ಮಂಡ್ಯದಲ್ಲಿ ಯಮನಿಗೊಂದು ದೇವಸ್ಥಾನ- ಕಟ್ಟಿದ ದೇಸ್ಥಾನದ ಗೋಡೆ ಉರುಳಿಸಿದ ವ್ಯಕ್ತಿ

Public TV
2 Min Read
MND C

ಮಂಡ್ಯ: ಭಾರತ ಹಾಗೂ ಕರ್ನಾಟಕದ ಮೂಲೆ ಮೂಲೆಗಳಲ್ಲೂ ಶಿವ, ವಿಷ್ಣು, ಗಣಪತಿ, ಆಂಜನೇಯ ಹೀಗೆ ನಾನಾ ಹಿಂದೂ ದೇವತೆಗಳಗೆ ದೇವಸ್ಥಾನ ಕಟ್ಟಿ ಪೂಜೆ ಸಲ್ಲಿಸಲಾಗುತ್ತದೆ. ನಮ್ಮ ಸಾವನ್ನು ಹೊತ್ತುಕೊಂಡು ಹೋಗುವ ಯಮಧರ್ಮರಾಜನಿಗೆ ದೇವಸ್ಥಾನ ಕಟ್ಟಿ ಪೂಜೆ ಮಾಡುವ ಪದ್ಧತಿ ಮಾತ್ರ ಇಲ್ಲ. ಆದರೆ ಇಲ್ಲೂಂದು ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಯಮಧರ್ಮರಾಜನಿಗೆ ವ್ಯಕ್ತಿಯೊಬ್ಬರು ದೇವಸ್ಥಾನ ಕಟ್ಟಿ ಪೂಜೆ ಮಾಡಲು ಮುಂದಾಗಿದ್ದಾರೆ.

ಯಮಧರ್ಮರಾಜ ಎಂದರೆ ಸಾಕು, ಎಂಥವರು ಸಹ ಮಲಗಿದ್ದರೂ ಎಚ್ಚರವಾಗಿ ಕಣ್ಣು ಬಿಟ್ಟು ನೋಡುತ್ತಾರೆ. ನಮ್ಮ ಹಿಂದೂಗಳ ಕಲ್ಪನೆಯ ಪ್ರಕಾರ ಯಮಧರ್ಮರಾಜ ಕೋಣದ ಮೇಲೆ ಕೂತುಕೊಂಡು, ಕೀರಿಟ ಹಾಕಿಕೊಂಡು, ದಪ್ಪ ಮೀಸೆ ಬಿಟ್ಟುಕೊಂಡು, ಕೈಯಲ್ಲಿ ಗದೆ ಮತ್ತು ಪಾಶವನ್ನು ಹಿಡಿದುಕೊಂಡು ಪ್ರಾಣವನ್ನು ಯಮಲೋಕಕ್ಕೆ ಕೊಂಡಯ್ಯಲು ಬರುವ ಒಬ್ಬ ದೇವ ಎಂದು ನಾವು ನಂಬಿದ್ದೇವೆ.

MNG B

ಯಮ ಓರ್ವ ದೇವನಾದರೂ ಯಮನಿಗೆ ಭೂಲೋಕದಲ್ಲೇಲ್ಲೂ ಪೂಜೆ ಸಲ್ಲುವುದಿಲ್ಲ. ಆದರೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಹಿನ್ನಿರಿನ ಪಕ್ಕದಲ್ಲಿರುವ ಹೊಸಹುಂಡವಾಡಿಯಲ್ಲಿ ಯಮಧರ್ಮರಾಜ ದೇವಸ್ಥಾನ ನಿರ್ಮಾಣವಾಗುತ್ತಿದೆ. ಕೆಆರ್‌ಎಸ್‌ನ ನಿವಾಸಿ ರಾಜು ಎಂಬವರು ಯಮಧರ್ಮರಾಜ ದೇವಸ್ಥಾನ ಕಟ್ಟಲು ಮುಂದಾಗಿದ್ದಾರೆ. ದೇಶದಲ್ಲಿ ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಮಾತ್ರ ಯಮಧರ್ಮರಾಜನಿಗೆ ದೇವಸ್ಥಾನ ನಿರ್ಮಾಣ ಮಾಡಿದ್ದಾರಂತೆ.

