ಕೊಪ್ಪಳ: ಸಾಲ ಮರುಪಾವತಿಗೆ ಮೊಬೈಲ್ಗೆ ಸಂದೇಶ ಬಂದ ಹಿನ್ನೆಲೆಯಲ್ಲಿ ಮನನೊಂದ ಜಿಲ್ಲೆಯ ರೈತರೊಬ್ಬರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.
ಯಮನೂರಪ್ಪ ಮೇಟಿ ಸಿಎಂಗೆ ಪತ್ರ ಬರೆದ ರೈತ. ಸಾಲ ಮರುಪಾವತಿಸಿ ಅಂತ ಸಂದೇಶ ಬರುತ್ತಿದ್ದು, ಏನ್ ಮಾಡೊಣ ಹೇಳಿ. ಹಲವು ವರ್ಷಗಳಿಂದ ಮಳೆಯಾಗಿಲ್ಲ, ಈಗ ನಮಗೆ ಸಾಲ ಮರುಪಾವತಿ ಮಾಡೋಕೆ ಆಗಲ್ಲ ಅಂತ ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಯಮನೂರಪ್ಪ ಕಳೆದ 1 ವರ್ಷದ ಹಿಂದೆ ಆಂಧ್ರ ಬ್ಯಾಂಕಿನಲ್ಲಿ 1 ಲಕ್ಷ 70 ಸಾವಿರ ಬೆಳೆ ಸಾಲ ಪಡೆದುಕೊಂಡಿದ್ದರು. ಇದೇ ತಿಂಗಳು 20ರೊಳಗೆ ಸಾಲ ಮರುಪಾವತಿ ಮಾಡಿ ನವೀಕರಣ ಮಾಡಿ ಎಂದು ಅವರ ಮೊಬೈಲ್ ಗೆ ಬ್ಯಾಂಕ್ ನಿಂದ ಸಂದೇಶ ಬಂದಿದೆ. ಇದರಿಂದ ಸ್ಯ ರೈತ ಕಂಗಾಲಾಗಿದ್ದಾರೆ.
ಈ ಹಿಂದೆ ಹಾಸನದ ರೈತರು ತನಗೆ ದಯಾಮರಣ ನೀಡಿ ಅಂತ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದರು. ಕೆರೆ ಕಟ್ಟೆಗೆ, ದನ ಕರುಗಳಗಳಿಗೆ ನೀರು ನೀಡಿ ಇಲ್ಲಾ ದಯಾಮರಣ ನೀಡಿ ಅಂತ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಪಂಚಾಯಿತಿ ವ್ಯಾಪ್ತಿಯ ರೈತರು ಈ ರೀತಿ ಮುಖ್ಯಮಂತ್ರಿಗಳ ಗಮನ ಸೆಳೆಯುವ ಕೆಲಸಕ್ಕೆ ಮುಂದಾಗಿದ್ದರು. ರಾಜ್ಯದಲ್ಲಿ ಮಳೆಯಾಗ್ತಿದ್ರೂ ಇಲ್ಲಿನ ಜನ ಮಾತ್ರ ಬೆಳೆ ಬೆಳೆಯಲು ಆಗ್ತಿಲ್ಲ, ಈಗಾಗಿ ಬದಕಲು ಆಗದ ಸ್ಥಿತಿಯನ್ನು ತಲುಪಿದ್ದೇವೆ. ಈಗಲಾದ್ರೂ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸುವಂತೆ ರೈತರು ಕೋರಿದ್ದರು.
ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿ ವ್ಯಾಪ್ತಿಯಲ್ಲಿ ಮಳೆ ಪ್ರಮಾಣವೂ ಕಡಿಮೆ ಆಗಿದ್ದು, ಅಂತರ್ಜಲ ಸಂಪೂರ್ಣ ಕುಸಿದಿದೆ. ಈ ಸಮಸ್ಯೆ ಕಳೆದ ಮೂರು ದಶಕಗಳಿಂದ ಮುಂದುವರಿದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv