ಕಾಲಿವುಡ್ ನಟಿ ಮಹಾಲಕ್ಷ್ಮಿ ಹಾಗೂ ರವೀಂದ್ರ ಚಂದ್ರಶೇಖರ್ ಮದುವೆಯಾಗಿ ನೂರು ದಿನಗಳನ್ನು ಪೂರೈಸಿದ್ದಾರೆ. ಈ ಸಂಭ್ರಮವನ್ನು ಸ್ವತಃ ರವೀಂದ್ರ ಅವರೇ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿದ್ದಾರೆ. ನಾನು ಇಂದು ಹ್ಯಾಪಿ ಆಗಿ ಇದ್ದೇನೆ ಅಂದರೆ, ಅದಕ್ಕೆ ನೀನೇ ಕಾರಣ ಅಮ್ಮು ಎಂದು ಅವರು ಬರೆದುಕೊಂಡಿದ್ದಾರೆ. ಕಿರುತೆರೆ ನಟಿಯಾಗಿ ಸಾಕಷ್ಟು ಫೇಮಸ್ ಆಗಿದ್ದ ಮಹಾಲಕ್ಷ್ಮಿ, ನಿರ್ಮಾಪಕ ರವೀಂದ್ರ ಅವರನ್ನು ಮದುವೆಯಾದಾಗ ಅಭಿಮಾನಿಗಳು ಅಚ್ಚರಿ ವ್ಯಕ್ತ ಪಡಿಸಿದ್ದಾರೆ.
ಈ ಜೋಡಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಮಿಸ್ ಮ್ಯಾಚ್ ಜೋಡಿ ಎಂದು ಟ್ರೆಂಡ್ ಕೂಡ ಆಗಿತ್ತು. ಕೆಲ ದಿನಗಳ ನಂತರ ಈ ಜೋಡಿಯ ಹಿನ್ನೆಲೆಯನ್ನು ಕೆದಕಲಾಗಿತ್ತು. ಇಬ್ಬರಿಗೂ ಇದು ಎರಡನೇ ಮದುವೆ ಎಂದು ಹೇಳಲಾಗಿತ್ತು. ಏನೆಲ್ಲ ನೆಗೆಟಿವ್ ಕಾಮೆಂಟ್ ಬಂದರೂ, ಇಬ್ಬರೂ ನಗು ನಗುತ್ತಲೇ ಅವುಗಳನ್ನು ತಗೆದುಕೊಂಡರು. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್
ಮದುವೆ ನಂತರದ ದಿನಗಳನ್ನು ರವೀಂದ್ರ ಆಗಾಗ್ಗೆ ಅಪ್ ಡೇಟ್ ಮಾಡುತ್ತಲೇ ಇರುತ್ತಾರೆ. ತಮ್ಮ ಬದುಕಿಗೆ ಮಹಾಲಕ್ಷ್ಮಿ ಬಂದ ನಂತರ ಸಾಕಷ್ಟು ಬದಲಾವಣೆಗಳನ್ನು ಕಂಡೆ ಎಂದು ಮೊನ್ನೆಯಷ್ಟೇ ಅವರು ಬರೆದುಕೊಂಡಿದ್ದರು. ಇದೀಗ ನೂರರ ಸಂಭ್ರಮಕ್ಕೂ ಅವರು ಭಾವುಕ ಪೋಸ್ಟ್ ಹಾಕಿದ್ದಾರೆ. ಅವರ ಬದುಕಿನಲ್ಲಿ ಉಲ್ಲಾಸ ಬರುವುದಕ್ಕೆ ಕಾರಣ ಪತ್ನಿ ಮಹಾಲಕ್ಷ್ಮಿ ಎಂದು ಅವರಿಗೆ ಕ್ರೆಡಿಟ್ ಕೊಟ್ಟಿದ್ದಾರೆ.
ದುಡ್ಡಿಗಾಗಿ ಮಹಾಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಸುದ್ದಿ ಹರಿ ಬಿಡಲಾಯಿತು. ರವೀಂದ್ರ ಅವರ ಬಾಡಿ ಶೇಮಿಂಗ್ ಮಾಡಲಾಯಿತು. ಅಲ್ಲದೇ, ಇಬ್ಬರ ಬಗ್ಗೆಯೂ ಹಲವು ಗಾಸಿಪ್ ಗಳನ್ನು ಹಂಚಲಾಯಿತು. ಏನೇ ಮಾಡಿದರೂ, ಇಬ್ಬರೂ ಜೋಡಿಯೂ ಖುಷಿ ಖುಷಿಯಾಗಿ ತಗೆದುಕೊಂಡರು. ಹಲವರಿಗೆ ಉತ್ತರವನ್ನೂ ಕೊಟ್ಟರು. ಏನೇ ಆಗಲಿ ಬದುಕು ನಗುನಗುತ್ತಲೇ ಇರುಬೇಕು ಎನ್ನುವುದು ಇವರ ಫಿಲಾಸಫಿ.