ತಿರುವನಂತಪುರ: ಮಲಯಾಳಂ ಕಿರುತೆರೆ ನಟ ದಿಲೀಪ್ ಶಂಕರ್ (Dileep Sankar) ಅವರು ತಿರುವನಂತಪುರ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯ ಬಳಿಕ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ:ತ್ರಿವಿಕ್ರಮ್ ವಿಚಾರಕ್ಕೆ ಕಾಲೆಳೆದ ಕಿಚ್ಚ- ನಾಚಿ ನೀರಾದ ಭವ್ಯಾ
ನಟ ದಿಲೀಪ್ ಹೋಟೆಲ್ನ ಕೊಠಡಿಯಲ್ಲಿ 4 ದಿನಗಳ ಹಿಂದೆ ಚೆಕ್ ಇನ್ ಆಗಿದ್ದರು. ಹೋಟೆಲ್ ಸಿಬ್ಬಂದಿ ಪ್ರಕಾರ, ಕಳೆದ 2 ದಿನಗಳಿಂದ ದಿಲೀಪ್ ರೂಮ್ನಿಂದ ಹೊರಗೆ ಬಂದಿರಲಿಲ್ಲ. ಡಿ.29ರಂದು ರೂಮ್ನಿಂದ ದುರ್ವಾಸನೆ ಬಂದ ಹಿನ್ನೆಲೆ ಪರಿಶೀಲನೆ ನಡೆಸಿದಾಗ ದಿಲೀಪ್ ಶವವಾಗಿ ಪತ್ತೆಯಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಾವಿಗೆ ನಿಖರವಾದ ಕಾರಣ ಪತ್ತೆಯಾಗಲಿದೆ.
ದಿಲೀಪ್ ಅವರ ಸಹ ನಟರು ಅವರಿಗೆ ಫೋನ್ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಳವಳಗೊಂಡು ಅವರನ್ನು ಪರೀಕ್ಷಿಸಲು ಹೋಟೆಲ್ಗೆ ಭೇಟಿ ನೀಡಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿವೆ. ಇದನ್ನೂ ಓದಿ:ಡಿ.ಕೆ.ಸುರೇಶ್ ಹೆಸರೇಳಿ ಚಿನ್ನ ವಂಚನೆ ಕೇಸ್ – ಯಾವುದೇ ಕ್ಷಣದಲ್ಲಿ ನಟ ಧರ್ಮೇಂದ್ರ ಬಂಧನ ಸಾಧ್ಯತೆ
ಇನ್ನೂ ‘ಪಂಚಾಗ್ನಿ’ (Panchagni) ಧಾರಾವಾಹಿಯ ಚಿತ್ರೀಕರಣಕ್ಕಾಗಿ ನಟ ದಿಲೀಪ್ ಶಂಕರ್ ತಿರುವನಂತಪುರಂಗೆ ತೆರಳಿದ್ದರು. ಎರಡು ದಿನಗಳ ಮೊದಲು ಅವರು ಕೊನೆಯ ಬಾರಿಗೆ ಚಿತ್ರೀಕರಣಕ್ಕೆ ಹಾಜರಿದ್ದರು ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ. ದಿಲೀಪ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ಧಾರಾವಾಹಿ ನಿರ್ದೇಶಕ ಮನೋಜ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.