ದರ್ಶನ್, ಯಶ್ ನೋಡೋಕೆ ಮುದ್ದು ಮುದ್ದಾಗಿದ್ದಾರೆ, ಅವರು ಸಿನಿಮಾ ಮಾಡ್ಕೊಂಡು ಇರಲಿ: ಅನ್ನದಾನಿ

Public TV
1 Min Read
annadani

ಬೆಂಗಳೂರು: ನಾವು ಬೇಜಾನ್ ಸ್ಟಾರ್ ಗಳನ್ನು ನೋಡಿದ್ದೇವೆ. ನಟ ದರ್ಶನ್ ಹಾಗೂ ಯಶ್ ನೋಡೋಕೆ ಮುದ್ದು ಮುದ್ದಾಗಿದ್ದಾರೆ. ಅವರು ಸಿನಿಮಾ ಮಾಡ್ಕೊಂಡು ಇರಲಿ ಎಂದು ಜೆಡಿಎಸ್ ಶಾಸಕ ಅನ್ನದಾನಿ ಹೇಳಿದ್ದಾರೆ.

ಡಿ.ಕೆ ಶಿವಕುಮಾರ್ ಮನೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, “ಸ್ಟಾರ್ ಗಳನ್ನು ನಾವು ಬಹಳ ನೋಡಿದ್ದೇವೆ. ರಾಜ್ ಕುಮಾರ್ ಗಿಂತಲೂ ದೊಡ್ಡ ನಟರು, ಸ್ಟಾರ್ ಯಾರಿದ್ದಾರೆ? ಅವರೇ ರಾಜಕೀಯಕ್ಕೆ ಬರಲಿಲ್ಲ. ಯಶ್, ದರ್ಶನ್ ಸಿನಿಮಾದಲ್ಲಿ ಒಳ್ಳೆ ಹೆಸರಿದೆ. ನೋಡೋಕು ಮುದ್ದು ಮುದ್ದಾಗಿದ್ದಾರೆ. ಆದರೆ ಜನರ, ರೈತರ ಕಷ್ಟ ಸುಖ ನೋಡೋರು ನಾವು. ಜನರ ಮಧ್ಯೆ ಇರೋದು ನಾವುಗಳೇ ಹೊರತು ಸಿನಿಮಾ ಸ್ಟಾರ್ ಗಳಲ್ಲ. ನಮಗೆ ದೇವೇಗೌಡರೇ ಸ್ಟಾರ್, ಕುಮಾರಸ್ವಾಮಿ, ಡಿಕೆ ಶಿವಕುಮಾರ್ ನಮಗೆ ಸ್ಟಾರ್ ಗಳು” ಎಂದು ಹೇಳಿ ಹೊಗಳಿದರು.

mnd yash 3

ಬಳಿಕ ಮಾತನಾಡಿದ ಅವರು, ಜನರ ತಿಥಿ ಆದ್ರು, ಮದುವೆ ಆದ್ರೂ ನಾವೇ ಹೋಗೋದು. ಉಳಿದ ಸಿನಿಮಾ ಸ್ಟಾರ್ ಗಳಿಗೆ ಗ್ರೌಂಡ್ ರಿಯಾಲಿಟಿ ಏನು ಗೊತ್ತಿದೆ? ಸಿನಿಮಾ ಮಾಡಲಿ, ಬೇಡ ಅಂತಲ್ಲ. ಆದರೆ ಜನರ ಮಧ್ಯೆ ನಿಜಾವಾಗಿ ಇರೋದು ನಾವು. ಬಡವರ ಮಧ್ಯೆ ಕೆಲಸ ಮಾಡುತ್ತಿರುವುದು ನಾವು. ಸಿನಿಮಾ ಸ್ಟಾರ್ ಗಳೆಲ್ಲ ಯಾವಾಗ ಬಡವರ ಮಧ್ಯೆ ಇರೋದಕ್ಕೆ ಸಾಧ್ಯವಾಗಿದೆ. ಹೀಗಾಗಿ ಜನರು ನಮ್ಮ ಕೈ ಬಿಡಲ್ಲ ಎನ್ನುವ ವಿಶ್ವಾಸವಿದೆ. ಜನರ ಕಾಲಿಗೆ ಬಿದ್ದು ಮತ ಕೇಳ್ತೀವಿ ಎಂದು ಹೇಳಿದ್ದಾರೆ.

ಕೆ.ಆರ್ ಪೇಟೆ ಶಾಸಕ ನಾರಾಯಣಸ್ವಾಮಿ ಅವರು ಯಶ್ ಮತ್ತು ದರ್ಶನ್ ಅವರಿಗೆ ಎಚ್ಚರಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ನೀವು ಮನೆಯಲ್ಲಿ ಇದ್ದರೆ ನಿಮಗೆ ಗೌರವ, ಇಲ್ಲದಿದ್ದರೆ ದೇವೇಗೌಡ ಕುಟುಂಬದ ಬಗ್ಗೆ ಮಾತನಾಡಿದರೆ ನಿಮಗೆ ತಕ್ಕ ಪಾಠ ಕಲಿಸುತ್ತೇವೆ. ಸರ್ಕಾರ ನಮ್ಮದಿದೆ. ಸುಮ್ಮಿನಿದ್ರೆ ಸರಿ. ಇಲ್ಲಾಂದ್ರೆ ನಿಮ್ಮ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸ್ತೀವಿ. ಶೂಟಿಂಗ್ ಮಾಡ್ಕೊಂಡು ಗೌರವವಾಗಿ ಇರಿ. ರಾಜಕಾರಣದ ಬಗ್ಗೆ ಮಾತಾಡಲು ನಿಮಗೆ ಹಕ್ಕಿಲ್ಲ. ನೀವು ಭಾರತ ದೇಶವನ್ನೇ ನೋಡಿಲ್ಲ. ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *