ಗುರುರಾಯರು ವೃಂದಾವನಸ್ಥರಾಗಿ 346 ವರ್ಷ – ಮಂತ್ರಾಲಯದಲ್ಲಿ ಮಧ್ಯಾರಾಧನೆ

Public TV
1 Min Read
rcr mantralaya 8

ರಾಯಚೂರು: ಗುರು ರಾಘವೇಂದ್ರರಾಯರು ಸಶರೀರರಾಗಿ ವೃಂದಾವನ ಪ್ರವೇಶಿಸಿದ ದಿನವನ್ನು ಮಂತ್ರಾಲಯದಲ್ಲಿ ಮಧ್ಯಾರಾಧನೆ ದಿನವಾಗಿ ಆಚರಿಸಲಾಗುತ್ತಿದೆ.

ಇಂದು ಶ್ರಾವಣ ಬಹುಳ ದ್ವಿತೀಯ. ಈ ಪವಿತ್ರ ದಿನದಂದೇ ರಾಯರು ವೃಂದಾವನಸ್ಥರಾಗಿ 346 ವರ್ಷಗಳು ಸಂದಿವೆ. ಶ್ರಾವಣ ಬಹುಳ ದ್ವಿತೀಯ ಪವಿತ್ರ ದಿನದಂದು ಗುರು ರಾಯರು ಸಶರೀರರಾಗಿ ವೃಂದಾವನ ಪ್ರವೇಶಿಸಿದ್ದರು.

rcr mantralaya 4

ಮಧ್ಯಾರಾಧನೆಯಾಗಿರುವ ಇವತ್ತು ವೃಂದಾವನಕ್ಕೆ ನೂರಾರು ಲೀಟರ್ ಹಾಲು, ತುಪ್ಪ, ಜೇನುತುಪ್ಪಗಳಿಂದ ವಿಶೇಷವಾದ ಮಹಾಪಂಚಾಮೃತ ಅಭೀಷೇಕ ಮಾಡಲಾಗುತ್ತದೆ. ತಿರುಮಲ ತಿರುಪತಿಯಿಂದ ರಾಯರಿಗೆ ಪವಿತ್ರ ವಸ್ತ್ರಗಳನ್ನ ಮೆರವಣಿಗೆ ಮೂಲಕ ತರಲಾಗುತ್ತದೆ. ಮಧ್ಯಾಹ್ನದ ವೇಳೆ ಹಸ್ತೋದಕ ಹಾಗೂ ಅಲಂಕಾರ ಬ್ರಾಹ್ಮಣರ ಸೇವೆ ನಡೆಯುತ್ತದೆ.

rcr mantralaya 3

ಇಂದು ರಾತ್ರಿ ರಜತ, ಸ್ವರ್ಣ ಹಾಗೂ ನವರತ್ನ ರಥೋತ್ಸವ ಮಠದ ಪ್ರಾಂಗಣದಲ್ಲಿ ಒಟ್ಟಿಗೆ ಜರುಗಲಿವೆ. ಸಪ್ತರಾತ್ರೋತ್ಸವದ ಅಂಗವಾಗಿ ಮಠದ ಪ್ರಾಕಾರದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. ಎರಡು ವರ್ಷಗಳಂತೆ ಈ ಬಾರಿಯೂ ಕೂಡ ರಥೋತ್ಸವದ ವೇಳೆ ಹೆಲಿಕ್ಯಾಪ್ಟರ್ ಮೂಲಕ ಪುಷ್ಪವೃಷ್ಠಿ ನೇರವೇರಿಸಲು ಸಿದ್ಧತೆ ನಡೆದಿದೆ.

rcr mantralaya 9

rcr mantralaya

rcr mantralaya 7

rcr mantralaya 2

rcr mantralaya 6

rcr mantralaya 1

rcr mantralaya 5

Share This Article
Leave a Comment

Leave a Reply

Your email address will not be published. Required fields are marked *