ಹೈದರಾಬಾದ್: ಪತ್ನಿ ಪ್ರಿಯತಮನ ಜೊತೆ ಇದ್ದಾಗ ಪತಿ ಕೈಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಪರಿಣಾಮ ಕೋಪಗೊಂಡ ಪತಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿನಲ್ಲಿ ನಡೆದಿದೆ.
ನಾಗಲಕ್ಷ್ಮಿ ಕೊಲೆಯಾದ ಮಹಿಳೆ. ಆರೋಪಿಯನ್ನು ರಾಮ್ಬಾಬು ಎಂದು ಗುರುತಿಸಲಾಗಿದೆ. ಈತ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು, ನಾಗಲಕ್ಷ್ಮಿಯನ್ನು ಮದುವೆಯಾಗಿದ್ದನು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಆರೋಪಿ ಇಬ್ಬರು ಮಕ್ಕಳನ್ನು ತಾಯಿಯಿಂದ ದೂರವಿರಿಸಿದ್ದನು. ಈ ಕಾರಣದಿಂದ ಆರೋಪಿ ರಾಮ್ಬಾಬು ಮತ್ತು ನಾಗಾಲಕ್ಷ್ಮಿ ಮಧ್ಯೆ ಯಾವಾಗಲೂ ಜಗಳ ನಡೆಯುತ್ತಿತ್ತು.
ಅಷ್ಟೇ ಅಲ್ಲದೇ ಈ ಮದುವೆ ನಾಗಲಕ್ಷ್ಮಿಗೆ ಇಷ್ಟವೂ ಇರಲಿಲ್ಲ. ಬಳಿಕ ನಾಗಲಕ್ಷ್ಮಿ ಬೇರೊಬ್ಬ ವ್ಯಕ್ತಿಯ ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು. ಮೃತ ನಾಗಲಕ್ಷ್ಮಿ ಪತಿಗೆ ಪ್ರತಿದಿನ ರಾತ್ರಿ ಹಾಲಿನಲ್ಲಿ ನಿದ್ರೆ ಮಾತ್ರೆಯನ್ನು ಹಾಕಿ ಕೊಡುತ್ತಿದ್ದಳು. ಹೀಗೆ ಪತಿ ನಿದ್ದೆ ನಂತರ ತನ್ನ ಪ್ರಿಯತಮನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ಆತನ ಜೊತೆ ರಾತ್ರಿ ಸಮಯ ಕಳೆಯುತ್ತಿದ್ದಳು.
ಒಂದು ದಿನ ಆರೋಪಿ ರಾಮ್ಬಾಬುಗೆ ಪತ್ನಿಯ ಮೇಲೆ ಅನುಮಾನ ಬಂದಿದೆ. ಆಗ ಆತ ತನ್ನ ಪತ್ನಿ ಕೊಟ್ಟ ಹಾಲನ್ನು ಕುಡಿದಂತೆ ನಟಿಸಿ ಮಲಗಿದ್ದನು. ಎಂದಿನಂತೆ ಪತಿ ಮಲಗಿದ ಬಳಿಕ ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡಿದ್ದಾಳೆ. ಆದರೆ ಮಧ್ಯರಾತ್ರಿಯಲ್ಲಿ ಪತಿ ಎಚ್ಚರಗೊಂಡು ಪತ್ನಿ ತನ್ನ ಪ್ರಿಯಕರನ ಜೊತೆ ಮಲಗಿದ್ದನ್ನು ನೋಡಿದ್ದಾನೆ.
ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ತಕ್ಷಣ ಪ್ರಿಯಕರ ಮನೆಯಿಂದ ತಪ್ಪಿಸಿಕೊಂಡಿದ್ದಾನೆ. ಈ ವೇಳೆ ಆರೋಪಿ ರಾಮ್ಬಾಬು ಕೋಪಗೊಂಡು ಪತ್ನಿಯ ಜೊತೆ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಪತ್ನಿಯ ತಲೆಯನ್ನು ಹಿಡಿದು ಕಲ್ಲಿಗೆ ಹೊಡೆದಿದ್ದಾನೆ. ಪರಿಣಾಮ ಪತ್ನಿ ನಾಗಲಕ್ಷ್ಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಆರೋಪಿ ರಾಮ್ಬಾಬುನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ವೇಳೆ ರಾಮ್ಬಾಬು ಮತ್ತು ನಾಗಾಲಕ್ಷ್ಮಿ ಪ್ರೀತಿ ಮಾಡಿ ಮದುವೆಯಾಗಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv