ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ನೋಡುಗರು ಕೂಡ ಅಷ್ಟೇ ಚೆನ್ನಾಗಿ ಸ್ಪಂದಿಸಿದ್ದಾರೆ. ಆದರೆ, ವಿವಾದಗಳು ಮಾತ್ರ ನಿಲ್ಲುತ್ತಿಲ್ಲ. ಸಿನಿಮಾ ರಿಲೀಸ್ ಗೂ ಮುನ್ನ ಈ ಚಿತ್ರವನ್ನು ಬಹಿಷ್ಕಾರ ಮಾಡಬೇಕು ಎಂದು ಹಿಂದೂಪರ ಸಂಘಟನೆಗಳು ಕರೆ ನೀಡಿದ್ದವು. ಸಿನಿಮಾ ರಿಲೀಸ್ ಆದ ಮೇಲೂ ಈ ಬಾಯ್ ಕಾಟ್ ಕೂಗು ನಿಂತಿಲ್ಲ. ಈ ಹಿಂದೆ ಆಮೀರ್ ಖಾನ್ ಹೇಳಿದ ಅಸಹಿಷ್ಣತೆ ಹೇಳಿಕೆ ಸದ್ದು ಮಾಡಿದ್ದಾರೆ. ಈ ಬಾರಿ ಸಿನಿಮಾದ ಕಟೆಂಟ್ ಕಾರಣದಿಂದಾಗಿ ವಿವಾದ ಎದ್ದಿದೆ.
ಈವರೆಗೂ ಭಾರತೀಯರು ಮಾತ್ರ ಬಹಿಷ್ಕಾರದ ಬೆದರಿಕೆ ಹಾಕಿದ್ದರು. ಈ ಬಾರಿ ಇಂಥದ್ದೊಂದು ಕರೆ ನೀಡಿದ್ದು, ಇಂಗ್ಲೆಂಡ್ ಕ್ರಿಕೆಟಿಗ ಮಾಂಟಿ ಪನೇಸರ್. ಈ ಕುರಿತು ಟ್ವಿಟ್ ಮಾಡಿರುವ ಇವರು, ಭಾರತೀಯ ಸೇನೆಗೆ ಮತ್ತು ಸಿಖ್ ಸಮುದಾಯಕ್ಕೆ ಅವಮಾನ ಮಾಡುವಂತಹ ಕಥೆ ಈ ಸಿನಿಮಾದಲ್ಲಿದೆ. ಹಾಗಾಗಿ ಈ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ. ಇದನ್ನೂ ಓದಿ:ಗಾಯಕ ಶಿವಮೊಗ್ಗ ಸುಬ್ಬಣ್ಣ ವಿಧಿವಶ
ಮಾಂಟಿ ಪನೇಸರ್ ಮೂಲತಃ ಪಂಜಾಬಿನವರು. ಅವರು ಇಂಗ್ಲೆಂಡ್ ಪರವಾಗಿ ಕ್ರಿಕೆಟ್ ಆಡಿದವರು. ಈಗಲೂ ಭಾರತ ಮತ್ತು ಇಲ್ಲಿನ ಸಂಸ್ಕೃತಿ ಬಗ್ಗೆ ಅಪಾರ ಗೌರವ ಇಟ್ಟುಕೊಂಡವರು. ಹಾಗಾಗಿಯೇ ಆಮೀರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅರೆಜ್ಞಾನ ಹೊಂದಿದ ಸಿಖ್ ಒಬ್ಬ ಭಾರತೀಯ ಸೇನೆಗೆ ಸೇರುತ್ತಾನೆ ಎಂದು ಸಿನಿಮಾದಲ್ಲಿ ಆಮೀರ್ ತೋರಿಸುವ ಮೂಲಕ ಏನನ್ನು ಹೇಳಲು ಹೊರಟಿದ್ದಾರೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.