Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಳ್ಳಿಗಳಲ್ಲಿ ಸುಗ್ಗಿ ಸಂಕ್ರಾಂತಿ – ಹಬ್ಬ ಆಚರಣೆ ಹೇಗಿರುತ್ತೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಹಳ್ಳಿಗಳಲ್ಲಿ ಸುಗ್ಗಿ ಸಂಕ್ರಾಂತಿ – ಹಬ್ಬ ಆಚರಣೆ ಹೇಗಿರುತ್ತೆ?

Karnataka

ಹಳ್ಳಿಗಳಲ್ಲಿ ಸುಗ್ಗಿ ಸಂಕ್ರಾಂತಿ – ಹಬ್ಬ ಆಚರಣೆ ಹೇಗಿರುತ್ತೆ?

Public TV
Last updated: January 15, 2026 11:47 am
Public TV
Share
2 Min Read
makar sankranti 1
SHARE

ಸಂಕ್ರಾಂತಿ (Makar Sankranti) ಅಂದ್ರೆ ಸುಗ್ಗಿಯ ಸಂಭ್ರಮ. ಮುಂಗಾರಿನಲ್ಲಿ ಬಿತ್ತಿದ ಬೆಳೆ ಫಸಲು ನೀಡಲು ಸಜ್ಜಾಗಿ, ಭೂಮಿ ಹಸಿರಿನಿಂದ ನಳನಳಿಸುವ ಸುಸಂದರ್ಭ. ಸಂಕ್ರಾಂತಿಯೆಂದರೆ ಕೃಷಿಕರಿಗೆ ಎಲ್ಲಿಲ್ಲದ ಹಿಗ್ಗು. ಮನುಷ್ಯನಿಗೆ ಅನ್ನ ನೀಡುವ ಭೂತಾಯಿಯನ್ನು ಪೂಜಿಸಿ ನಮಿಸುವ ಹಬ್ಬವಿದು. ಅಪ್ಪಟ ಹಳ್ಳಿ ಸೊಗಡಿನ ಹಬ್ಬ ಸಂಕ್ರಾಂತಿ. ಗ್ರಾಮೀಣ ಭಾಗಗಳಲ್ಲಿ ಸುಗ್ಗಿ ಸಡಗರ ಜೋರಾಗಿರುತ್ತದೆ. ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಸಂಕ್ರಾಂತಿ ವಿಶೇಷ ಆಚರಣೆಯಾಗಿ ನಡೆದುಕೊಂಡು ಬಂದಿದೆ.

ಉತ್ತರದಲ್ಲಿ ರೊಟ್ಟಿ-ಪಲ್ಯ ಹಬ್ಬದೂಟ
ಉತ್ತರ ಕಾರ್ನಾಟಕ ಭಾಗದಲ್ಲಿ ಸಂಕ್ರಾಂತಿಯೆಂದರೆ ಹಬ್ಬದೂಟ. ಮನೆ ಸ್ವಚ್ಛಗೊಳಿಸಿ, ತಳಿರು-ತೋರಣಗಳಿಂದ ಸಿಂಗರಿಸಿ, ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಪರಸ್ಪರರು ಹಂಚಿ ತಿನ್ನುವುದು. ಈ ಭಾಗದ ವಿಶೇಷ ಖಾದ್ಯಗಳಾದ ಜೋಳ, ಸಜ್ಜೆ ರೊಟ್ಟಿ, ಪುಂಡಿ ಪಲ್ಯ, ಎಣ್ಣೆಗಾಯಿ ಪಲ್ಯ, ಸೊಪ್ಪು ಪಲ್ಯ, ಶೇಂಗಾ ಚಟ್ನಿ, ಪಚಡಿ, ಹೋಳಿಗೆ, ಹಪ್ಪಳ ಮೊದಲಾದ ಖಾದ್ಯಗಳನ್ನು ಮಾಡಿ ಸವಿಯುತ್ತಾರೆ. ಇದನ್ನೂ ಓದಿ: ಮಕರ ಸಂಕ್ರಾಂತಿ – ಉತ್ತರಾಯಣದಲ್ಲೇ ಭೀಷ್ಮ ದೇಹ ತ್ಯಜಿಸಿದ್ದು ಯಾಕೆ?

Ellu Bella Makar Sankranti 2

ದಕ್ಷಿಣದಲ್ಲಿ ಸಂಕ್ರಾಂತಿ ಹಿಗ್ಗು
ದಕ್ಷಿಣ ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹೆಂಗಸರು ಮನೆಗಳನ್ನು ಶುಚಿಗೊಳಿಸಿ, ತೋರಣಗಳಿಂದ ಅಲಂಕರಿಸಿ, ಅಂಗಳದಲ್ಲಿ ರಂಗೋಲಿ ಬಿಟ್ಟು ಸಂಗರಿಸುತ್ತಾರೆ. ಪುರುಷರು ಜಾನುವಾರುಗಳನ್ನು ತೊಳೆದು ಅವುಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡುತ್ತಾರೆ. ರಾಸುಗಳನ್ನು ಕಿಚ್ಚಾಯಿಸಿ ಬಳಿಕ ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ. ಮನೆಯಲ್ಲಿ ಹಬ್ಬದೂಟ ತಯಾರಿಸಿ ಸವಿಯುತ್ತಾರೆ.

ರಾಸುಗಳ ಕಿಚ್ಚು ಹಾಯಿಸುವುದು
ಸಂಕ್ರಾಂತಿ ಹಬ್ಬದಂದು ಹಳ್ಳಿಗಳಲ್ಲಿ ಹಸುಗಳನ್ನು ತೊಳೆದು ಅಲಂಕರಿಸುತ್ತಾರೆ. ಹಸು, ಕುರಿ, ಮೇಕೆ, ಕೋಣ, ಎಮ್ಮೆಗಳ ಮೈ-ಕೊಂಬಿಗೆ ಬಣ್ಣ ಬಳಿದು, ಹೂವು ಮತ್ತು ಬಲೂನ್‌ಗಳಿಂದ ಸಿಂಗರಿಸುತ್ತಾರೆ. ಸಾಯಂಕಾಲದ ಹೊತ್ತಿಗೆ ಊರಿನವರೆಲ್ಲ ಹಸುಗಳನ್ನು ಒಂದು ಕಡೆ ಸೇರಿಸುತ್ತಾರೆ. ಒಣಹುಲ್ಲನ್ನು ರಸ್ತೆಗೆ ಅಡ್ಡಲಾಗಿ ಹಾಕಿ ಬೆಂಕಿ ಹಚ್ಚುತ್ತಾರೆ. ಬೆಂಕಿಯಲ್ಲಿ ರಾಸುಗಳನ್ನು ನೆಗೆಸುತ್ತಾರೆ. ಜಾನುವಾರುಗಳು ಮಾಗಿಯ ಚಳಿಯಿಂದ ಮೈಕೊಡವಿ ನಿಲ್ಲಲಿ ಎಂಬ ಉದ್ದೇಶದಿಂದ ಕಿಚ್ಚು ಹಾಯಿಸಲಾಗುತ್ತದೆ. ಚಳಿಗಾಲದಲ್ಲಿ ವೈರಲ್ ಫೀವರ್ ಸಾಮಾನ್ಯ. ರಾಸುಗಳ ಮೈಮೇಲಿನ ಬ್ಯಾಕ್ಟೀರಿಯಾ ತೊಲಗಲೆಂದು ಕಿಚ್ಚು ಹಾಯಿಸುವ ಆಚರಣೆ ಇದೆ. ಇದನ್ನೂ ಓದಿ: ಮಕರ ಸಂಕ್ರಾಂತಿ – ಕಾಶಿ ಚಂದ್ರಮೌಳೇಶ್ವರ ಗರ್ಭಗುಡಿಯ ಶಿವಲಿಂಗದ ಮೇಲೆ ಸೂರ್ಯರಶ್ಮಿ ಸ್ಪರ್ಶ

sankranti bull

ಆರೋಗ್ಯಕರ ಊಟ
ಸಂಕ್ರಾಂತಿ ಹಬ್ಬದೂಟ ಆರೋಗ್ಯ ಪ್ರಧಾನವಾಗಿದೆ. ಎಳ್ಳು-ಬೆಲ್ಲ, ಪೊಂಗಲ್, ಕಿಚಡಿ, ಹಸಿಕಾಳುಗಳ ಪಲ್ಯ ಮತ್ತು ಸಾಂಬಾರ್ ಎಲ್ಲವೂ ಚಳಿಗಾಲದಲ್ಲಿ ಮನುಷ್ಯನಿಗೆ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಪೂರಕವಾಗಿವೆ. ಶೀತಗಾಳಿ ವಾತಾವರಣದಲ್ಲಿ ಮನುಷ್ಯನ ಚರ್ಮ ಕಾಂತಿಹೀನವಾಗುತ್ತದೆ. ದೇಹದಲ್ಲಿ ಎಣ್ಣೆಯಂಶದ ಕೊರತೆ ಇರುತ್ತದೆ. ಅದನ್ನು ಸರಿದೂಗಿಸಲು ಎಳ್ಳು ಸೇವನೆ ಮುಖ್ಯ. ಪೊಂಗಲ್ ಮತ್ತು ಕಿಚಡಿ ತಯಾರಿಕೆಗೆ ಅರಿಶಿನ ಬಳಸುವುದರಿಂದ ಅದರಲ್ಲಿ ಅಗತ್ಯ ರೋಗನಿರೋಧಕ ಶಕ್ತಿ ದೊರೆಯುತ್ತದೆ. ಇನ್ನು ಸುಗ್ಗಿಯಲ್ಲಿ ಶೇಂಗ, ತೊಗರಿ, ಹಸಿ ಅವರೆ ಮೊದಲಾದವನ್ನು ಬೆಳೆಯಲಾಗುತ್ತದೆ. ಇವುಗಳ ಸೇವನೆಯಿಂದಲೂ ಸಾಕಷ್ಟು ಪ್ರಯೋಜನಗಳಿವೆ.

ಕೃಷಿಕರ ಸುಗ್ಗಿ ಹಬ್ಬ
ಸಂಕ್ರಾಂತಿಯು ಕೃಷಿಕರ ಪಾಲಿಗೆ ಸುಗ್ಗಿ. ಭೂಮಿಯಲ್ಲಿ ಬೆಳೆ ಬೆಳೆಗಳನ್ನು ರಾಶಿ ಹಾಕಿ ಪೂಜೆ ಸಲ್ಲಿಸುತ್ತಾರೆ. ಭೂತಾಯಿ ಮಡಿಲಲ್ಲೇ ಕುಳಿತು ಹಬ್ಬದೂಟ ಮಾಡುತ್ತಾರೆ. ಭೂಮಿ ನಮಗೆ ಅನ್ನ ಕೊಡುತ್ತದೆ. ರಾಸುಗಳು ಭೂಮಿಯನ್ನು ಉತ್ತು ಬೆಳೆ ಬರಲು ಶ್ರಮ ಪಡುತ್ತವೆ. ತ್ಯಾಗಮಯಿಯಂಥ ಭೂಮಿ ಮತ್ತು ಜಾನುವಾರುಗಳನ್ನು ಈ ಸಂದರ್ಭದಲ್ಲಿ ಪೂಜಿಸಬೇಕು. ಭೂಮಿಗೆ ನಾವು ಎಂದೆಂದೂ ಋಣಿಯಾಗಿರಬೇಕೆಂಬ ಧ್ಯೇಯದಿಂದ ಹಬ್ಬ ಆಚರಿಸಲಾಗುತ್ತದೆ. ಇದನ್ನೂ ಓದಿ: ವರ್ಷದ ಮೊದಲ ಹಬ್ಬ; ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಆಚರಣೆ ಹೇಗೆ?

TAGGED:bullfarmersfestivalMakar SankrantiMakara Sankrantiಮಕರ ಸಂಕ್ರಾಂತಿರೈತರುಹಬ್ಬ
Share This Article
Facebook Whatsapp Whatsapp Telegram

Cinema news

Gill and Ashwini Gowda
ಕಿತ್ತಾಟದಿಂದ ಕ್ಷಮೆಯತ್ತ – ಒಬ್ಬರಿಗೊಬ್ಬರು Sorry ಕೇಳಿ, ನಗುವಿನ ಅಪ್ಪುಗೆ ನೀಡಿದ ಗಿಲ್ಲಿ, ಅಶ್ವಿನಿ
Cinema Latest Main Post Sandalwood TV Shows
Karunya Ram Samrudhi Ram
25 ಲಕ್ಷ ವಂಚನೆ – ತಂಗಿ ವಿರುದ್ಧವೇ ನಟಿ ಕಾರುಣ್ಯಾ ರಾಮ್‌ ದೂರು
Cinema Crime Latest Main Post Sandalwood
Kavya
BBK 12 | ಧ್ರುವಂತ್‌ ಔಟ್‌ – Top 6 ಸ್ಪರ್ಧಿಯಾಗಿ ಕಾವ್ಯ ಸೇಫ್‌
Cinema Latest Main Post TV Shows
Shri Mahadev
ಅಮೂಲ್ಯ ನಟನೆಯ ಪೀಕಬೂ ಚಿತ್ರಕ್ಕೆ ಶ್ರೀರಾಮ್ ಹೀರೋ
Cinema Latest Sandalwood Top Stories

You Might Also Like

Tenali Son in Law
Latest

ಅಳಿಯನಿಗೆ 158 ಬಗೆಯ ಖಾದ್ಯ ಬಡಿಸಿ ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದ ಅತ್ತೆ – ಮಾವ!

Public TV
By Public TV
50 seconds ago
Gavigangadhareshwara 3 1
Bengaluru City

ʻಸಂಕ್ರಾಂತಿʼ ವಿಸ್ಮಯಕ್ಕೆ ಸಾಕ್ಷಿಯಾದ ಸನ್ನಿಧಿ – ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸಿದ ಸೂರ್ಯ ರಶ್ಮಿ

Public TV
By Public TV
4 minutes ago
Shivagange Hills
Bengaluru Rural

ವಿಸ್ಮಯದಂತೆ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದ ತುದಿಯಲ್ಲಿ ತೀರ್ಥ ಉದ್ಭವ

Public TV
By Public TV
7 minutes ago
v.s.patil
Latest

ಮಾಜಿ ಶಾಸಕ ವಿ.ಎಸ್ ಪಾಟೀಲ್ ಡಬಲ್ ಬ್ಯಾರಲ್ ಬಂದೂಕು ಕಳ್ಳತನ

Public TV
By Public TV
19 minutes ago
Zomato Agent
Latest

ತಡರಾತ್ರಿ ಮಹಡಿಯಿಂದ ಕೆಳಗೆ ಬರಲ್ಲ ಎಂದ ಗ್ರಾಹಕ; ತಂದಿದ್ದ ಆರ್ಡರ್‌ ತಾನೇ ತಿಂದ ಫುಡ್‌ ಡೆಲಿವರಿ ಬಾಯ್‌

Public TV
By Public TV
41 minutes ago
K. S. Eshwarappa
Davanagere

ಬಿಜೆಪಿಗೆ ಮರಳುವಂತೆ ಕಾರ್ಯಕರ್ತರಿಂದ ಒತ್ತಡ ಬರುತ್ತಿದೆ: ಈಶ್ವರಪ್ಪ

Public TV
By Public TV
42 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?