Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಕರ ಸಂಕ್ರಾಂತಿ 2026: ಗಂಗೆ ಭಗಿರಥನಿಗೊಲಿದ ದಿನ – ಪವಿತ್ರ ಸ್ನಾನದಿಂದ ಕೋಟಿ ಪುಣ್ಯ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮಕರ ಸಂಕ್ರಾಂತಿ 2026: ಗಂಗೆ ಭಗಿರಥನಿಗೊಲಿದ ದಿನ – ಪವಿತ್ರ ಸ್ನಾನದಿಂದ ಕೋಟಿ ಪುಣ್ಯ!

Latest

ಮಕರ ಸಂಕ್ರಾಂತಿ 2026: ಗಂಗೆ ಭಗಿರಥನಿಗೊಲಿದ ದಿನ – ಪವಿತ್ರ ಸ್ನಾನದಿಂದ ಕೋಟಿ ಪುಣ್ಯ!

Public TV
Last updated: January 12, 2026 2:59 pm
Public TV
Share
3 Min Read
Ganga River
SHARE

ಮಕರ ಸಂಕ್ರಾಂತಿಯಂದು ಮಾಡುವ ಗಂಗಾ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಯಾಕೆಂದರೆ ಈ ದಿನ ಗಂಗೆಯು ಭೂಮಿಯಲ್ಲಿ ಜನಿಸಿದ ದಿನ. ಮಕರ ಸಂಕ್ರಾಂತಿಯಂದು ಗಂಗೆಯಲ್ಲಿ ಸ್ನಾನ ಮಾಡಲು ಸಾಧ್ಯಾವಾಗದಿದ್ದರೆ, ಸ್ನಾನ ಮಾಡುವ ನೀರಿಗೆ ಗಂಗಾ ನೀರನ್ನು ಬೆರೆಸಿ ಸ್ನಾನ ಮಾಡಬಹುದು. ಮಕರ ಸಂಕ್ರಾಂತಿಯಂದು ಗಂಗಾ ಸ್ನಾನ ಯಾಕೆ ಮಾಡಬೇಕು.? ಈ ದಿನ ಗಂಗಾ ಸ್ನಾನ ಮಾಡುವುದರ ಪ್ರಯೋಜನವೇನು..? ಗಂಗೆ ಭೂಮಿಗೆ ಬರಲು ಕಾರಣವೇನು? ಗಂಗಾ ಸ್ನಾನದ ಮಹತ್ವ ಏನು ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಮಕರ ಸಂಕ್ರಾಂತಿಯ ಹಬ್ಬಕ್ಕೆ ಸನಾತನ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಸೂರ್ಯ ತನ್ನ ಮಗನ ರಾಶಿಚಕ್ರವಾದ ಮಕರ ರಾಶಿಯನ್ನು ಪ್ರವೇಶಿಸಿದ ದಿನವನ್ನೇ ಮಕರ ಸಂಕ್ರಾಂತಿಯೆಂದು ಆಚರಿಸಲಾಗುತ್ತದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ, ಸೂರ್ಯ, ಬುಧ, ಗುರು, ಚಂದ್ರ ಮತ್ತು ಶನಿ ಸೇರಿದಂತೆ ಐದು ಗ್ರಹಗಳ ಸಂಯೋಜನೆ ಇರುತ್ತದೆ. ಈ ವಿಶೇಷ ಸಂಯೋಜನೆಯಂದು, ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ.

Baghiratha Ganga 1

ಇದನ್ನು ಮಾಡುವುದರಿಂದ ಮೋಕ್ಷ ಮತ್ತು ಸದ್ಗುಣಗಳನ್ನು ಪಡೆಯಬಹುದು. ಅಲ್ಲದೆ, ಗಂಗೆಯಲ್ಲಿ ಸ್ನಾನ ಮಾಡುವುದರಿಂದ, ಜನ್ಮ ಜನ್ಮಾಂತರದ ಪಾಪಗಳು ನಾಶವಾಗುತ್ತವೆ ಮತ್ತು ಎಲ್ಲಾ ದೇವಾನು ದೇವತೆಗಳು ಸಂತೋಷಗೊಳ್ಳುತ್ತಾರೆ ಎಂಬ ನಂಬಿಕೆ ಇದೆ.