ರಾಜು ಅವರು ಸದ್ಯ ಯಮಧರ್ಮರಾಜ ದೇವಸ್ಥಾನ ಕಟ್ಟಲು ಹೊರಟಿರುವ ಜಾಗವನ್ನು ವಿಷ್ಟುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ನೀಡಲು ಮುಂದಾಗಿದ್ದರು. ಆದರೆ ವಿಷ್ಣು ಸ್ಮಾರಕ ಮೈಸೂರಿನಲ್ಲಿ ಆಗುತ್ತಿರುವ ಕಾರಣ, ಈ ಜಾಗವನ್ನು ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಈ ಜಾಗದಲ್ಲಿ ಯಮಧರ್ಮರಾಜನ ದೇವಸ್ಥಾನ ಕಟ್ಟಲು ಮುಂದಾಗಿದ್ದಾರೆ. ಈಗಾಗಲೇ ಇಲ್ಲಿ ಶನಿ ಸಿಂಗಾಪುರ ಮಾದರಿಯ ದೇವಸ್ಥಾನವನ್ನು ಸಹ ನಿರ್ಮಾಣ ಮಾಡಲಾಗಿದೆ. ಶನಿಮಹಾತ್ಮ ಹಾಗೂ ಯಮಧರ್ಮರಾಜ ಅಣ್ಣತಮ್ಮಂದಿರು ಆದ ಕಾರಣ ಇಬ್ಬರು ಒಂದೇ ಜಾಗದಲ್ಲಿ ಇರಲಿ ಎಂದು ಇಲ್ಲಿ ಯಮಧರ್ಮರಾಜನ ದೇವಸ್ಥಾನ ಕಟ್ಟಿಸುತ್ತಿದೇನೆ ಎಂದು ರಾಜು ಹೇಳಿದ್ದಾರೆ. ಈಗಾಗಲೇ ರಾಜು ಅವರು ದೇವಸ್ಥಾನ ನಿರ್ಮಾಣಕ್ಕೆ ಮೈಸೂರಿನಲ್ಲಿ ಯಮಧರ್ಮರಾಜನನ್ನು ಹೋಲುವ ಮೂರ್ತಿಯನ್ನು ಸಹ ತಯಾರು ಮಾಡಿಸಿದ್ದಾರೆ.

MNG C

ಹೊಸಹುಂಡವಾಡಿ ಗ್ರಾಮದಲ್ಲಿ ದೇವಸ್ಥಾನ ಕಟ್ಟುವುದಕ್ಕೆ ಮುಂದಾದ ರಾಜು ಅವರು, ಸ್ವಲ್ಪ ಕಾಮಗಾರಿಯನ್ನು ಮಾಡಿಸಿದ್ದಾರೆ. ಆದರೆ ಮೈಸೂರಿನ ಸೂರ್ಯನಾರಾಯಣ್ ಎಂಬವರು ಈ ಜಾಗ ನನಗೆ ನೀಡು ಎಂದು ಕಟ್ಟಿದ್ದ ದೇವಸ್ಥಾನವನ್ನು ಗುಂಪು ಕಟ್ಟಿಕೊಂಡು ಬಂದು ಕೆಡವಿದ್ದಾರೆ ಎಂದು ರಾಜು ಆರೋಪಿಸಿದ್ದಾರೆ.

ಈ ಹಿಂದೆ ರಾಜು ಅವರು ಸೂರ್ಯನಾರಾಯಣ್ ಪತ್ನಿಗೆ 15 ಲಕ್ಷ ರೂ. ನೀಡಿ ಜಾಗವನ್ನು ಖರೀದಿ ಮಾಡಿದ್ದರಂತೆ. ಆದರೆ ಈಗ ಈ ಜಾಗ 50 ಲಕ್ಷ ರೂ.ಗೆ ಬೆಲೆ ಬಾಳುತ್ತದೆ ಎಂಬ ಕಾರಣಕ್ಕೆ ದೇವಸ್ಥಾನದ ಕೆಲಸಕ್ಕೆ ಸೂರ್ಯನಾರಯಣ್ ಕಲ್ಲು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

MND D
ಯಮಧರ್ಮರಾಜ ದೇವಸ್ಥಾನ ಕಟ್ಟಲು ಹೊರಟಿರುವ ರಾಜು

Share This Article
Leave a Comment

Leave a Reply

Your email address will not be published. Required fields are marked *