ಪಕ್ಷಾಂತರಿಗಳಿಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ ಮಲ್ಲಿಕಾರ್ಜುನ ಖರ್ಗೆ!

Public TV
1 Min Read
KHARGE

ಬೆಂಗಳೂರು: ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳಿಗೆ ಒಪ್ಪಿಗೆ ಇರುವ ಯಾರು ಬೇಕಾದರೂ ಪಕ್ಷಕ್ಕೆ ಸೇರಬಹುದು, ಆದರೇ ಪಕ್ಷಕ್ಕ ಸೇರ್ಪಡೆ ಮಾಡಿಕೊಳ್ಳುವ ಅಂತಿಮ ನಿರ್ಧಾರದಲ್ಲಿ ಹೈಕಮಾಂಡ್ ಅನುಮತಿ ಕಡ್ಡಾಯ ಎಂದು ಲೋಕಸಭಾ ಸಂಸದೀಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಬಿಜೆಪಿ ಪಕ್ಷದಿಂದ ಹಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು. ಆದರೆ ಪಕ್ಷಕ್ಕೆ ಬಂದ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಮುಖಂಡರು ಬಿಜೆಪಿ ಗೆ ಹೋಗ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಹೇಳ್ತಾರೆ. ಯಾರು, ಯಾಕೆ, ಯಾವಾಗ ಹೋಗ್ತಾರೆ ಅನ್ನೋದನ್ನ ನೋಡೋಣ ಎಂದು ಹೇಳಿದರು.

congress1 Copy 1 1

ಇದೇ ವೇಳೆ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ಖರ್ಗೆ, ಕೇದಾರನಾಥ್ ಪ್ರಕೃತಿ ವಿಕೋಪದ ವೇಳೆ ಅಂದಿನ ಯುಪಿಎ ಕೇಂದ್ರ ಸರ್ಕಾರ ಏನು ಮಾಡಲಿಲ್ಲ ಅಂತಾ ಪ್ರಧಾನಿ ಮೋದಿ ಹೇಳಿರೋದು ಸರಿಯಲ್ಲ. ಅಂದು ನಾನು ರೈಲ್ವೇ ಮಂತ್ರಿಯಾಗಿದ್ದೆ. ಮೋದಿ ಗುಜರಾತ್ ಸಿಎಂ ಆಗಿ ಗುಜರಾತ್ ಜನತೆಗೆ ಅಲ್ಲಿ ತೊಂದರೆಯಾಗಿದೆ ಅಂದಾಗ ನಾನೇ ಎರಡು ರೈಲು ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟೆ ಅಂತ ಸ್ಪಷ್ಟಪಡಿಸಿದ್ರು.

ಹಿಮಾಚಲ ಪ್ರದೇಶ ರಾಜ್ಯದ ಚುನಾವಣೆ ಘೋಷಣೆ ಮಾಡುತ್ತೀರಿ. ಆದ್ರೆ ಗುಜರಾತ್ ಚುನಾವಣೆ ದಿನಾಂಕವನ್ನು ಮಾತ್ರ ಘೋಷಣೆ ಮಾಡಲ್ಲ ಯಾಕೆ ಅಂತ ಪ್ರಶ್ನೆ ಮಾಡಿದ ಖರ್ಗೆ ಮೋದಿ ಕೇವಲ ಸುಳ್ಳು ಹೇಳುತ್ತಿದ್ದಾರೆ. ಸಾಮಾನ್ಯ ಜನರಿಗೆ ತೊಂದರೆ ಕೊಟ್ಟಿದ್ದಾಯ್ತು. ಸಂಸತ್ತಿನಲ್ಲಿ ಜಿಎಸ್‍ಟಿ ಕಡಿಮೆ ಮಾಡಲಿಕ್ಕೆ ಒತ್ತಾಯ ಮಾಡಿದರೂ ಮಾಡಲಿಲ್ಲ. ಈಗ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಜಿಎಸ್‍ಟಿ ಕಡಿಮೆ ಮಾಡಲು ಮೋದಿ ಹೊರಟಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.

CONGRESS BJP

 

modhi g2

Share This Article
Leave a Comment

Leave a Reply

Your email address will not be published. Required fields are marked *