ಜಮೀನು ವಿವಾದ – ಯುವಕನ ಕಾಲು ಮುರಿದ ದಾಯಾದಿಗಳು

Public TV
1 Min Read
CRIME 2

ರಾಯಚೂರು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದಾಯಾದಿಗಳು ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಮಾನ್ವಿ ತಾಲೂಕಿನ ಕಟಕನೂರು ಗ್ರಾಮದಲ್ಲಿ ನಡೆದಿದೆ.

FotoJet 6 9

ರಾಜೊಳ್ಳಿಯ ನಿವಾಸಿ ಮಂಜುನಾಥ್ ಹಲ್ಲೆಗೊಳಗಾದ ಯುವಕ. ಸಂಬಂಧಿಯನ್ನುದನ್ನು ನೋಡದೆ ನೋವಿನಿಂದ ನರಳಾಡಿದರೂ ಬಿಡದೆ ಬೆನ್ನತ್ತಿ ಹಲ್ಲೆ ಮಾಡಿದ್ದಾರೆ. ದಾಯಾದಿಗಳಾದ ನರಸಣ್ಣ, ತಿಮ್ಮಪ್ಪ, ವಿರೇಶ್ ಎಂಬುವವರಿಂದ ಈ ಹಲ್ಲೆ ನಡೆದಿದೆ. ಇದನ್ನೂ ಓದಿ: ಮುತ್ತಪ್ಪ ರೈ ಆಪ್ತ ಬಳಗದಲ್ಲಿ ಕೋಲ್ಡ್ ವಾರ್ – ನಟಿ ಅನುಷ್ಕಾ ಶೆಟ್ಟಿ ಸಹೋದರನ ಕೊಲೆಗೆ ಸ್ಕೆಚ್

Police Jeep

ಹೊಲದಲ್ಲಿ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಲು ಹೋದಾಗ, ಒಬ್ಬನೆ ಇರುವುದು ತಿಳಿದು ಹಲ್ಲೆ ಮಾಡಿದ್ದಾರೆ. ಪಿತ್ರಾರ್ಜಿತವಾಗಿ ಬಂದ ಐದುವರೆ ಎಕರೆ ಜಮೀನಿನ ವಿವಾದ ಹಿನ್ನೆಲೆ ಹೊಡೆದಾಟ ನಡೆದಿದೆ. ಮಂಜುನಾಥ್‍ನಿಗೆ ದೊಣ್ಣೆಯಿಂದ ಹೊಡೆದು ಒಂದು ಕಾಲು ಮುರಿದಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾಗೆ ಮುಂಬೈ ಪೊಲೀಸರಿಂದ ಸಮನ್ಸ್

ಗಾಯಾಳು ಮಂಜುನಾಥ್‍ನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸಂಬಂಧ ಯರಗೇರಾ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *