ತಿರುವನಂತಪುರಂ: ಕೆಲಸ (Job) ಬಿಡಲು ನಿರಾಕರಿಸಿದ ಪತ್ನಿಯನ್ನು(Wife) ಪತಿಯೇ ಕ್ರೂರವಾಗಿ ಥಳಿಸಿದ ಘಟನೆ ಕೇರಳದ (Kerala) ತಿರುವನಂತಪುರಂನಲ್ಲಿ ನಡೆದಿದೆ.
ತಿರುವನಂತಪುರಂ ಮೂಲದ ದಿಲೀಪ್ (27) ಬಂಧಿತ (Arrest) ವ್ಯಕ್ತಿ. ಈತನ ಪತ್ನಿ ಸೂಪರ್ ಮಾರ್ಕೆಟ್ನಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ದಿಲೀಪ್ಗೆ ಆಕೆ ಅಲ್ಲಿ ಕೆಲಸ ಮಾಡುವುದು ಇಷ್ಟವಿರಲಿಲ್ಲ. ಇದರಿಂದಾಗಿ ಆತ ಪತ್ನಿಗೆ ಕೆಲಸವನ್ನು ಬಿಡಲು ತಿಳಿಸಿದ್ದಾನೆ. ಆದರೆ ಆಕೆ ಒಪ್ಪದಿದ್ದಾಗ ಕ್ರೂರವಾಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೇ ದಿಲೀಪ್ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ವೀಡಿಯೋದಲ್ಲಿ ದಿಲೀಪ್ ಪತ್ನಿ ಸಾಲ ತೀರಿಸಲು ಕೆಲಸ ಮಾಡುತ್ತಿದ್ದೇನೆ ಎಂದು ಹೇಳುತ್ತಾಳೆ. ಆದರೆ ದಿಲೀಪ್ ಅದನ್ನು ಅರ್ಥ ಮಾಡಿಕೊಳ್ಳದೆ ಪತ್ನಿಯನ್ನು ಕ್ರೂರವಾಗಿ ಥಳಿಸಿದ್ದಾನೆ. ಇದರಿಂದಾಗಿ ಪತ್ನಿಯ ಮುಖವೆಲ್ಲವೂ ರಕ್ತ ಸಿಕ್ತವಾಗಿದೆ. ಇದನ್ನೂ ಓದಿ: ಇಎಂಐಯಲ್ಲಿ ಸ್ಮಾರ್ಟ್ ಫೋನ್ ಕೊಡಿಸಿದ ಪತಿ- ವಿಷಯ ತಿಳಿದ ಪತ್ನಿ ಆತ್ಮಹತ್ಯೆ
ಘಟನೆಗೆ ಸಂಬಂಧಿಸಿ ದಿಲೀಪ್ ವಿರುದ್ಧ ಆತನ ಪತ್ನಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಮಲಂಕಿಝ ಪೊಲೀಸರು ದಿಲೀಪ್ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ ಮುಕ್ತಾಯ- ಕೋಟ್ಯಾಂತರ ರೂ. ಕಾಣಿಕೆ ಸಂಗ್ರಹ