ಬಾಲ್ ತಂದುಕೊಡ್ಲಿಲ್ಲ ಅಂತ ಪ್ರಾಣವನ್ನೆ ತೆಗೆದ್ರು!

Public TV
1 Min Read
CRICKET MURDER 2 1

ಬೆಂಗಳೂರು: ಕ್ರಿಕೆಟ್ ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲನ್ನು ತಂದು ಕೊಡಲಿಲ್ಲ ಎಂಬ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ವ್ಯಕ್ತಿಯನ್ನು ಕೊಲೆ ಮಾಡುವಲ್ಲಿ ಅಂತ್ಯವಾಗಿದೆ.

ಈ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ. ಮಣಿಕಂಠ ಮೃತ ದುರ್ದೈವಿಯಾಗಿದ್ದು, ತನ್ನ ಸ್ನೇಹಿತರಿಂದಲೇ ಕೊಲೆಯಾಗಿದ್ದಾನೆ. ಪ್ರಕರಣ ಕುರಿತಂತೆ ಮಹಾಲಕ್ಷ್ಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು.

ಶೀಘ್ರವೇ ಕಾರ್ಯಚರಣೆ ನಡೆಸಿದ ಮಹಾಲಕ್ಷ್ಮೀ ಠಾಣಾ ಪೊಲೀಸರು ಮೃತ ಮಣಿಕಂಠನ ಸ್ನೇಹಿತರಾದ ಶಿವಾಜಿ, ಪುನೀತ್, ವಿನೋದ್ ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಪ್ರಕರಣ?
ಮೃತ ಮಣಿಕಂಠ ಹಾಗೂ ಆರು ಆರೋಪಿಗಳು ಒಂದೇ ಕ್ರಿಕೆಟ್ ತಂಡದ ಸದಸ್ಯರಾಗಿದ್ದರು. ಕ್ರಿಕೆಟ್ ಆಟ ಆಡುತ್ತಿರುವಾಗ ಬಾಲ್ ಮೈದಾನದಿಂದ ಹೊರಗೆ ಹೋಗಿದೆ. ಈ ವೇಳೆ ಶಿವಾಜಿ ಎಂಬಾತನು ಮಣಿಕಂಠನಿಗೆ ಬಾಲ್ ತರುವಂತೆ ಹೇಳಿದ್ದಾನೆ. ಮೃತನು ಬಾಲ ಅನ್ನು ತಂದು ಕೊಡದಿದ್ದಕ್ಕೆ ತಂಡದ ಸದಸ್ಯರ ಜೊತೆ ಜಗಳ ಏರ್ಪಟ್ಟಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಸ್ಥಳದಲ್ಲೇ ಮಣಿಕಂಠನನ್ನು ಆರೋಪಿಗಳು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *