ಅಧಿಕಾರಿಗಳ ಮುಂದೆ ಎರಡು ಕುಟುಂಬಗಳ ನಡುವೆ ಮಾರಾಮಾರಿ

Public TV
1 Min Read
haveri 2

ಹಾವೇರಿ: ಜಮೀನು ವಿವಾದ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೆಲವರಕೊಪ್ಪ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವೀರೇಶ್ ಕುಪಗಡ್ಡಿ ಮತ್ತು ಶಿವಾನಂದ ಕೋಡಿಹಳ್ಳಿ ಕುಟುಂಬದ ನಡುವೆ ಗಲಾಟೆ ನಡೆದಿದೆ. ಈ ಎರಡು ಕುಟುಂಬದವರು ಜಮೀನಿನಲ್ಲಿಯೇ ಕಲ್ಲು ಹಾಗೂ ಮಣ್ಣಿನಹೆಂಟೆಯಿಂದ ಹೊಡೆದಾಡಿಕೊಂಡಿದ್ದಾರೆ. ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಜಮೀನಿಗೆ ಬಂದಿದ್ದ ವೇಳೆ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮಹಿಳೆಯರು ಎಂಬುದನ್ನು ಲೆಕ್ಕಿಸದೇ ಹಲ್ಲೆ ನಡೆದಿದೆ. ಕಲ್ಲು, ಮಣ್ಣಿನ ಹೆಂಟೆಗಳ ಏಟಿಗೆ ಮಹಿಳೆಯರು ಅಸ್ವಸ್ಥಗೊಂಡಿದ್ದಾರೆ.

POLICE JEEP

ಈ ಘಟನೆಯಲ್ಲಿ ಗಾಯಗೊಂಡು ಅಸ್ವಸ್ಥರನ್ನು ಹಾನಗಲ್ ತಾಲೂಕಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಘಟನೆ ಕುರಿತು ಕೋಡಿಹಳ್ಳಿ ಕುಟುಂಬದ ಹತ್ತು ಜನರ ವಿರುದ್ಧ ಜೀವ ಬೆದರಿಕೆ ದೂರನ್ನು ವೀರೇಶ್ ಕುಪಗಡ್ಡಿ ದಾಖಲು ಮಾಡಿದ್ದಾರೆ. ಜೊತೆಗೆ ಕುಪಗಡ್ಡಿ ಕುಟುಂಬದ 12 ಜನರ ವಿರುದ್ಧ ಜೀವ ಬೆದರಿಕೆ ಕೇಸ್‌ನ್ನು ಶಿವಾನಂದ ಕೋಡಿಹಳ್ಳಿ ದಾಖಲಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಆಡೂರು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು, ಪ್ರತಿದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಮನೆಗಾಗಿ ವ್ಯಕ್ತಿಯೊಬ್ಬ ಹೈಟೆನ್ಷನ್ ವಿದ್ಯುತ್‌ ಕಂಬ ಏರಿ ಪ್ರತಿಭಟಿಸಿದ

Share This Article
Leave a Comment

Leave a Reply

Your email address will not be published. Required fields are marked *