ಮಂಗಳೂರು: ವಿಕೃತ ಕಾಮಿಯೊಬ್ಬ ದನದ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿದ ಘಟನೆ ಬೆಳಕಿಗೆ ಬಂದಿದೆ.
ಮಂಗಳೂರಿನ ಕುಂಜತ್ತ ಬೈಲಿನಲ್ಲಿ ಘಟನೆ ನಡೆದಿದ್ದು ಬಯಲಿನಲ್ಲಿ ಮೇಯಲು ಕಟ್ಟಿದ್ದ ದನಕ್ಕೆ ಆತ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿಕೃತ ಕಾಮಿ ಯುವಕನನ್ನು ಮಹಮ್ಮದ್ ಅಜರ್ ಅನ್ಸಾರಿ ಎಂದು ಗುರುತಿಸಲಾಗಿದೆ.
ಬಿಹಾರ ಮೂಲದ ಕಾರ್ಮಿಕನಾಗಿದ್ದು ಕೂಲಿ ಕೆಲಸಕ್ಕೆ ಮಂಗಳೂರಿನಲ್ಲಿ ಬಂದು ಉಳಿದುಕೊಂಡಿದ್ದಾನೆ. ಪ್ರದೇಶದಲ್ಲಿ ಯಾರೂ ಇರದ್ದನ್ನು ಕಂಡು ಕೃತ್ಯ ಎಸಗಿದ್ದು ಸಾರ್ವಜನಿಕರು ಗಮನಿಸಿ ಮೊಬೈಲಿನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಆತನನ್ನು ದಬಾಯಿಸಿ, ಥಳಿಸಿದ್ದು ಮೊಬೈಲ್ನಲ್ಲಿ ಸೆರೆಯಾಗಿದೆ.