ನೆಲಬಾಂಬ್ ಸ್ಫೋಟದಲ್ಲಿ ಕಾರವಾರದ ಯೋಧ ಹುತಾತ್ಮ

Public TV
0 Min Read
KWR YODHA

ಕಾರವಾರ: ನೆಲಬಾಂಬ್ ಸ್ಫೋಟದಿಂದಾಗಿ ಜಿಲ್ಲೆಯ ಕಾರವಾರ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ವಿಜಯಾನಂದ ಸುರೇಶ್ ನಾಯ್ಕ್ (28) ಹುತಾತ್ಮ ಯೋಧ. ಇವರು 2014ರಲ್ಲಿ ಸೈನ್ಯಕ್ಕೆ ಸೇರಿದ್ದು, ಬಿಎಸ್‍ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಛತ್ತೀಸ್ ಘಡದಲ್ಲಿ ನಕ್ಸಲ್ ವಿರುದ್ಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸೋಮವಾರ ಛತ್ತೀಸ್ ಘಡದಲ್ಲಿ ಸಂಭವಿಸಿದ ನೆಲ ಬಾಂಬ್ ಸ್ಪೋಟದಿಂದಾಗಿ ವಿಜಯಾನಂದರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಜಿಲ್ಲೆಯ ನಿವೃತ್ತ ರೆವಿನ್ಯೂ ಇನ್ಸ್ ಪೆಕ್ಟರ್ ಸುರೇಶ್ ನಾಯ್ಕ್ ರವರ ಪುತ್ರರಾಗಿದ್ದಾರೆ. ಇಂದು ಸಂಜೆ ವೇಳೆಗೆ ಮೃತ ಯೋಧನ ಪಾರ್ಥೀವ ಶರೀರ ನಗರಕ್ಕೆ ಆಗಮಿಸುತ್ತದೆ ಎಂದು ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *