ಕೊಡಗು: ಎಲ್ಲೆಡೆ ಲೋಕಸಭಾ ಚುನಾವಣೆಯ ಅಬ್ಬರ ಮನೆಮಾಡಿದೆ. ಗೆಲುವಿಗಾಗಿ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಜನರು ಮಾತ್ರ ತಮ್ಮ ಸಮಸ್ಯೆ ಬಗೆಹರಿಸೋರು ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳ್ಳುಸೋಗೆ ಗ್ರಾಮಸ್ಥರು ತಮ್ಮ ಬೆಳೆಗಳಿಗೆ ನೀರುಣಿಸಲು ಸೂಕ್ತ ರೀತಿಯಲ್ಲಿ ವಿದ್ಯುತ್ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಮುಂದಾಗಿದ್ದಾರೆ.
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳ್ಳುಸೋಗೆ ಗ್ರಾಮಸ್ಥರು ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಗ್ರಾಮದ ಜಮೀನುಗಳಿಗೆ ಸೂಕ್ತ ರೀತಿಯಲ್ಲಿ ವಿದ್ಯುತ್ ನೀಡುತ್ತಿಲ್ಲ. ಇದರಿಂದ ಬೆಳೆಗಳು ಎಲ್ಲವೂ ಒಣಗಿ ಹೋಗುತ್ತಿದೆ. ಎಷ್ಟೇ ಬಾರಿ ಇಲಾಖೆಗೆ ಹೋಗಿ ಮಾನವಿ ಮಾಡಿದರೂ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ ಎಂದು ಗ್ರಾಮದ ರೈತರು ವಿದ್ಯುತ್ ಇಲಾಖೆಯ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಅತಿವೃಷ್ಠಿಯಾಗಿ ಮಳೆಯ ನೀರು ಜಮೀನಿಗೆ ಬಂದು ಬೆಳೆಗಳು ಸಂಪೂರ್ಣ ಹಾಳಾಗಿತ್ತು. ಮಳೆಗಾಲ ಕಳೆದ ಮೇಲೆ ಇಲ್ಲಿನ ಗ್ರಾಮಸ್ಥರು ರಾಗಿ, ಜೋಳ, ಭತ್ತದ ಬೆಳೆ ಮಾಡಲು ಮುಂದಾದರೂ, ಆದರೆ ಮಳೆಗಾಲದಲ್ಲಿ ವಿದ್ಯುತ್ ಇಲಾಖೆಯ ಕಂಬಗಳು ನೆಲಕ್ಕೆ ಉರಳಿದ್ದವು. ಅಲ್ಲದೇ ಟ್ರಾನ್ಸ್ ಫಾರಂ ಸುಟ್ಟು ಹೋಗಿದ್ದು, 36 ಬೋರ್ ವೇಲ್ ಗೆ ವಿದ್ಯುತ್ ಸರಬರಾಜು ಇಲ್ಲದೆ ಸ್ಥಗಿತಗೊಂಡಿವೆ. ಇಲ್ಲಿಯವರೆಗೂ ಯಾವುದೇ ಕೆಲಸಗಳು ಅಗುತ್ತಿಲ್ಲ. ಬೆಳೆಗಳು ಎಲ್ಲವೂ ಒಣಗಿ ಹೋಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗ್ರಾಮಸ್ಥರು ಮತದಾನ ಮಾಡುವುದಿಲ್ಲ ಎಂಬ ಎಚ್ಚರಿಕೆಯನ್ನು ರವಾನಿಸಿದ್ದಾರೆ.