ಚಿಕ್ಕಮಗಳೂರು: ದೇಶದಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮವೇ ದೊಡ್ಡ ತಪ್ಪು ನಿರ್ಧಾರ. ಆ ತಪ್ಪು ನಿರ್ಧಾರಗಳನ್ನ ಮೋದಿ ಸರ್ಕಾರ ಮಾಡುತ್ತಿದೆ. ಆ ನಿರ್ಧಾರಗಳನ್ನ ರಾಜ್ಯ ಸರ್ಕಾವೂ ಮಾಡುತ್ತಿದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಸದನದ ಹೊರಗೆ, ಒಳಗೆ ಹೋರಾಟಕ್ಕೆ ಕಾಂಗ್ರೆಸ್ ಸಿದ್ದತೆ: ಡಿಕೆಶಿ
ಚಿಕ್ಕಮಗಳೂರಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ದೇಶ ಜನಸಂಖ್ಯೆ ಎಷ್ಟು. ನಮ್ಮ ಬಳಿ ಎಷ್ಟು ವ್ಯಾಕ್ಸಿನ್ ಇದೆ. ಅದನ್ನ ನೋಡಿಕೊಂಡು ಹೇಳಿಕೆಗಳನ್ನ ಕೊಡಬೇಕು. ನಾಳೆ ಬೆಳಗ್ಗೆ ಲಸಿಕೆ ನೀಡುತ್ತೇವೆ ಅಂತಾರೆ. ಬೆಳಗ್ಗೆ ಲಸಿಕೆ ಬಂದಿಲ್ಲ ಅಂತಾರೆ. ನಮ್ಮ ಬಳಿ ಇರೋದು ಇಷ್ಟೆ ಎಂದು ಹೇಳಬೇಕು. ನಾಳೆಯಿಂದ 18 ವರ್ಷದವರಿಗೆ ಕೊಡುತ್ತೇವೆ ಅಂತಾರೆ ಆಮೇಲೆ ಒಂದು ವಾರ ಲೇಟ್ ಅಂತಾರೆ ಇದು ಏಕೆ. ಇದನ್ನ ಸರ್ಕಾರವೇ ಹೇಳುವುದು. ನೂರು ತಪ್ಪುಗಳನ್ನ ಕೇಂದ್ರ ಸರ್ಕಾರವೂ ಮಾಡಿದೆ. ರಾಜ್ಯ ಸರ್ಕಾರವೂ ಮಾಡಿದೆ ಎಂದು ಸರ್ಕಾರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ, ಸರ್ಕಾರ ಶಾಲಾ-ಕಾಲೇಜುಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ತಜ್ಞರು ಕೊಡುವ ವರದಿಯನ್ನ ಫಾಲೋ ಮಾಡಬೇಕು. ತಜ್ಞರೇ ತಪ್ಪು ವರದಿ ನೀಡಿದರೆ ಯಾರೇನು ಮಾಡಲು ಸಾಧ್ಯವಿಲ್ಲ. ಆದರೆ ತಜ್ಞರು ಕೊಡುವ ವರದಿಯನ್ನ ಸರ್ಕಾರ ಫಾಲೋ ಮಾಡಬೇಕೆಂದು ಸೂಚಿಸಿದ್ದಾರೆ. ಸರ್ಕಾರ ತಜ್ಞರ ವರದಿಯ ವಿರುದ್ಧ ಕಾರ್ಯಕ್ರಮಗಳನ್ನ ಮಾಡಬಾರದು ಎಂದಿದ್ದಾರೆ.
ತಜ್ಞರು ಸಾಮಾನ್ಯ ಅಭಿಪ್ರಾಯ ನೀಡುವುದಿಲ್ಲ, ಫ್ಯಾಕ್ಟ್ ಹೇಳುತ್ತಾರೆ. ಹಿಂದಿನ ಫಲಿತಾಂಶ ಆಧರಿಸಿ ಮುಂದಾಗೋ ಅನಾಹುತಗಳ ಬಗ್ಗೆ ಅಭಿಪ್ರಾಯ ನೀಡಿರುತ್ತಾರೆ. ತಜ್ಞರ ವರದಿಯನ್ನ ಆಧರಿಸಿ ಸರ್ಕಾರ ಮುಂದುವರೆಯಬೇಕೆಂದು ಸೂಚಿಸಿದ್ದಾರೆ. ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ. ಸರ್ಕಾರ ತಜ್ಞರ ವರದಿ ವಿರುದ್ಧ ನಡೆದದ್ದೇ, ಈಗಾಗಿರೋ ಅನಾಹುತಗಳಿಗೆ ಕಾರಣ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.