ಮಂಡ್ಯ: ಈ ಜಿಲ್ಲೆ ಸೇರಿದಂತೆ ಹಲವು ಭಾಗಗಳಲ್ಲಿ ತನ್ನ ಪವಾಡಗಳ ಮೂಲಕ ಹೆಸರುವಾಸಿಯಾಗಿರುವ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ಬಸಪ್ಪನಿಗೆ ಆರನೇ ವರ್ಷದ ಹುಟ್ಟುಹಬ್ಬ, ಈ ಹಿನ್ನೆಲೆಯಲ್ಲಿ ಕೇಕ್ ಕಟ್ ಮಾಡಿ ಇಂದು ಸಂಭ್ರಮಿಸಲಾಗಿದೆ.
ಚಿಕ್ಕರಸಿನಕೆರೆಯ ಕಾಲಭೈರವೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿರುವ ಬಸಪ್ಪ, ಹಲವು ಪವಾಡಗಳನ್ನು ಮಾಡುವ ಮೂಲಕ ತನ್ನದೇ ಭಕ್ತ ವೃಂದವನ್ನು ಬೆಳೆಸಿಕೊಂಡಿದೆ. ಈ ಬಸಪ್ಪನಿಗೆ ಇದೀಗ 6ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಬಸಪ್ಪನ ಆರನೇ ವರ್ಷದ ಹುಟ್ಟು ಹಬ್ಬವನ್ನು ಭಕ್ತರು ಹಾಗೂ ಗ್ರಾಮಸ್ಥರು ಸಂಭ್ರಮದಿಂದ ಆಚರಣೆ ಮಾಡಿದರು.
ಕಾಲಭೈರವೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಬಸಪ್ಪನನ್ನು ನಿಲ್ಲಿಸಿ ಕೇಕ್ ಕಟ್ ಮಾಡಿ ಭಕ್ತರು ಕೇಕ್ ತಿನ್ನಿಸಿದರು. ಈ ಮೂಲಕ ಬಸಪ್ಪ ತನ್ನ ಪವಾಡದ ಮೂಲಕ ಜನರನ್ನು ನೆಮ್ಮದಿಯಾಗಿ ಇರುವಂತೆ ನೋಡಿಕೋ ಎಂದು ಭಕ್ತರು ಬಸಪ್ಪನನ್ನು ಬೇಡಿಕೊಂಡರು.