ಗೆಳೆಯರೇ ಯುವಕನಿಗೆ ಕಂಠ ಪೂರ್ತಿ ಕುಡಿಸಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ರು!

Public TV
1 Min Read

ಬೆಂಗಳೂರು: ಇಂದು ನಗರದ ಹೊರವಲಯದ ಬೊಮ್ಮನಹಳ್ಳಿ ಸಮೀಪದ ಬಂಡೆಪಾಳ್ಯದಲ್ಲಿ ಯುವಕನೋರ್ವನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಗೆಳಯರೇ ಯುವಕನಿಗೆ ಕಂಠ ಪೂರ್ತಿ ಕುಡಿಸಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ANE MURDER AV 5.jpeg

ಅರುಣ್ ಕೊಲೆಯಾದ ಯುವಕ. ಈತನ ಗೆಳಯರಾದ ಅಶೋಕ್ ಮತ್ತು ಆಕಾಶ್ ಇಬ್ಬರೂ ಸೇರಿ ಇಂದು ಬೆಳಗ್ಗೆ ಕೊಲೆ ಮಾಡಿದ್ದಾರೆ. ಕಳೆದ 15 ದಿನಗಳ ಹಿಂದೆ ಅಶೋಕ್ ಮತ್ತು ಅರುಣ್ ನಡುವೆ ಸಣ್ಣಪುಟ್ಟ ವಿಚಾರಕ್ಕಾಗಿ ಗಲಾಟೆ ನಡೆದಿತ್ತು. ಅಂದು ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರೆ ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಿ ಕಳುಹಿಸಿದ್ದರು.

ANE MURDER AV 6.jpeg
ಅರುಣ್

ಇಂದು ಅದೇ ವಿಷಯಕ್ಕಾಗಿ ಅಶೋಕ್ ಮತ್ತು ಅರುಣ್ ನಡುವೆ ಗಲಾಟೆ ನಡೆದಿದ್ದು, ಅಶೋಕ್ ಮತ್ತು ಆಕಾಶ್ ಜೊತೆ ಸೇರಿ ಅರುಣ್‍ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ANE MURDER AV 3.jpeg
ಅರುಣ್

ಸದ್ಯಕ್ಕೆ ಮೃತ ದೇಹವನ್ನು ನಗರದ ಸೇಂಟ್ ಜಾನ್ ಆಸ್ಪತ್ರೆಯ ಶವಾಗರದಲ್ಲಿ ಇರಿಸಲಾಗಿದೆ. ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *