ಕಾಸರಗೋಡು: ಮದರಸಾಕ್ಕೆಂದು (Madrassa) ತೆರಳುತ್ತಿದ್ದ 8ರ ಹರೆಯದ ಬಾಲಕಿಯನ್ನು (Girl) ಯುವಕನೋರ್ವ ಎತ್ತಿ ನೆಲಕ್ಕೆಸೆದು (Lifts And Throws) ಕ್ರೌರ್ಯ ಮೆರೆದ ಅಮಾನವೀಯ ಘಟನೆ ಮಂಜೇಶ್ವರದಲ್ಲಿ (Manjeshwara) ನಡೆದಿದೆ.
ಬಾಲಕಿಯನ್ನು ಎತ್ತಿ ನೆಲಕ್ಕೆ ಎಸೆದ ಆರೋಪಿಯನ್ನು ಮಂಜೇಶ್ವರ ಕುಂಜತ್ತೂರಿನ ಅಬೂಬಕ್ಕರ್ ಸಿದ್ದೀಕ್ (30) ಎಂದು ಗುರುತಿಸಲಾಗಿದೆ. ಬೆಳಗ್ಗೆ ಏಳು ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಮದರಸಾಕ್ಕಾಗಿ ತೆರಳಿ ನಿಂತಿದ್ದ ಬಾಲಕಿ ಬಳಿ ಬಂದ ಸಿದ್ದೀಕ್ ಬಾಲಕಿಯನ್ನು ಮೇಲಕ್ಕೆತ್ತಿ ಎಸೆದಿದ್ದು, ಕೃತ್ಯದ ಬಳಿಕ ಅಲ್ಲಿಂದ ತೆರಳಿದ್ದನು. ಘಟನೆ ಬಳಿಕ ಗಾಯಗೊಂಡ ಬಾಲಕಿಯನ್ನು ಮಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕೇಸ್ ವಾಪಸ್ ತೆಗೆದುಕೋ, ಮುಂದುವರಿಸುವುದು ಬೇಡ – ಸಂತ್ರಸ್ತೆಗೆ ಆಮಿಷ ಒಡ್ಡಿದ್ರಾ ಮುರುಘಾ ಶ್ರೀ?
On Camera, Man Walks Up To Kerala Girl, 8, Slams Her To The Ground @pinarayivijayan @KeralaGovernor @CMOKerala @TheKeralaPolice
The horrifying incident occurred this morning when the eight year-old girl was waiting outside the Madrassa for her uncle to pick up#ViralVideos pic.twitter.com/Gm3FzUE8Nv
— Surya (@yessirrolex) November 17, 2022
ಬಾಲಕಿಯ ಸಹಪಾಠಿಗಳ ಕಣ್ಮುಂದೆಯೇ ಈ ಘಟನೆ ನಡೆದಿದೆ. ಅಲ್ಲದೇ ಬಾಲಕಿಯನ್ನು ಸಿದ್ದೀಕ್ ಎಸೆದಿರುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಬಾಲಕಿಯ ಪೋಷಕರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಆರೋಪಿ ಸಿದ್ದೀಕ್ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಖಾಸಗಿ ಜಾಗದಲ್ಲಿ ಶ್ರೀಗಂಧ ಬೆಳೆದು ರೈತರೇ ಮಾರಾಟ ಮಾಡಬಹುದು