://www.youtube.com/watch?v=2P3yazqTvMs