ಜೈಪುರ: ದೇಶದ ಹಲವು ರಾಜ್ಯಗಳಲ್ಲಿ ಜಾನುವಾರುಗಳನ್ನು ಲಂಪಿ ಚರ್ಮರೋಗ ಬಿಟ್ಟು ಬಿಡದೇ ಕಾಡುತ್ತಿದೆ.
ಈ ಮಾರಕ ರೋಗದ ಕಾರಣ ಕೇವಲ ರಾಜಸ್ಥಾನವೊಂದರಲ್ಲೇ 12 ಸಾವಿರ ಮೂಕಜೀವಿಗಳು ಸಾವನ್ನಪ್ಪಿವೆ. ಇದರಿಂದ ಎಚ್ಚೆತ್ತ ರಾಜಸ್ಥಾನ ಸರ್ಕಾರ, ಜಾನುವಾರು ಸಂತೆಗಳನ್ನು ನಿಷೇಧಿಸಿದೆ. ರಾಜಸ್ಥಾನದಲ್ಲಿ ಈವರೆಗೂ 2.81 ಲಕ್ಷ ಹಸುಗಳನ್ನು ಲಂಪಿ ರೋಗ ಬಾಧಿಸಿದೆ. ಇದನ್ನೂ ಓದಿ: ಶಂಕಾಸ್ಪದ ಆಧಾರದಲ್ಲಿ ಆರೋಪಿಗೆ ಶಿಕ್ಷೆ ನೀಡಲು ಸಾಧ್ಯವಿಲ್ಲ: ಸುಪ್ರೀಂ
ಶ್ರೀಗಂಗಾನಗರ ಜಿಲ್ಲೆಯೊಂದರಲ್ಲಿಯೇ 2,511ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿವೆ. ನಂತರ ಬಾರ್ಮರ್ನಲ್ಲಿ 1,619, ಜೋಧ್ಪುರದಲ್ಲಿ 1,581, ಬಿಕಾನೇರ್ನಲ್ಲಿ 1,156, ಜಾಲೋರ್ನಲ್ಲಿ 1,150 ಮತ್ತು ಜಾಲೋರ್ನಲ್ಲಿ 1,138 ಸಾವುಗಳು ವರದಿಯಾಗಿವೆ ಇನ್ನು, ಗುಜರಾತ್, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ್ ಮತ್ತು ಅಂಡಮಾನ್ ನಿಕೋಬಾರ್ನಲ್ಲಿ ನೂರಾರು ಸಂಖ್ಯೆಯ ಪಶುಗಳು ಸಾವನ್ನಪ್ಪಿವೆ.
ಸಾವಿರಾರು ಮೂಕಜೀವಗಳು ಲಂಪಿ ರೋಗಕ್ಕೆ ತತ್ತರಿಸಿವೆ. ಇದಕ್ಕೆ 2 ಸ್ವದೇಶಿ ಲಸಿಕೆಗಳನ್ನು ಐಸಿಎಂಆರ್ ಕಂಡು ಹಿಡಿದಿದೆ. ಇದನ್ನು ಆದಷ್ಟು ಬೇಗ ಉತ್ಪತ್ತಿ ಮಾಡಲು ಕೇಂದ್ರ ಪ್ಲಾನ್ ಮಾಡುತ್ತಿದೆ. ಇದನ್ನೂ ಓದಿ: ಈದ್ಗಾದಲ್ಲಿ ಗಣೇಶೋತ್ಸವಕ್ಕೆ ಹೆಚ್ಚಿದ ಒತ್ತಡ – ಜಮೀರ್ ಬಾಯಿ ಮುಚ್ಚಿಸಿರೋ ಕಾಂಗ್ರೆಸ್ ನಾಯಕರು