ಬೆಂಗಳೂರು: ಬೆಕ್ಕು ರಕ್ಷಣೆಗೆಂದು ಮನೆಗೆ ಕರೆಸಿ ಯುವಕನ ಮೇಲೆ ಯುವತಿಯ ಕಡೆಯವರು ಹಲ್ಲೆ ನಡೆಸಿದ ಘಟನೆ ನಗರದ ಸಾರಕ್ಕಿ ಬಳಿ ಇಲಿಯಾಸ್ ನಗರದಲ್ಲಿ ನಡೆದಿದೆ.
ಪ್ರಾಣಿದಯಾ ಸಂಘದ ಸದಸ್ಯ ಉಸ್ಮಾನ್(24) ಹಲ್ಲೆಗೆ ಒಳಗಾದ ವ್ಯಕ್ತಿ. ಯುವತಿಯು ಸಾರಕ್ಕಿ ಬಳಿ ಬೆಕ್ಕು ರಕ್ಷಣೆ ಮಾಡಬೇಕಿದೆ ಎಂದು ಉಸ್ಮಾನ್ ಅವರನ್ನು ಕರೆಸಿಕೊಂಡಿದ್ದಾಳೆ. ಉಸ್ಮಾನ್ ಯುವತಿ ಮನೆ ಬಳಿ ಬಂದಾಗ ಮನೆ ಎದುರಿದ್ದ ನಾಲ್ವರು ಯುವಕರಿಂದ ಹಲ್ಲೆ ನಡೆದಿದೆ. ಹುಡುಗಿಯ ವಿಚಾರಕ್ಕೆ ಉಸ್ಮನ್ ಮೇಲೆ ಯುವಕರು ಹಲ್ಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಘಟನೆ ಸಂಬಂಧ ಈಗ ಉಸ್ಮಾನ್ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.