ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಚಳಿ ಹೆಚ್ಚಾಗಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂಜಾನೆ ಹಾಗೂ ಸಂಜೆಯ ವೇಳೆ ಚಳಿ ಮುಂದುವರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವೈದ್ಯರು ಜನರಿಗೆ ಬೆಚ್ಚಗಿನ ಉಡುಪು ಧರಿಸುವುದು, ಬಿಸಿ ನೀರು ಬಳಸುವುದು ಹಾಗೂ ಮುಂಜಾನೆ ಮತ್ತು ಸಂಜೆ ವಾಕಿಂಗ್ಗೆ ತೆರಳದಂತೆ ಸಲಹೆ ನೀಡಿದ್ದಾರೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ಚಳಿ ಹಾಗೂ ಮಂಜಿನ ವಾತಾವರಣ ಇರಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ
ಬೆಂಗಳೂರು: 27-16
ಮಂಗಳೂರು: 32-22
ಶಿವಮೊಗ್ಗ: 31-15
ಬೆಳಗಾವಿ: 29-16
ಮೈಸೂರು: 30-16
ಮಂಡ್ಯ: 31-16
ಮಡಿಕೇರಿ: 28-14
ರಾಮನಗರ: 29-15
ಹಾಸನ: 27-13
ಚಾಮರಾಜನಗರ: 30-14
ಚಿಕ್ಕಬಳ್ಳಾಪುರ: 26-14
ಕೋಲಾರ: 26-14
ತುಮಕೂರು: 27-14
ಉಡುಪಿ: 32-21
ಕಾರವಾರ: 33-20
ಚಿಕ್ಕಮಗಳೂರು: 26-13
ದಾವಣಗೆರೆ: 31-15
ಹುಬ್ಬಳ್ಳಿ: 30-13
ಚಿತ್ರದುರ್ಗ: 28-15
ಹಾವೇರಿ: 31-15
ಬಳ್ಳಾರಿ: 29-14
ಗದಗ: 29-13
ಕೊಪ್ಪಳ: 29-14
ರಾಯಚೂರು: 31-16
ಯಾದಗಿರಿ: 31-16
ವಿಜಯಪುರ: 29-14
ಬೀದರ್: 28-12
ಕಲಬುರಗಿ: 31-14
ಬಾಗಲಕೋಟೆ: 30-14




