ಕೋಲ್ಕತ್ತಾ: ನಮ್ಮ ಹಾಗೂ ನಿಮ್ಮ ನಡುವಿನ ಪ್ರೀತಿಯಿಂದ ಪಶ್ಚಿಮ ಬಂಗಾಳ ಸಿಎಂ ಮಮತಾ ಬಾನರ್ಜಿ ಅವರಿಗೆ ಭಯ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ಪಶ್ಚಿಮ ಬಂಗಾಳದ ಠಾಕೂರ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಮಮತಾ ಬ್ಯಾನರ್ಜಿ ಹಾಗೂ ಅವರ ಪಕ್ಷದ ನಾಯಕರು ಯಾಕೆ ಮುಗ್ದ ಜನರನ್ನು ಕೊಲೆ ಮಾಡುತ್ತಿದ್ದಾರೆ ಎನ್ನುವುದು ನನಗೆ ಈಗ ಅರ್ಥವಾಗುತ್ತಿದೆ. ನಿಮ್ಮ ಹಾಗೂ ನಮ್ಮ ಪ್ರೀತಿಯ ಭಯ ಅವರಿಗೆ ಕಾಡುತ್ತಿದೆ ಎಂದು ಕುಟುಕಿದರು.
Prime Minister Narendra Modi addressing a public rally in Thakurnagar, West Bengal: Jisne karz liya uski 2.5 lakh ki maafi ka vaada kiya tha aur maafi huyi kewal Rs 13 ki. Ye kahani Madhya Pradesh ki hai, vahin Rajasthan mein sarkar ne toh haath hi khade kar diye pic.twitter.com/ZWBOvwo9Da
— ANI (@ANI) February 2, 2019
ಈ ಬಾರಿಯ ಬಜೆಟ್ ಮೂಲಕ ಐತಿಹಾಸಿಕ ಯೋಜನೆಗಳಿಗೆ ಜಾಲನೆ ನೀಡಲಾಗುತ್ತಿದೆ. ರೈತರ ಪೂರಕ ಬಜೆಟ್ ಇದಾಗಿದೆ. ಅಷ್ಟೇ ಅಲ್ಲದೆ 12 ಕೋಟಿ ಸಣ್ಣ ಹಿಡುವಳಿದಾರರು, 30ರಿಂದ 40 ಕೋಟಿ ಕಾರ್ಮಿಕರು ಹಾಗೂ 3 ಕೋಟಿ ಮಧ್ಯಮ ವರ್ಗದ ಕುಟುಂಬಗಳ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು.
ಬಹಿರಂಗ ಸಭೆಯಲ್ಲಿ ಗದ್ದಲ ಉಂಟಾಗಿದ್ದರಿಂದ ನರೇಂದ್ರ ಮೋದಿ ಅವರು ಚಿಕ್ಕದಾಗಿ ಭಾಷಣ ಮುಗಿಸಿದರು. ಸಭೆಯಲ್ಲಿ ಸಾವಿರಾರು ಜನರು ಸೇರಿದ್ದರು.
Amazing response at the rally in Thakurnagar. Watch. https://t.co/M0EdKZDD0B
— Narendra Modi (@narendramodi) February 2, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv