– ಸತತ 6ನೇ ಬಾರಿ ಅಧ್ಯಕ್ಷರಾಗಿ ಆಯ್ಕೆ
ತುಮಕೂರು: ಸತತ 6ನೇ ಬಾರಿ ತುಮಕೂರು (Tumakuru) ಡಿಸಿಸಿ ಬ್ಯಾಂಕಿನ (DCC Bank) ಅಧ್ಯಕ್ಷರಾಗಿ ಮಾಜಿ ಸಚಿವ ಕೆಎನ್ ರಾಜಣ್ಣ (KN Rajanna) ವಿರಾಜಮಾನರಾಗಿದ್ದಾರೆ.
ಇಂದು ನಡೆದ ಅಧ್ಯಕ್ಷರ ಸ್ಥಾನದ ಚುನಾವಣೆಯಲ್ಲಿ ರಾಜಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಜಣ್ಣರ ಆಪ್ತ ಜಿ.ಜೆ.ರಾಜಣ್ಣ ಪಟ್ಟಕ್ಕೇರಿದ್ದಾರೆ. ಈ ವೇಳೆ ಮಾತನಾಡಿದ ಮಾಜಿ ಸಚಿವ ರಾಜಣ್ಣ, ರೈತರ ಬದುಕನ್ನು ಹಸನಗೊಳಿಸೋದೆ ನಮ್ಮ ಉದ್ದೇಶ. ದೇಶದ ಜಿಡಿಪಿಗೆ ಹಳ್ಳಿಗಳ ರೈತರ ಕೊಡುಗೆ ಅಪಾರ. ಅವರಿಗೆ ಅನುಕೂಲ ಆಗುವ ರೀತಿಯಲ್ಲಿ ಬ್ಯಾಂಕಿನ ಯೋಜನೆ ಇರಲಿದೆ ಎಂದರು. ಇದನ್ನೂ ಓದಿ: ಸೆ.7ಕ್ಕೆ ಬೆಂಗಳೂರಿನಲ್ಲಿ ಅಸ್ಟೆಮಿದ ಐಸಿರ-2025 – ರಾಜಧಾನಿಯಲ್ಲಿ ತುಳುವರ ಅತಿದೊಡ್ಡ ಹಬ್ಬ
ನಬಾರ್ಡ್ನಿಂದ ಅಫೆಕ್ಸ್ ಬ್ಯಾಂಕಿಗೆ 5500 ಕೋಟಿ ರೂ. ಬರಬೇಕಿತ್ತು. ಆದರೆ ಈ ಬಾರಿ ಕೇವಲ 2,340 ಕೋಟಿಯಷ್ಟೇ ಬಂದಿದೆ. ಅದರಿಂದ ಜಿಲ್ಲಾ ಬ್ಯಾಂಕುಗಳಿಗೆ ನಷ್ಟ ಆಗಲಿದೆ. ಸದ್ಯ ರೈತರ ಸಾಲ ಮನ್ನಾ ಮಾಡಲು ನಾನು ಒತ್ತಾಯ ಮಾಡೋದಿಲ್ಲ. ಆದರೆ ಕುಮಾರಸ್ವಾಮಿ ಕಾಲದಲ್ಲಿ ಮನ್ನಾ ಆಗಿದ್ದ ರೈತರ 258 ಕೋಟಿ ರೂ. ಬಿಡುಗಡೆ ಮಾಡುವಂತೆ ಒತ್ತಾಯ ಮಾಡೋದಾಗಿ ತಿಳಿಸಿದರು. ಇದನ್ನೂ ಓದಿ: ಚಾ.ನಗರ| ಐಸ್ ಕ್ರೀಂ, ಗೋಬಿಗಾಗಿ ಕಿಡ್ನ್ಯಾಪ್ ಕಥೆ ಕಟ್ಟಿದ 10 ವರ್ಷದ ಬಾಲಕ
ಜೊತೆಗೆ ಜಿಎಸ್ ಟಿ ಸ್ಲಾಬ್ ಕಡಿಮೆ ಮಾಡಿರುವ ಸರ್ಕಾರದ ಕ್ರಮ ಸ್ವಾಗತ. ಆದರೆ ರಾಜ್ಯಕ್ಕೆ ಆಗುವ ನಷ್ಟ ಕೇಂದ್ರ ಭರಿಸಿಕೊಳ್ಳಬೇಕು ಎಂದರು. ಇದೇ ವೇಳೆ ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಿದ ರಾಜಣ್ಣ, ಬ್ರೈನ್ ಮ್ಯಾಪಿಂಗ್ ಬಗ್ಗೆ ಯಾವನು ಹೇಳಿದ್ದಾನೋ ಅವನಿಗೇ ಕೇಳಿ ಎಂದು ಗರಂ ಆದರು. ರಾಜಣ್ಣ ಮತ್ತೇ ಸಹಕಾರಿ ಸಚಿವರಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ರಾಜಣ್ಣ ಏನಾಗ್ತಾನೋ ಏನೋ ಗೊತ್ತಿಲ್ಲ. ಅದೇನಾಗುತ್ತೋ ಯಾವ ಸಂದರ್ಭಕ್ಕೆ ಅದನ್ನು ಅನುಭವಿಸಿಕೊಂಡು ಹೋಗಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯ | ಸಾಮೂಹಿಕ ಗಣೇಶ ವಿಸರ್ಜನೆ – ಇಂದು, ನಾಳೆ ನಾಗಮಂಗಲದಲ್ಲಿ ನಿಷೇಧಾಜ್ಞೆ