ಗಂಗೆ ಭೂಮಿಗೆ ಬಂದಿದ್ದು
ಮಕರ ಸಂಕ್ರಾಂತಿಯ ದಿನದಂದು, ತಾಯಿ ಗಂಗಾಳು ಭೂಮಿಗೆ ಇಳಿದು ರಾಜ ಭಗೀರಥನನ್ನು ಕಪಿಲ ಮುನಿಯ ಆಶ್ರಮದ ಮೂಲಕ ಹಿಂಬಾಲಿಸಿದ್ದಳು, ಇದರ ಹಿಂದೆ ಒಂದು ಪುರಾಣ ಕಥೆಯಿದೆ. ಪ್ರಾಚೀನ ಕಾಲದಲ್ಲಿ ಸೂರ್ಯವಂಶದ ಚಕ್ರವರ್ತಿ ಸಾಗರ, ಅವನಿಗೆ ಇಬ್ಬರು ರಾಣಿಯರು ಇದ್ದರು. ಅವನಿಗೆ ರಾಣಿ ಕೇಶನಿ ಎನ್ನುವ ಪತ್ನಿಯಿಂದ ಒಬ್ಬ ಮಗನಿದ್ದನು ಮತ್ತು ಎರಡನೇ ಪತ್ನಿಯಿಂದ 60 ಸಾವಿರ ಗಂಡು ಮಕ್ಕಳಿದ್ದರು. ಒಂದು ದಿನ ರಾಜ ಸಾಗರನು ಅಶ್ವಮೇಧ ಯಾಗ ಮಾಡುವ ಸಂಕಲ್ಪ ಮಾಡಿದ. ಇದಕ್ಕಾಗಿ ಅವನು ತನ್ನ ಕುದುರೆಯನ್ನು ಸಂಚಾರಕ್ಕೆ ಕಳುಹಿಸಿದನು. ರಾಜ ಸಾಗರನ ಕುದುರೆಯನ್ನು ಇಂದ್ರ ದೇವನು ಕದ್ದು ಪಾತಾಳ ಲೋಕದಲ್ಲಿ ಕಪಿಲ ಮುನಿಯ ಆಶ್ರಮದಲ್ಲಿ ಕಟ್ಟಿ ಹಾಕುತ್ತಾನೆ.

ಸಾಗರ ರಾಜನ ತಪಸ್ಸು
ರಾಜನು ತನ್ನ 60 ಸಾವಿರ ಗಂಡು ಮಕ್ಕಳನ್ನು ಕರೆದು ಅಶ್ವಮೇಧ ಯಾಗಕ್ಕೆ ಬಿಟ್ಟ ಕುದುರೆಯನ್ನು ಮರಳಿ ಕರೆತರುವಂತೆ ಆದೇಶಿಸಿದನು. ಕಪಿಲ ಮುನಿಯ ಆಶ್ರಮದಲ್ಲಿ ಕಟ್ಟಿದ ಕುದುರೆಯನ್ನು ನೋಡಿದ ಆಶ್ರಮದ ಮೇಲೆ ದಾಳಿ ಮಾಡಿದರು. ಇದರಿಂದ ಕೋಪಗೊಂಡ ಕಪಿಲ ಮುನಿ ತನ್ನ ಕಣ್ಣುಗಳ ಜ್ವಾಲೆಯಿಂದ 60 ಸಾವಿರ ಗಂಡು ಮಕ್ಕಳನ್ನು ಸುಟ್ಟು ಬೂದಿ ಮಾಡುತ್ತಾನೆ. ರಾಜ ಸಾಗರ ಈ ಬಗ್ಗೆ ತಿಳಿದಾಗ, ಕಪಿಲ ಮುನಿ ಅವರ ಬಳಿ ಕ್ಷಮೆಗಾಗಿ ಪ್ರಾರ್ಥಿಸಿದರು. ಆಗ ಋಷಿ ಗಂಗೆಯ ನೀರಿನಿಂದ ಮಾತ್ರ ಈ ಪಾಪದಿಂದ ಸ್ವಾತಂತ್ರ್ಯ ಪಡೆಯಲು ಸಾಧ್ಯ ಎಂದು ಹೇಳಿದನು. ರಾಜನು ತನ್ನ ಮೊಮ್ಮಗನಾದ ಅಂಶುಮಾನನ್ನು ಪಟ್ಟಾಧಿಕಾರಿಯನ್ನಾಗಿ ಮಾಡಿ ತಪಸ್ಸಿಗೆ ಹೋಗುತ್ತಾನೆ.

ಇದರ ನಂತರ, ಭಗೀರಥನ ಮೊಮ್ಮಗನಾದ ಅಂಶುಮಾನನು ಇತ್ತ ತನ್ನ ಅಜ್ಜನ ರಾಜ್ಯವನ್ನು ಆಳಲು ಮುಂದಾದರೆ, ಭಗೀರಥನು ತನ್ನ ಪೂರ್ವಜರ ಆತ್ಮದ ಶಾಂತಿಗಾಗಿ ಕಠಿಣ ತಪಸ್ಸು ಮಾಡಿದನು. ಇದರಿಂದ ಸಂತಸಗೊಂಡ ತಾಯಿ ಗಂಗಾ ಅವರ ಪ್ರಾರ್ಥನೆಯನ್ನು ಸ್ವೀಕರಿಸಿದಳು. ಆಕೆಯ ಪ್ರವಾಹದ ಹರಿವು ಎಷ್ಟು ವೇಗವಾಗಿತ್ತೆಂದರೆ ಭೂಮಿಗೆ ವಿನಾಶಕ್ಕೆ ತಳ್ಳುವ ಅಪಾಯವಿತ್ತು. ಇದಕ್ಕಾಗಿ ಭಗೀರಥ ಮಹಾರಾಜನು ಶಿವನನ್ನು ಧ್ಯಾನಿಸಿ ಸಹಾಯಕ್ಕಾಗಿ ಮನವಿ ಮಾಡಿದ.

Baghiratha Ganga

ಭಗೀರಥನ ಧ್ಯಾನದಿಂದ ಶಿವನು ಸಂತಸಗೊಂಡು ಆತನಿಗೆ ಗಂಗೆಯನ್ನು ಭೂಮಿಗೆ ತರುವಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡುತ್ತಾನೆ. ಭಗೀರಥನ ತಪಸ್ಸಿಗೆ ಮೆಚ್ಚಿದ ಗಂಗೆಯು ಭೂಮಿಗೆ ಬಂದ ಶಿವನ ತನ್ನ ಜಟೆಯಿಂದ ಗಂಗೆಯನ್ನು ಬಿಗಿ ಹಿಡಿದು ಆಕೆಯ ಹರಿವನ್ನು ನಿಯಂತ್ರಿಸುತ್ತಾನೆ.

ಶಿವನ ಜಟೆಯಿಂದ ಗಂಗೆಯು ಸರಾಗವಾಗಿ ಹರಿದು ಭೂಮಿಗೆ ಬಂದು ಭಗೀರಥನನ್ನು ಅನುಸರಿಸಿ ಕಪಿಲ ಮುನಿಯ ಆಶ್ರಮಕ್ಕೆ ಹೋದಳು, ಅಲ್ಲಿ ರಾಜ ಸಾಗರನ 60 ಸಾವಿರ ಪುತ್ರರು ಆಕೆಯಿಂದ ವಿಮೋಚನೆಗೊಂಡರು. ಬಳಿಕ ಗಂಗೆ ಸಮುದ್ರ ಸೇರಿದಳು.

ಮಕರ ಸಂಕ್ರಾಂತಿಯ ದಿನದಂದು ತಾಯಿ ಗಂಗೆಯು ಪವಿತ್ರ ನೀರಿನ ರೂಪದಲ್ಲಿ ಭೂಮಿಯನ್ನು ತಲುಪಿದಳು. ಅಂದಿನಿಂದ ಯಾವ ವ್ಯಕ್ತಿ ಗಂಗೆಯಲ್ಲಿ ಸ್ನಾನ ಮಾಡುತ್ತಾನೋ ಆ ವ್ಯಕ್ತಿಯು ಮೋಕ್ಷವನ್ನು ಪಡೆಯುತ್ತಾನೆ. ಅವರ ಎಲ್ಲಾ ಪಾಪಗಳು ನಾಶವಾಗುತ್ತದೆ ಎನ್ನುವ ನಂಬಿಕೆಯಿದೆ. ಅಷ್ಟು ಮಾತ್ರವಲ್ಲ, ಆತನ ಎಲ್ಲಾ ತೊಂದರೆಗಳು ಕೂಡ ದೂರಾಗುವುದು ಎನ್ನಲಾಗುತ್ತದೆ.

TAGGED:Ganga SnaanHindu FestivalMakar Sankranti 2026
Share This Article
Facebook Whatsapp Whatsapp Telegram

Cinema news

YASH 5
ಮುಂಬೈ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ರಾಕಿಭಾಯ್
Cinema Sandalwood
TVK Vijay
ಕರೂರು ಕಾಲ್ತುಳಿತ ಪ್ರಕರಣ – 7 ಗಂಟೆಗೂ ಹೆಚ್ಚು ಕಾಲ ನಟ ವಿಜಯ್‌ಗೆ CBI ಗ್ರಿಲ್
Bengaluru City Cinema Latest Sandalwood Top Stories
Toxic
ಯಶ್ ʻಟಾಕ್ಸಿಕ್ʼ ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು!
Bengaluru City Cinema Districts Karnataka Latest Sandalwood Top Stories
Karikaada
ʻಕರಿಕಾಡʼ ಸಿನಿಮಾದ ಮಾದಕ ಸಾಂಗ್‌ಗೆ ಸೊಂಟ ಬಳುಕಿಸಿದ ಕೃತಿ ವರ್ಮಾ
Cinema Latest Sandalwood

You Might Also Like

Bangladesh
Latest

ಬಾಂಗ್ಲಾದಲ್ಲಿ ಮುಂದುವರಿದ ಹಿಂದೂಗಳ ಹತ್ಯೆ ಸರಣಿ – ಆಟೋ ಡ್ರೈವರ್‌, ಗಾಯಕ ಪ್ರೊಲೊಯ್ ಚಾಕಿ ಹತ್ಯೆ

Public TV
By Public TV
5 hours ago
Dharwad 2
Dharwad

ಹಾಡಹಗಲೇ ಇಬ್ಬರು ಮಕ್ಕಳ ಅಪಹರಣ – ಮರಳಿ ಪಾಲಕರ ಮಡಿಲು ಸೇರಿದ ಪುಟಾಣಿಗಳು!

Public TV
By Public TV
5 hours ago
RCB
Cricket

WPL 2026 | ರಾಯಲ್‌ ಆಗಿ ವಾರಿಯರ್ಸ್‌ ಚಾಲೆಂಜ್‌ ಗೆದ್ದ ಬೆಂಗಳೂರು – ನಂ.1 ಪಟ್ಟಕ್ಕೆ ಜಿಗಿದ ಆರ್‌ಸಿಬಿ

Public TV
By Public TV
5 hours ago
Mallikarjun Kharge
Districts

ಡಿಕೆ ಶಿವಕುಮಾರ್‌ ನೀವು ಇಲ್ಲಿ ಹುಟ್ಟೋದು ಬೇಡ, ಅಭಿವೃದ್ಧಿ ಮಾಡಿದ್ರೆ ಸಾಕು: ಮಲ್ಲಿಕಾರ್ಜುನ ಖರ್ಗೆ

Public TV
By Public TV
6 hours ago
M.P Renukacharya
Davanagere

ಬಿಎಸ್‌ವೈನ್ನು ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ: ರೇಣುಕಾಚಾರ್ಯ

Public TV
By Public TV
6 hours ago
Husband And Wife
Crime

8 ವರ್ಷಗಳಿಂದ ಸೆಕ್ಸ್‌ಗೆ ಒಪ್ಪದ ಪತ್ನಿಯನ್ನು ಕತ್ತು ಹಿಸುಕಿ ಕೊಂದ ಪತಿ

Public TV
By Public TV
7 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?