ಟಾಲಿವುಡ್ ಸ್ಟಾರ್ ನಟಿ ಕೀರ್ತಿ ಸುರೇಶ್ ಸ್ಯಾಂಡಲ್ವುಡ್ಗೆ ಬರುತ್ತಿದ್ದಾರೆ. ಕನ್ನಡ ಸಿನಿಮಾಗಾಗಿ ಹಚ್ಚಲು ಮಹಾನಟಿ ರೆಡಿಯಾಗಿದ್ದಾರೆ. ಯಂಗ್ ರೆಬೆಲ್ಗೆ ಜೋಡಿಯಾಗಿ ಮಿಂಚಲು ಕೀರ್ತಿ ಸುರೇಶ್ ಸಜ್ಜಾಗಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಟಾಲಿವುಡ್ ಅಂಗಳದವೆರೆಗೂ ಸುದ್ದಿಯಾಗುತ್ತಿದೆ.
ಬ್ಯೂಟಿ ಜತೆ ಪ್ರತಿಭೆಯಿರೋ ನಟಿ ಕೀರ್ತಿ ಸುರೇಶ್, ಮಹಾನಟಿ ಸಕ್ಸಸ್ ನಂತರ ಯಶಸ್ಸು ಕಾಣದೇ ಕಂಗಲಾಗಿದ್ದಾರೆ. ಇದೀಗ ವಿಭಿನ್ನ ಪ್ರಯತ್ನದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಕೀರ್ತಿ ಸುರೇಶ್ ಮನಸ್ಸು ಮಾಡಿದ್ದಾರಂತೆ. ಇದನ್ನೂ ಓದಿ: ಮತ್ತೆ ಬೇಬಿ ಬಂಪ್ ಫೋಟೋ ಹಂಚಿಕೊಂಡ ಪ್ರಣಿತಾ ಸುಭಾಷ್
`ಮದಗಜ’ ಮಹೇಶ್ ನಿರ್ದೇಶನದಲ್ಲಿ ಮೂಡಿ ಬರಲಿರುವ ಅಭಿಷೇಕ್ ಅಂಬರೀಶ್ ನಾಲ್ಕನೇ ಚಿತ್ರಕ್ಕೆ ಕೀರ್ತಿ ಸುರೇಶ್ ಅವರನ್ನು ಕರೆ ತರಲು ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆಯಂತೆ. ಯಂಗ್ ರೆಬೆಲ್ಗೆ ಮಹಾನಟಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಂತ ಸುದ್ದಿ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.
View this post on Instagram
ಸದ್ಯ ಜ್ಯೂ.ರೆಬೆಲ್ ಅಭಿಷೇಕ್ ಬ್ಯಾಡ್ ಮ್ಯಾನರ್ಸ್ ಮತ್ತು ಕಾಳಿ ಚಿತ್ರದಲ್ಲಿ ಬ್ಯುಸಿಯಿದ್ದು, ಈ ಎರಡು ಪ್ರಾಜೆಕ್ಟ್ ನಂತರವೇ ಮಹೇಶ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಿರುವಾಗ ಕೀರ್ತಿ ಸುರೇಶ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳತ್ತಾರಾ ಎಂದು ಕಾದುನೋಡಬೇಕಿದೆ. ಮಹಾನಟಿಯ ಈ ಗಾಸಿಪ್ ಸುದ್ದಿ ನಿಜವಾಗಲಿ ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ.