ದಾಯಾದಿ ಕಲಹ – ವ್ಯಕ್ತಿಗೆ ಬೆಂಕಿ, ಆಸ್ಪತ್ರೆಯಲ್ಲಿ ಸಾವು

Public TV
1 Min Read
mandya death 1

ಮಂಡ್ಯ: ದಾಯಾದಿ ಕಲಹದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದಲ್ಲಿ ಜರುಗಿದೆ.

ಮೂಡನಹಳ್ಳಿ ಗ್ರಾಮದ ರಘು(29) ಸಾವಿಗೀಡಾದ ದುರ್ದೈವಿ. ಒಂದೂವರೆ ತಿಂಗಳ ಹಿಂದೆಯಷ್ಟೇ ರಘು ಮದುವೆಯಾಗಿದ್ದು, ಇದೇ ಸೆ.25 ರ ರಾತ್ರಿ ಈ ಘಟನೆ ಜರುಗಿದೆ. ಅಂದು ಸುಟ್ಟಗಾಯಗಳಿಂದ ಬಳಲುತ್ತಿದ್ದ ರಘು ಅವರನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಚಿಕಿತ್ಸೆ ಫಲಿಸದೆ ರಘು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ:  ಆರ್ಥಿಕ ಸಂಕಷ್ಟದಿಂದ ಮನನೊಂದು KSRTC ನೌಕರ ವಿಷ ಸೇವಿಸಿ ಆತ್ಮಹತ್ಯೆ

mandya death 2

ರಘು ತನ್ನದೇ ಸ್ವಂತ ಕಾರು ಹೊಂದಿದ್ದು, ಬೆಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡ್ತಿದ್ದರು. ಲಾಕ್‍ಡೌನ್ ಹಿನ್ನೆಲೆ ಕಳೆದ ಕೆಲ ತಿಂಗಳಿನಿಂದ ಮೂಡನಹಳ್ಳಿಯಲ್ಲೇ ಇದ್ದರು. ಸೆ.25 ರ ರಾತ್ರಿ ಕಾರನ್ನು ಸ್ವಚ್ಛಗೊಳಿಸಿ ಮಾರನೆ ದಿನ ಬೆಂಗಳೂರು ಹೋಗಲು ಸಿದ್ಧತೆ ಆರಂಭಿಸಿದ್ದರು. ಕಾರಿನ ಒಳಗೆ ಕುಳಿತು ಗ್ಲಾಸ್ ಮೇಲೆತ್ತುವ ವೇಳೆ ರಘುಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.

ಈ ಕೃತ್ಯ ಮಾಡಿದ್ದು, ರಘು ದಾಯಾದಿ ಶಿವು ಎಂದು ಹೇಳಲಾಗುತ್ತಿದೆ. ಘಟನೆ ನಂತರ ಶಿವು ಇದೀಗ ತಲೆ ಮರೆಸಿಕೊಂಡಿದ್ದಾನೆ. ಇದನ್ನೂ ಓದಿ:  ಅಸ್ಸಾಂನಿಂದ ಬರುತ್ತಿದ್ದಾರೆ ನೂರಾರು ಕೂಲಿ ಕಾರ್ಮಿಕರು – ಸ್ಥಳೀಯರ ಆತಂಕ

ಈ ಪ್ರಕರಣ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಜರುಗಿದೆ.

Share This Article
Leave a Comment

Leave a Reply

Your email address will not be published. Required fields are marked *