ಯಾದಗಿರಿ: ನನ್ನ ವಿರುದ್ಧ ಎಂತಹ ಶಕ್ತಿಗಳು ಒಂದಾದರೂ ನೀವು ನನ್ನ ಕೈ ಬಿಡಬೇಡಿ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಜಿಲ್ಲೆಯ ಗುರುಮಠಕಲ್ನಲ್ಲಿ ಮಾತನಾಡಿದ ಅವರು, ಇಡೀ ದೇಶಕ್ಕೆ ನನ್ನನ್ನು ಗುರುತಿಸಿಕೊಟ್ಟಿದ್ದು ಗುರುಮಠಕಲ್ ಕ್ಷೇತ್ರದ ಜನರು. ಒಟ್ಟು 37 ವರ್ಷ ನನಗೆ ಗೆಲುವು ನೀಡಿದ್ದಾರೆ. ನಾನು ಶಾಸಕನಾಗಿದ್ದಾಗ ವಿಧಾನಸಭಾ ಚುನಾವಣೆಯಲ್ಲಿ 49 ಸಾವಿರ ಮತಗಳ ಲೀಡ್ ನೀಡಿದ್ದರು. ಈಗ ಸಂಸದನಾಗಿದ್ದು, ಅದಕ್ಕಿಂತ ಹೆಚ್ಚು ಲೀಡ್ ನೀಡಬೇಕು ಎಂದು ಕೇಳಿಕೊಂಡರು.
ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತಂದು ನನ್ನ ವಿರುದ್ಧ ಬಹಿರಂಗ ಸಭೆ ನಡೆಸಿದರು. ಅದಕ್ಕೆ ನಾನು ಹೆದರಿದುವುಲ್ಲ. ಕಲಬುರಗಿ ಜನ ನನ್ನ ಹಿಂದೆ ಇದ್ದಾರೆ. ನನ್ನ ಹೋರಾಟ ಪ್ರಧಾನಿ ಮೋದಿ ವಿರುದ್ಧವಲ್ಲ. ಮೋದಿ ತತ್ವ ಹಾಗೂ ಆರ್ ಎಸ್ಎಸ್ ವಿರುದ್ಧ ನನ್ನ ಹೋರಾಟ ಎಂದು ಗುಡುಗಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv